ಪರಮಹಂಸರಿಗೆ

ತನ್ನ ತನ್ನೊಳಗರಿದು ತೋರಿಸಿ
ತನ್ನನೆಲ್ಲರೊಳರಿದು ಸರ್ವರ
ನನ್ನಿಯಂ ಕಂಡಿಹನು ದೈವವ
ಹಿರಿಮೆಯೆಂತೆಂದು.

ಅನ್ಯರಾವುಟಮಿಲ್ಲ ದೇವರು
ತನ್ನ ಹೊರತಿನ್ನಿಲ್ಲ-ಎಲ್ಲರ
ನನ್ಯಭಾವವ ತಳೆಯೆ ಹೊಳೆವುದು
ಸಕಲಮೇಕತ್ವಂ-

ಸರ್ವಸಂಗ ತ್ಯಾಗ, ತನ್ನಿಂ
ದುರ್ವರೆಯ ಹಿತಮೆಂಬ ಪೆರ್ಮೆಯ
ಗರ್ವ ಬಾರದು ಕೃಷ್ಣನಾಡಿತ
ದಂತೆ ನಿರಪೇಕ್ಷ

ಸರ್ವರೊಳು ಸಂಪ್ರೀತಿ ವಿನಯವ
ನಿರ್ವಹಿಸಿ ಷಡ್ವೈರಿ ವರ್ಜಿಸಿ
ಸರ್ವ ಲೋಕವನರಿವುದೇ ಸರಿ
ಯೆಂದನೀ ತವಸಿ.

ಜಗದ ಲೀಲಾರಂಗದಲಿ ಬಗೆ
ಬಗೆಯ ಮಾನವಕೋಟಿ ರೂಪದೊ
ಳೊಗೆದು ನಡೆಯಿಪ ಸೂತ್ರಧಾರಿಯ
ಹಿರಿಮೆಯಿಂತಂದು.

ಬಗೆ ಬಗೆಯ ಚಿತ್ರಗಳ ತೋರಿಸಿ
ಸೊಗಯಿಸಿದ ಶ್ರೀ ರಾಮಕೃಷ್ಣರ
ಬಗೆಗಳಚ್ಚರಿ ಲೋಕ ಮೆಚ್ಚಿತು
ಅವರಿಗೊಲಿದಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದಕ್ಕಿದ ಅವಕಾಶ
Next post ಮಣ್ಣೆತ್ತಿನ ಹಬ್ಬ

ಸಣ್ಣ ಕತೆ

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

cheap jordans|wholesale air max|wholesale jordans|wholesale jewelry|wholesale jerseys