ಬಳ್ಳಿ ಮರ

ಎಷ್ಟೊಂದು ಆಸೆಯಿಂದ
ನೆಟ್ಟಿದ್ದೆ ಹೂ ಬಳ್ಳಿಯನ್ನು
ಮರಕ್ಕೆ ಬಳ್ಳಿಯ ಸೆರೆ
ಬಳ್ಳಿಗೆ ಮರವಾಸರೆ
ಮರ ಬಳ್ಳಿ, ಬಳ್ಳಿ ಮರ
ಬಂಧ ಅನುಬಂಧ
ಗಟ್ಟಿಯಾಗಿ ಶಾಶ್ವತವಾಗಿ
ನೂರ್ಕಾಲ ನಗಲೆಂದು
ಹೂವಾಗಿ ಕಾಯಾಗಿ ಹಣ್ಣಾಗಿ
ಅಸಂಖ್ಯಾತ ಬಳ್ಳಿಯಾಗಲೆಂದು,
ಆಸೆಗಳೆಲ್ಲಾ ಮರೀಚಿಕೆ
ಮರ ಬಳ್ಳಿ, ಬಳ್ಳಿ ಮರ
ಕೊಡಲಿಲ್ಲ – ಕಳೆಯಲಿಲ್ಲ
ಒಲಿಯಲಿಲ್ಲ ಒಂದಾಗಲಿಲ್ಲ
ಉತ್ತರ ಧ್ರುವ – ದಕ್ಷಿಣ ಧ್ರುವ
ಮರಕ್ಕೆ ತನ್ನದೇ ದರ್ಪ ದೌಲತ್ತು
ಬಳ್ಳಿಗೆ ಸದಾ ಅನುವು ಆಪತ್ತು
ಮರ ಬಾಗಲಿಲ್ಲ.
ಬಳ್ಳಿ ಮೇಲೇರಲಿಲ್ಲ
ಎರಡೂ ಸಮಾನಾಂತರ ರೇಖೆಗಳು
ಯಥೇಚ್ಛವಾಗಿದೆ ಗಾಳಿ, ನೀರು
ಗೊಬ್ಬರ ಬೆಳಕು
ಮರಕ್ಕೆ ಎಷ್ಟಿದ್ದರೂ ಸಾಲದು
ಬಳ್ಳಿಗೆ ಇದ್ದರೂ ಬೇಕಾಗದು
ಬಳ್ಳಿಗೆ ಮರದ ನೆರಳು
ನೆರಳಾಯಿತು ಕೊರಳಿಗೆ ಉರುಳು
ಮರ ಬಾಗಬೇಕು
ಬಳ್ಳಿ ಮೇಲೇರಬೇಕು
ಒಂದನ್ನೊಂದು ತಬ್ಬಿ ನಲಿಯಬೇಕು
ಬೆಳೆಯಬೇಕು ಮುಗಿಲೆತ್ತರ
ನನಸಾದೀತೇ ಕನಸಿನ ಗೋಪುರ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಸಂಧಿಸುವುದು ಇಲ್ಲ
Next post ಮುರಿದವರ್‍ಯಾರು?

ಸಣ್ಣ ಕತೆ

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…