ತಲ್ಲಾಕಿನ ಕತ್ತಿಗಳು

ಅದು ಕೋಟೆಯಂತೆ ಕಟ್ಟಿದ ಗೋಡೆ
ದಪ್ಪ ದಪ್ಪ ಕಪ್ಪು ಕಲ್ಲಿನ ಕೋಟೆ
ಗೋಡೆಯಾಚೆಗೆ ಸ್ವಚ್ಛಂದ ಪಾರಿವಾಳ
ಗೋಡೆಗಳ ಮಧ್ಯ ನಾನು ಸಮಾಧಿ.

ಬದುಕು ಕಬ್ಬಿಣದ ಕಠಿಣ ಹಾದಿ
ಹಿಮಾಲಯದ ಹಿಮನೀರು ನಾನಾದರೆ
ಬಿಸಿನೀರ ಬುಗ್ಗೆಯಂತೆ ಕುದಿವ ನೀರವನು
ಕಿಲುಬುಗಟ್ಟಿದ ಸಂದು ಗೊಂದುಗಳಲ್ಲಿ
ನನಗಿಲ್ಲ ರಕ್ಷಣೆಯ ಭದ್ರ ಬುನಾದಿ.

ಮೂರು ಮಡದಿಯರಿಟ್ಟು
ನಾಲ್ಕನೆಯವಳ ಮೇಲೆ ಕಣ್ಣು ನೆಟ್ಟು
ಆಕಳಿಸಿ ಕಿಟಕಿಯಲ್ಲಿ ಇಣುಕಿದರೂ ಸಾಕು
ಭಯಗೊಂಡು ಚಿಟ್ಟನೆ ಕಿರುಚುತ್ತಾನೆ.
“ಬೇಗಂ ನನ್ನ ಹುಕ್ಕಾ ಎಲ್ಲಿ?
ತಲೆ ಕೆಟ್ಟಿದೆಯಾ ಪರದೆ ಇಳಿ ಬಿಡು.”
ಇಣುಕಿದೆಯಾ ಜೋಕೆ, ತಲ್ಲಾಕಿನ ಕತ್ತಿ
ತೂಗುತ್ತಿದೆ ನೆತ್ತಿ ಮೇಲೆ ಗೊತ್ತಿಲ್ಲವೆ?

ಚಂದ್ರನ ಹಾಲು ಬೆಳದಿಂಗಳಿಲ್ಲ
ವಸಂತನ ಆಗಮನದ ಸಂಭ್ರಮವಿಲ್ಲ
ನಿಷೇಧದ ಗೋಡೆಗಳ ಮಧ್ಯದಿಂದ
ನಿರಾಸೆಯ ಗೂಡಿನ ಬಂಧಿಸಿ ಒಮ್ಮೆ
ಕೊಡವಿ ಕೇಳಿದಳು “ಹೆದರಿಸದಿರು ನನಗೆ
ತಲ್ಲಾಕಿನ ಕತ್ತಿಯನು” ತಿವಿದು.

ಪಹರೆ ಗೋಡೆಗಳ ಕಲ್ಲು ಶಿಥಿಲವಾಯ್ತು
ಸೋತ ನನ್ನ ಕೈಗಳಲ್ಲೀಗ ಶಕ್ತಿ ಸಂಚಾರವಾಯ್ತು
ಬಂಧನ ಕಳಚಿ ತಿರುಗಿ ನಿಂತು ಕೇಳಿತು.
ನಿನಗೆ ಜನ್ಮ ಕೊಟ್ಟ ತಾಯಿ ನಾನು
ಹೆದರಿಸದಿರು ತಲ್ಲಾಕಿನ ಕತ್ತಿಯಿಂದ
ನೀನವಳ ಮಡಿಲ ಕೂಸು ತಾನೇ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿಂತಿವೆ ಬಿಂಬಗಳು
Next post ಪುಟ್ಟನ ತೋಟ

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…