ನೂರೇನ್‌ಳ ಅಂತರಂಗ

ಕಣ್ಣು ಮುಚ್ಚಿ ದೀರ್ಘ
ಪ್ರಾರ್ಥನೆ ಸಲ್ಲಿಸಿ,
ತಲೆ ತುಂಬ ಎಳೆದ
ಮುಸುಕಿನಡಿಯಲ್ಲಿ
ಕಣ್ಣ ಮುತ್ತುಗಳ
ಬಳಬಳನೆ ಉದುರಿಸಿ,
ಕರುಳಿಗೆ ಹೊತ್ತಿಕೊಂಡ
ಬೆಂಕಿಯ ಜ್ವಾಲೆ-
ಹೊರ ಚಾಚದಂತೆ
ನಂದಿಸಿ ಮೇಲೇಳುವ
ಹೊಗೆಯ ನೋಡುತ್ತ
ನಿಟ್ಟುಸಿರು ಬಿಡುತ್ತ
ಗೆದ್ದು ಬರುವನೆಂದು
ವಿಜೃಂಭಣೆಯಿಂದ
ಬರಮಾಡಿಕೊಳ್ಳಬೇಕೆನ್ನುವ
ನಿನ್ನಾಸೆಯ ಕೆಂಪುಬಣ್ಣ
ಪತ್ರಿಕೆಯ ‘ತಲ್ಲಾಕ್’
ಶಬ್ದ ಕೇಳಿ ಬಿಳುಪಾಗಿ
ಬದುಕೆಳೆದ ಬರೆಗಳು
ಚಾವಟಿಯ ಏಟುಗಳು
ಅಲ್ಲಾಹ್‌ನಿಗೆ ಸಲ್ಲಿಸಿದ
ವ್ಯರ್ಥ ಪ್ರಾರ್ಥನೆಗಳು
ಮನದ ಬಣ್ಣದ ಕನಸುಗಳು
ಒಡೆದು ಚೂರಾದ ಆಸೆಗಳು
ರೆಕ್ಕೆ ಮುರಿದ ಹಕ್ಕಿಯಂತೆ
ಚಾರ್‌ಮಿನಾರದ ಚೌಕದಲಿ
ಗೋಳಿಟ್ಟ ನೂರೇನ್ನಳ
ಶಾಪ ಆಕಾಶದಲ್ಲಡಗಿರುವ
ಮಿಂಚು ಸೆಳಕು ಬಿಜಲಿಗಳಿಗೆ
ತಟ್ಟದಿರುವದೆಂತು?
*****
(ಟಿಪ್ಪಣಿ:- *ನೂರೇನ್-ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕನ ಮಾಜಿ ಪತ್ನಿ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗುರಿಯಿಟ್ಟು ಬಿಟ್ಟ ಬಾಣದರಿವಿರದೆ
Next post ಭೂದೇವಿಯ ನೋಟ

ಸಣ್ಣ ಕತೆ

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

cheap jordans|wholesale air max|wholesale jordans|wholesale jewelry|wholesale jerseys