Home / ಬಾಲ ಚಿಲುಮೆ / ಕವಿತೆ / ಮಣ್ಣೆತ್ತಿನ ಹಬ್ಬ

ಮಣ್ಣೆತ್ತಿನ ಹಬ್ಬ

ಮಣ್ಣೆತ್ತಿನ ಅಮವಾಸೆ ಬಂತು
ಮಕ್ಕಳಿಗೆ ಸಂತೋಷ ತಂತು
ಶಾಲೆಗೆ ಸೂಟಿಯು ಅಂದು
ಕೂಡಿತು ಮಕ್ಕಳ ದಂಡು

ಹೊರಟರು ಎಲ್ಲರೂ ಊರಿನ ಹೊರಗೆ
ಜೊತೆಗೊಯ್ದರು ಬುಟ್ಟಿ ಕುರ್ಚಿಗೆ
ಹುಡುಕುತ ಹೊರಟರು ’ಹುತ್ತ’
ಕೊನೆಗೂ ಕಣ್ಣಿಗೆ ಬಿತ್ತು

ತಂದರು ಹುತ್ತಿನ ಮಣ್ಣ
ಕುಟ್ಟಿ ಮಾಡಿದರು ಪುಡಿಯನ್ನ
ಕಲಸಲು ಮೆತ್ತಗೆ ಅದನು
ಕುಳಿತರು ಮಾಡಲು ಎತ್ತನು

ತಿದ್ದುತ ತೀಡುತ ಮಾಡಿದರು
ಎತ್ತು ದೋಣಿಯ ಎಲ್ಲರೂ
ಕೊಂಬಿಗೆ ಒಣ ಮೆಣಸಿನಕಾಯಿ
ಇಟ್ಟರು ಕಣ್ಣಿಗೆ ಗುಲಗುಂಜಿ

ಕೊರಳಲಿ ಹಣೆಯಲಿ ಸೊಂಕಿನ ಸರ
ಹಾಕಿ ಮಾಡಿದರು ಸಿಂಗಾರ
ಧರಿಸಲು ಗೆಜ್ಜೆ ಗುಂಬ್ರಿ ಸರ
ಅವಸರದಿಂದ ಭಿಕ್ಷೆಗೆ ಹೊರಟರು

ಮಣ್ಣೆತ್ತಿನ ಒಂದು ಕಾಲನು ಮುರಿದು
‘ಎಂಟೆತ್ತಿನಲ್ಲಿ ಕುಂಟೆತ್ತು ಬಂದಿದೆ
ಜ್ವಾಳ ನೀಡ್ರಮ್ಮೋ’…ಎನ್ನುತರಿವರು
ಹಗಲಿಡೀ ಊರನು ಆಡಿದರು

ಭಿಕ್ಷೆಯ ಕಾಳನು ಅಂಗಡಿಗೆ ಹಾಕಿ
ಕೊಂಡರು ಬೆಲ್ಲ ಮಂಡಾಳು ಪುಠಾಣಿ
ನಡೆದರು ಊರ ಹೊರಗಿನ ಹಳ್ಳಕೆ
ಬಿಟ್ಟರು ಮಣ್ಣೆತ್ತುಗಳನು ನೀರಿಗೆ

ಮರಳಲಿ ದುಂಡಗೆ ಕುಳಿತರು
ತಿನಿಸನು ಟವೆಲಲಿ ಸುರುವಿದರು
ಜಾತಿ ಭೇದ ಮರೆತು ತಿಂದರು
ನೀರನು ಕುಡಿದು ಮೇಲೆದ್ದರು

ಹಾಡುತ ಆಡುತ ಮನೆಯ ಕಡೆಗೆ
ಓಡುತ ಹಬ್ಬವ ಮುಗಿಸಿದರು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...