ಗುರಿಯಿಟ್ಟು ಬಿಟ್ಟ ಬಾಣದರಿವಿರದೆ

ಗುರಿಯಿಟ್ಟು ಬಿಟ್ಟ ಬಾಣದರಿವಿರದೆ ಹಕ್ಕಿ
ಹಾರುವುದು ರೆಕ್ಕೆ ಬಿಚ್ಚಿ
ನೊರೆ ಮುಗಿಲ ಹಾದು ಸೀಮಾತೀತ ನಭದ
ವಿಸ್ತಾರವನ್ನೆ ನೆಚ್ಚಿ

ಬಿಟ್ಟ ಕ್ಷಣದಿಂದ ಬಿಡುವ ಕ್ಷಣ ತನಕ
ಮಧ್ಯಂತರ ಇರುವ ಬದುಕು
ಕ್ಷಣವೊ ಯುಗವೊ ಅದು ಅಷ್ಟು ಸಾಕೊ ಇನ್ನಷ್ಟು ಬೇಕೊ
ಯಾರು ನಿರ್‍ಧರಿಸಬೇಕು?

ನೆತ್ತದಾಟವೊ ಇದು ಹುಟ್ಟುಸಾವುಗಳ
ಡೊಂಬರಾಟವೊ
ಎತ್ತ ಸಾಗುವುದೆಂಬ ಅರಿವಿರದೆ ಬಿಟ್ಟ
ಕಣ್ಕಟ್ಟಿನಾಟವೊ

ಇದ ಕೇಳಿದರು ಹಿಂದೆ ಇವ ಕೇಳುವರು ಮುಂದೆ
ಇದಕುತ್ತರವೆ ಇಲ್ಲವೆಂದೆ
ಬುದ್ಧ ತಳೆದನು ಮೌನ ಆದಿ ಅನಾದಿಗಳ ಮಧ್ಯೆ
ವರ್‍ತಮಾನವೊಂದೇ

ಹಾರುತಿರುವ ಹಕ್ಕಿ ಹಾರಲೇಬೇಕೀಗ
ಲೆಕ್ಕಿಸದೆ ಬರುವ ಮರಣ
ಬಿಟ್ಟವನು ಕೂಡ ಹಿಂತೆಗೆಯಲಾರ
ಆ ಅಂಥ ಕಟ್ಟಕಡೆಯ ಬಾಣ

ಗಾಳಿ ಬೀಸುವುದು ಮೋಡ ಹಾಯುವುದು
ಹಕ್ಕಿಗಾಗಿ ದುಃಖಿಸದೆ
ನಾಳೆ ಬರದೇ ಅದು ನಿನ್ನೆಯಾಗದೇ
ಮೊನ್ನೆಗಳ ಜತೆ ಸೇರದೇ

ಇದು ಗಹನ ಇದು ಗಂಭೀರ ವಾದಿಯನ
ಇದರೆಡೆಯಲೇ ಬದುಕಬೇಕು ಜೀವ
ಬದುಕಬೇಕು ಕೊನೆಯಿಲ್ಲದಂತೆ ಮೊದಲಿಲ್ಲದಂತೆ
ಒಂದೊಂದೂ ಚಿರಂಜೀವ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಪತ್ಕಾರಿಯಾದ ಬಡವರ ಬೆಳ್ಳಿ ಅಲ್ಯೂಮಿನಿಯಂ
Next post ನೂರೇನ್‌ಳ ಅಂತರಂಗ

ಸಣ್ಣ ಕತೆ

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

cheap jordans|wholesale air max|wholesale jordans|wholesale jewelry|wholesale jerseys