ಮಣ್ಣೆತ್ತಿನ ಹಬ್ಬ

ಮಣ್ಣೆತ್ತಿನ ಅಮವಾಸೆ ಬಂತು
ಮಕ್ಕಳಿಗೆ ಸಂತೋಷ ತಂತು
ಶಾಲೆಗೆ ಸೂಟಿಯು ಅಂದು
ಕೂಡಿತು ಮಕ್ಕಳ ದಂಡು

ಹೊರಟರು ಎಲ್ಲರೂ ಊರಿನ ಹೊರಗೆ
ಜೊತೆಗೊಯ್ದರು ಬುಟ್ಟಿ ಕುರ್ಚಿಗೆ
ಹುಡುಕುತ ಹೊರಟರು ’ಹುತ್ತ’
ಕೊನೆಗೂ ಕಣ್ಣಿಗೆ ಬಿತ್ತು

ತಂದರು ಹುತ್ತಿನ ಮಣ್ಣ
ಕುಟ್ಟಿ ಮಾಡಿದರು ಪುಡಿಯನ್ನ
ಕಲಸಲು ಮೆತ್ತಗೆ ಅದನು
ಕುಳಿತರು ಮಾಡಲು ಎತ್ತನು

ತಿದ್ದುತ ತೀಡುತ ಮಾಡಿದರು
ಎತ್ತು ದೋಣಿಯ ಎಲ್ಲರೂ
ಕೊಂಬಿಗೆ ಒಣ ಮೆಣಸಿನಕಾಯಿ
ಇಟ್ಟರು ಕಣ್ಣಿಗೆ ಗುಲಗುಂಜಿ

ಕೊರಳಲಿ ಹಣೆಯಲಿ ಸೊಂಕಿನ ಸರ
ಹಾಕಿ ಮಾಡಿದರು ಸಿಂಗಾರ
ಧರಿಸಲು ಗೆಜ್ಜೆ ಗುಂಬ್ರಿ ಸರ
ಅವಸರದಿಂದ ಭಿಕ್ಷೆಗೆ ಹೊರಟರು

ಮಣ್ಣೆತ್ತಿನ ಒಂದು ಕಾಲನು ಮುರಿದು
‘ಎಂಟೆತ್ತಿನಲ್ಲಿ ಕುಂಟೆತ್ತು ಬಂದಿದೆ
ಜ್ವಾಳ ನೀಡ್ರಮ್ಮೋ’…ಎನ್ನುತರಿವರು
ಹಗಲಿಡೀ ಊರನು ಆಡಿದರು

ಭಿಕ್ಷೆಯ ಕಾಳನು ಅಂಗಡಿಗೆ ಹಾಕಿ
ಕೊಂಡರು ಬೆಲ್ಲ ಮಂಡಾಳು ಪುಠಾಣಿ
ನಡೆದರು ಊರ ಹೊರಗಿನ ಹಳ್ಳಕೆ
ಬಿಟ್ಟರು ಮಣ್ಣೆತ್ತುಗಳನು ನೀರಿಗೆ

ಮರಳಲಿ ದುಂಡಗೆ ಕುಳಿತರು
ತಿನಿಸನು ಟವೆಲಲಿ ಸುರುವಿದರು
ಜಾತಿ ಭೇದ ಮರೆತು ತಿಂದರು
ನೀರನು ಕುಡಿದು ಮೇಲೆದ್ದರು

ಹಾಡುತ ಆಡುತ ಮನೆಯ ಕಡೆಗೆ
ಓಡುತ ಹಬ್ಬವ ಮುಗಿಸಿದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪರಮಹಂಸರಿಗೆ
Next post ಶೆರಿಡನ್‌ನ School for Scandal – ಕುಲೀನ ಜಗತ್ತಿನ ಬೂಟಾಟಿಕೆಯ ಬದುಕಿನ ವರ್‍ಣನೆ

ಸಣ್ಣ ಕತೆ

  • ಮೇಷ್ಟ್ರು ಮುನಿಸಾಮಿ

    ಪ್ರಕರಣ ೮ ಮಾರನೆಯ ದಿನ ಬೆಳಗ್ಗೆ ರಂಗಣ್ಣನು, ‘ಶಂಕರಪ್ಪ ! ನೀವೂ ಗೋಪಾಲ ಇಬ್ಬರೂ ನೆಟ್ಟಗೆ ಜನಾರ್ದನಪುರಕ್ಕೆ ಹಿಂದಿರುಗಿ ಹೋಗಿ, ನನ್ನ ಸಾಮಾನುಗಳನ್ನೆಲ್ಲ ಜೋಕೆಯಿಂದ ತೆಗೆದುಕೊಂಡು ಹೋಗಿ.… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಆವಲಹಳ್ಳಿಯಲ್ಲಿ ಸಭೆ

    ಪ್ರಕರಣ ೯ ಹಿಂದೆಯೇ ನಿಶ್ಚೈಸಿದ್ದಂತೆ ಆವಲಹಳ್ಳಿಯಲ್ಲಿ ಉಪಾಧ್ಯಾಯರ ಸಂಘದ ಸಭೆಯನ್ನು ಸೇರಿಸಲು ಏರ್ಪಾಟು ನಡೆದಿತ್ತು. ರಂಗಣ್ಣನು ಹಿಂದಿನ ದಿನ ಸಾಯಂಕಾಲವೇ ಆವಲಹಳ್ಳಿಗೆ ಬಂದು ಮೊಕ್ಕಾಂ ಮಾಡಿದನು. ಸಭೆಯಲ್ಲಿ… Read more…