ಪರಮಹಂಸರಿಗೆ

ತನ್ನ ತನ್ನೊಳಗರಿದು ತೋರಿಸಿ
ತನ್ನನೆಲ್ಲರೊಳರಿದು ಸರ್ವರ
ನನ್ನಿಯಂ ಕಂಡಿಹನು ದೈವವ
ಹಿರಿಮೆಯೆಂತೆಂದು.

ಅನ್ಯರಾವುಟಮಿಲ್ಲ ದೇವರು
ತನ್ನ ಹೊರತಿನ್ನಿಲ್ಲ-ಎಲ್ಲರ
ನನ್ಯಭಾವವ ತಳೆಯೆ ಹೊಳೆವುದು
ಸಕಲಮೇಕತ್ವಂ-

ಸರ್ವಸಂಗ ತ್ಯಾಗ, ತನ್ನಿಂ
ದುರ್ವರೆಯ ಹಿತಮೆಂಬ ಪೆರ್ಮೆಯ
ಗರ್ವ ಬಾರದು ಕೃಷ್ಣನಾಡಿತ
ದಂತೆ ನಿರಪೇಕ್ಷ

ಸರ್ವರೊಳು ಸಂಪ್ರೀತಿ ವಿನಯವ
ನಿರ್ವಹಿಸಿ ಷಡ್ವೈರಿ ವರ್ಜಿಸಿ
ಸರ್ವ ಲೋಕವನರಿವುದೇ ಸರಿ
ಯೆಂದನೀ ತವಸಿ.

ಜಗದ ಲೀಲಾರಂಗದಲಿ ಬಗೆ
ಬಗೆಯ ಮಾನವಕೋಟಿ ರೂಪದೊ
ಳೊಗೆದು ನಡೆಯಿಪ ಸೂತ್ರಧಾರಿಯ
ಹಿರಿಮೆಯಿಂತಂದು.

ಬಗೆ ಬಗೆಯ ಚಿತ್ರಗಳ ತೋರಿಸಿ
ಸೊಗಯಿಸಿದ ಶ್ರೀ ರಾಮಕೃಷ್ಣರ
ಬಗೆಗಳಚ್ಚರಿ ಲೋಕ ಮೆಚ್ಚಿತು
ಅವರಿಗೊಲಿದಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದಕ್ಕಿದ ಅವಕಾಶ
Next post ಮಣ್ಣೆತ್ತಿನ ಹಬ್ಬ

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…