Home / ಲೇಖನ / ವಿಜ್ಞಾನ / ಆಪತ್ಕಾರಿಯಾದ ಬಡವರ ಬೆಳ್ಳಿ ಅಲ್ಯೂಮಿನಿಯಂ

ಆಪತ್ಕಾರಿಯಾದ ಬಡವರ ಬೆಳ್ಳಿ ಅಲ್ಯೂಮಿನಿಯಂ

ಮೂಲತಃ ನಮ್ಮ ಹಿರಿಯರು ಮಣ್ಣಿನ ಮಡಿಕೆ ಕುಡಿಕೆಗಳಲ್ಲಿ ಆಹಾರವನ್ನು ಬೇಯಿಸಿ ಊಟಮಾಡುತ್ತಿದ್ದರು. ನಂತರ ಕಂಚು, ಹಿತ್ತಾಳೆ ಪಾತ್ರೆಗಳಲ್ಲಿ (ಕಲಾಯಿಮಾಡಿದ) ಅಡುಗೆ ಮಾಡಲಾರಂಭಿಸಿದರು. (ಇಂದಿಗೂ ಹಿರಿಯರ ಮನೆಗಳಲ್ಲಿ ಒಂದೊಂದು ಈ ವಸ್ತುಗಳಿವೆ) ಇದಾದ ನಂತರ ಸಂಶೋಧನೆಯ ಫಲವಾಗಿ ಅಲ್ಯೂಮಿನಿಯಂ ಪಾತ್ರೆಗಳು ಅಡುಗೆಮನೆಯನ್ನು ಅಲಂಕರಿಸಿದವು. ಇದೀಗ ಇವುಗಳ ಸ್ಥಳವನ್ನು ಸ್ಟೀಲು, ಫೈಬರ್ ಪಾತ್ರೆಗಳು ಆಕ್ರಮಿಸಿಕೊಂಡಿವೆ. ಆದಾಗ್ಯೂ ಬಡವರ ಮನೆಯಲ್ಲಿ ಕಡಿಮೆದರದಲ್ಲಿ ದೊರೆಯುವ ಈ ವಸ್ತುಗಳಲ್ಲಿ ಇಂದಿಗೂ ಅಡುಗೆ ಮಾಡುವುದನ್ನು ಕಾಣುತ್ತೇವೆ. ದೊಡ್ಡ ದೊಡ್ಡ ಸಮಾರಂಭಗಳಲ್ಲಿ ಇತರೆ ಕಾರಣಗಳಲ್ಲಿ ಈ ಅಲ್ಯೂಮಿನಿಯಂ ಪಾತ್ರೆಗಳನ್ನೇ ಅಡುಗೆಗೆ ಉಪಯೋಗಿಸಲಾಗುತ್ತದೆ. ಈ ಅಲ್ಯೂಮಿನಿಯಂ ಒಂದು ವಿಧದಲ್ಲಿ ‘ಬಡವರ ಬೆಳ್ಳಿ’ ಎಂದೇ ಹೇಳಬಹುದು. ಆದರೆ ಇತ್ತೀಚಿನ ಸಂಶೋಧನೆಗಳಿಂದ ಅಲ್ಯುಮಿನಿಯಂ ಪಾತ್ರೆಗಳಲ್ಲಿ ಅಡುಗೆ ಮಾಡಿ ಸೇವಿಸುವುದು ಆಪತ್ಕಾರಿ, ಎಂದು ದೃಢಪಟ್ಟಿದೆ. ಆರೋಗ್ಯದ ಮೇಲೆ ದುಷ್ಟಪರಿಣಾಮ ಬೀರುತ್ತದೆಂದು ಸಂಶೋಧಕರು ಹೇಳುತ್ತಾರೆ.

ಈ ಪಾತ್ರೆಗಳಲ್ಲಿ ಆಹಾರವನ್ನು ಬೇಯಿಸಿದಾಗ ಲೋಹದ ಸ್ವಲ್ಪಾಂಶ ಕರಗಿ ಆಹಾರದ ಮೂಲಕ ನಮ್ಮ ದೇಹವನ್ನು ಸೇರುತ್ತದೆ. ಆಮ್ಲೀಯ ಆಹಾರವನ್ನು ಹೆಚ್ಚೆಚ್ಚು ಬೇಯಿಸಿ ಸೇವಿಸಿದಂತೆ ಇಲ್ಲವೇ ಅಲ್ಯೂಮಿನಿಯಂ ಪಾತ್ರೆ, ಡಬ್ಬಗಳಲ್ಲಿ ಸಂಗ್ರಹಿಸಿಟ್ಟು ಬಳಸಿದರೆ ಶರೀರದಲ್ಲಿ ಅದರ ಅಂಶ ಸೇರುವುದು ಹೆಚ್ಚು. ಹಾಗೆ ನೋಡಿದರೆ ಆಹಾರ, ನೀರು, ಹಣ್ಣು ತರಕಾರಿ, ಔಷಧ, ಶೃಂಗಾರ ಸಾಧನೆಗಳ ಮೂಲಕ ನಾವು ಅಲ್ಯೂಮಿನಿಯಂ ಅನ್ನು ಸ್ವೀಕರಿಸುತ್ತಲೇ ಇರುತ್ತವೆ. ಇತ್ತೀಚೆಗೆ ಈ ಬಗೆಗೆ ಸಂಶೋಧಿಸಿದ ವಿಜ್ಞಾನಿಗಳು ಅಲ್ಯೂಮಿನಿಯಂ ಬಳಕೆಯಿಂದ ಆಲ್ಜೈಮರನ ರೋಗವುಂಟು ಮಾಡುವಲ್ಲಿ ಇದು ಸಹಾಕಾರಿಯಾಗಿದೆ, ಇದೊಂದು ಮಿದುಳು ನಸಿಶಿಹೋಗುವ ರೋಗವಾಗಿದೆ. ಜತೆಗೆ ಮಿದುಳಿನ ನರಕೋಶಗಳನ್ನು ಅಪಾಯಕ್ಕೀಡು ಮಾಡುವ ಅಸ್ತ್ರ ಈ ಅಲ್ಯೂಮಿನಿಯಂ ಆಗಿದೆ. ಮಣ್ಣು ಮತ್ತು ನೀರಿನ ಜತೆಯಲ್ಲಿಯೇ ಕೆಲಸ ಮಾಡುವ ಜನಾಂಗಕ್ಕೆ ನರಸಂಚಾರದ ಕಾಯಿಲೆಗಳು ಕಾಣಿಸುತ್ತವೆ, ಏಕೆಂದರೆ ಈ ಮಣ್ಣು ನೀರಿನಲ್ಲಿ ಅಲ್ಯುಮಿನಿಯಂ ಹೆಚ್ಚಿನ ಮಟ್ಟದಲ್ಲಿ ಅಂತರ್ಗತವಾಗಿರುತ್ತದೆ. ಶಿಶುಗಳು ಅಲ್ಯುಮಿನಿಯಂನಿಂದಾಗುವ ಅಪಾಯಗಳಿಗೆ ಬೇಗನೇ ಗುರಿಯಾಗುತ್ತಾರೆ. ಅಲ್ಯೂಮಿನಿಯಂ ಪಾತ್ರೆ ಡಬ್ಬಿಗಳಲ್ಲಿ ಹಾಲಿನ ಪುಡಿಯನ್ನಿಟ್ಟು ಬಳೆಸುವುದನ್ನು ನಿಲ್ಲಿಸಬೇಕು. ಅಲ್ಯೂಮಿನಿಯಂ ಹೊಂದಿರುವ ಶೃಂಗಾರ ಸಾಧನಗಳ ಬಳಕೆ ತಪ್ಪಿಸಬೇಕು. ಮುಖಕ್ಕೆ ಬಳಿಯುವ ಕ್ರೀಮಿನಲ್ಲೂ ಅಲ್ಯೂಮಿನಿಯಂ ವಿಶೇಷವಾಗಿರುತ್ತದೆ. ಈ ವಸ್ತು ನಮ್ಮದೇಹಕ್ಕೆ ಅತ್ಯಗತ್ಯ ವಸ್ತು ಅಲ್ಲವೇ ಅಲ್ಲ.

ಅಲ್ಯೂಮಿನಿಯಂ ಪಾತ್ರೆಗಳನ್ನು ಬಳೆಸುವವರ ಬಗೆಗೆ ಪೌಷ್ಠಿಕ ಆಹಾರಗಳ ತಜ್ಞರು ಹೀಗೆ ಹೇಳುತ್ತಾರೆ

೧. ಅಲ್ಯೂಮಿನಿಯಂ ಪಾತ್ರೆಗಳನ್ನು ಬಳಸುವವರು ಅಡುಗೆ ಪಾತ್ರೆಗಳಿಗೆ ಲೇಪನಮಾಡಿರಬೇಕು.
೨. ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಬೇಯಿಸುವಾಗ ಅಧಿಕ ಜ್ವಾಲೆ ಉರಿಸಬಾರದು.
೩. ನೀರಿನ ಮೂಲದ ಆಹಾರ ಬೇಯಿಸುವಲ್ಲಿ ಅಪಾಯ ಕಡಿಮೆ ಇದೆ. ಸಾಧ್ಯವಿದ್ದಷ್ಟು ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಬೇಯಿಸುವಾಗ ಮರದ ಚಮಚೆ (Spoon) ಬಳಸಿ ಆಹಾರವನ್ನು ಕಲೆಸಬೇಕು.
೪. ಅಲ್ಯೂಮಿನಿಯಂ ಪಾತ್ರೆಯಲ್ಲಿ ಆಮ್ಲೀಯ ಆಹಾರಗಳನ್ನು (ಎಣ್ಣೆಪದಾರ್ಥಗಳನ್ನು) ಬೇಯಿಸಬಾರದು. ಉಪ್ಪು ಸಹ ಅಲ್ಯೂಮಿನಿಯಂ ಜೊತೆ ವಕ್ರವಾಗಿ ವರ್ತಿಸುತ್ತದೆ. ಆದ್ದರಿಂದ ಬೇಯಿಸಿದ ಆಹಾರಕ್ಕೆ ಉಪ್ಪು ಬೆರಸುವ ಮುನ್ನ ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗೆ ವರ್ಗಾಯಿಸಿಕೊಳ್ಳಬೇಕು.
೫. ಟೀ ಅಥವಾ ಕಾಫಿಗಳನ್ನು ಸಹ ಹೆಚ್ಚು ಕಾಲ ಅಲ್ಯೂಮಿನಿಯಂ ಪಾತ್ರೆಯಲ್ಲಿ ಬೇಯಿಸುವುದು ಅಪಾಯಕಾರಿಯಾಗಿದೆ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...