ವಚನ ವಿಚಾರ – ಸಂಧಿಸುವುದು ಇಲ್ಲ

ವಚನ ವಿಚಾರ – ಸಂಧಿಸುವುದು ಇಲ್ಲ

ಗಂಧವ ವಾಯು ಕೊಂಬಾಗ
ಅದ ತಂದು ಕೂಡಿದವರಾರು
ನಿಂದ ಮರಕ್ಕೆ ಸುಗಂಧ ಹುಟ್ಟುವಾಗ
ಅದ ಬಂಧಿಸಿ ತಂದು ಇರಿಸಿದವರಾರು
ಅವು ತಮ್ಮ ಅಂಗಸ್ವಭಾವದಂತೆ
ನಿಂದ ನಿಜವೆ ತಾನಾಗಿ
ಅಲ್ಲಿ ಬೇರೊಂದು ಸಂದೇಹವ ಸಂಧಿಸಲಿಲ್ಲ
ಎಂದನಂಬಿಗಚೌಡಯ್ಯ

ಗಾಳಿಯು ಸುಗಂಧವನ್ನು ಕೊಳ್ಳುವಾಗ ಅವೆರಡನ್ನೂ ಕೂಡಿಸಿದವರು ಯಾರು, ಸುಮ್ಮನೆ ಇರುವ ಮರಕ್ಕೆ ಸುಂಗಧ ಮೂಡಿದಾಗ ಅದನ್ನು ಮರದಲ್ಲಿ ಬಂಧಿಸಿಟ್ಟವರು ಯಾರು-ಇಂಥ ಪ್ರಶ್ನೆಗಳನ್ನು ಅನೇಕ ಕವಿಗಳು ಚೆಲುವಾದ ಪದ್ಯಗಳನ್ನಾಗಿಸಿದ್ದು ನಮಗೆಲ್ಲಾ ಗೊತ್ತೇ ಇದೆ.

ಈ ವಚನದಲ್ಲಿ ಅಂಬಿಗರ ಚೌಡಯ್ಯನು ಇಂಥ ಸಂದೇಹಗಳನ್ನು `ಸಂಧಿಸುವುದು ಇಲ್ಲ’, ಹೀಗೆ ಪ್ರಶ್ನಿಸಿಕೊಳ್ಳುವುದೇ ತಪ್ಪು ಅನ್ನುತ್ತಿದ್ದಾನೆ. ಯಾಕೆಂದರೆ ಸುಗಂಧ, ಗಾಳಿ, ಮರ ಇವೆಲ್ಲ ತಮ್ಮ ಸಹಜ ಸ್ವಭಾವಕ್ಕೆ ತಕ್ಕಂತೆ (ಅಂಗಸ್ವಭಾವದಂತೆ) ವರ್ತಿಸುತ್ತಿವೆ. ಅವು ನಿಜವಾಗಿ ಹೇಗಿವೆಯೋ ಹಾಗೇ ಇವೆ, ಹಾಗೇ ವರ್ತಿಸುತ್ತಿವೆ. ಹೀಗಿರುವಾಗ ಇದೆಲ್ಲ ಏಕೆ, ಹೇಗೆ ಎಂದು ಪ್ರಶ್ನೆ ಕೇಳುವುದು ಹುಸಿಯಲ್ಲವೇ ಎಂದು ಚೌಡಯ್ಯ ಕೇಳುತ್ತಿರುವಂತಿದೆ.

ಕವಿಗಳಿಗೆ ವಿಸ್ಮಯವಿರಬೇಕು ನಿಜ. ಆದರೆ ವಿಸ್ಮಯಪಡುವುದೂ ಒಂದು ಚಟವಾಗಬಾರದು ಎಂದು ಎಚ್ಚರಿಸುವಂತಿದೆ ಈ ವಚನ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜರಾಸಂಧ ಸಂಹಾರ
Next post ಬಳ್ಳಿ ಮರ

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…