ಎಷ್ಟೊಂದು ಆಸೆಯಿಂದ
ನೆಟ್ಟಿದ್ದೆ ಹೂ ಬಳ್ಳಿಯನ್ನು
ಮರಕ್ಕೆ ಬಳ್ಳಿಯ ಸೆರೆ
ಬಳ್ಳಿಗೆ ಮರವಾಸರೆ
ಮರ ಬಳ್ಳಿ, ಬಳ್ಳಿ ಮರ
ಬಂಧ ಅನುಬಂಧ
ಗಟ್ಟಿಯಾಗಿ ಶಾಶ್ವತವಾಗಿ
ನೂರ್ಕಾಲ ನಗಲೆಂದು
ಹೂವಾಗಿ ಕಾಯಾಗಿ ಹಣ್ಣಾಗಿ
ಅಸಂಖ್ಯಾತ ಬಳ್ಳಿಯಾಗಲೆಂದು,
ಆಸೆಗಳೆಲ್ಲಾ ಮರೀಚಿಕೆ
ಮರ ಬಳ್ಳಿ, ಬಳ್ಳಿ ಮರ
ಕೊಡಲಿಲ್ಲ – ಕಳೆಯಲಿಲ್ಲ
ಒಲಿಯಲಿಲ್ಲ ಒಂದಾಗಲಿಲ್ಲ
ಉತ್ತರ ಧ್ರುವ – ದಕ್ಷಿಣ ಧ್ರುವ
ಮರಕ್ಕೆ ತನ್ನದೇ ದರ್ಪ ದೌಲತ್ತು
ಬಳ್ಳಿಗೆ ಸದಾ ಅನುವು ಆಪತ್ತು
ಮರ ಬಾಗಲಿಲ್ಲ.
ಬಳ್ಳಿ ಮೇಲೇರಲಿಲ್ಲ
ಎರಡೂ ಸಮಾನಾಂತರ ರೇಖೆಗಳು
ಯಥೇಚ್ಛವಾಗಿದೆ ಗಾಳಿ, ನೀರು
ಗೊಬ್ಬರ ಬೆಳಕು
ಮರಕ್ಕೆ ಎಷ್ಟಿದ್ದರೂ ಸಾಲದು
ಬಳ್ಳಿಗೆ ಇದ್ದರೂ ಬೇಕಾಗದು
ಬಳ್ಳಿಗೆ ಮರದ ನೆರಳು
ನೆರಳಾಯಿತು ಕೊರಳಿಗೆ ಉರುಳು
ಮರ ಬಾಗಬೇಕು
ಬಳ್ಳಿ ಮೇಲೇರಬೇಕು
ಒಂದನ್ನೊಂದು ತಬ್ಬಿ ನಲಿಯಬೇಕು
ಬೆಳೆಯಬೇಕು ಮುಗಿಲೆತ್ತರ
ನನಸಾದೀತೇ ಕನಸಿನ ಗೋಪುರ.
*****
Related Post
ಸಣ್ಣ ಕತೆ
-
ಮೌನರಾಗ
ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…
-
ವಾಮನ ಮಾಸ್ತರರ ಏಳು ಬೀಳು
"ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…
-
ಮೈಥಿಲೀ
"ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…
-
ಕರಿಗಾಲಿನ ಗಿರಿರಾಯರು
ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…
-
ತನ್ನೊಳಗಣ ಕಿಚ್ಚು
ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…