ವಚನ ವಿಚಾರ – ಸಂಧಿಸುವುದು ಇಲ್ಲ

ವಚನ ವಿಚಾರ – ಸಂಧಿಸುವುದು ಇಲ್ಲ

ಗಂಧವ ವಾಯು ಕೊಂಬಾಗ
ಅದ ತಂದು ಕೂಡಿದವರಾರು
ನಿಂದ ಮರಕ್ಕೆ ಸುಗಂಧ ಹುಟ್ಟುವಾಗ
ಅದ ಬಂಧಿಸಿ ತಂದು ಇರಿಸಿದವರಾರು
ಅವು ತಮ್ಮ ಅಂಗಸ್ವಭಾವದಂತೆ
ನಿಂದ ನಿಜವೆ ತಾನಾಗಿ
ಅಲ್ಲಿ ಬೇರೊಂದು ಸಂದೇಹವ ಸಂಧಿಸಲಿಲ್ಲ
ಎಂದನಂಬಿಗಚೌಡಯ್ಯ

ಗಾಳಿಯು ಸುಗಂಧವನ್ನು ಕೊಳ್ಳುವಾಗ ಅವೆರಡನ್ನೂ ಕೂಡಿಸಿದವರು ಯಾರು, ಸುಮ್ಮನೆ ಇರುವ ಮರಕ್ಕೆ ಸುಂಗಧ ಮೂಡಿದಾಗ ಅದನ್ನು ಮರದಲ್ಲಿ ಬಂಧಿಸಿಟ್ಟವರು ಯಾರು-ಇಂಥ ಪ್ರಶ್ನೆಗಳನ್ನು ಅನೇಕ ಕವಿಗಳು ಚೆಲುವಾದ ಪದ್ಯಗಳನ್ನಾಗಿಸಿದ್ದು ನಮಗೆಲ್ಲಾ ಗೊತ್ತೇ ಇದೆ.

ಈ ವಚನದಲ್ಲಿ ಅಂಬಿಗರ ಚೌಡಯ್ಯನು ಇಂಥ ಸಂದೇಹಗಳನ್ನು `ಸಂಧಿಸುವುದು ಇಲ್ಲ’, ಹೀಗೆ ಪ್ರಶ್ನಿಸಿಕೊಳ್ಳುವುದೇ ತಪ್ಪು ಅನ್ನುತ್ತಿದ್ದಾನೆ. ಯಾಕೆಂದರೆ ಸುಗಂಧ, ಗಾಳಿ, ಮರ ಇವೆಲ್ಲ ತಮ್ಮ ಸಹಜ ಸ್ವಭಾವಕ್ಕೆ ತಕ್ಕಂತೆ (ಅಂಗಸ್ವಭಾವದಂತೆ) ವರ್ತಿಸುತ್ತಿವೆ. ಅವು ನಿಜವಾಗಿ ಹೇಗಿವೆಯೋ ಹಾಗೇ ಇವೆ, ಹಾಗೇ ವರ್ತಿಸುತ್ತಿವೆ. ಹೀಗಿರುವಾಗ ಇದೆಲ್ಲ ಏಕೆ, ಹೇಗೆ ಎಂದು ಪ್ರಶ್ನೆ ಕೇಳುವುದು ಹುಸಿಯಲ್ಲವೇ ಎಂದು ಚೌಡಯ್ಯ ಕೇಳುತ್ತಿರುವಂತಿದೆ.

ಕವಿಗಳಿಗೆ ವಿಸ್ಮಯವಿರಬೇಕು ನಿಜ. ಆದರೆ ವಿಸ್ಮಯಪಡುವುದೂ ಒಂದು ಚಟವಾಗಬಾರದು ಎಂದು ಎಚ್ಚರಿಸುವಂತಿದೆ ಈ ವಚನ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜರಾಸಂಧ ಸಂಹಾರ
Next post ಬಳ್ಳಿ ಮರ

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

cheap jordans|wholesale air max|wholesale jordans|wholesale jewelry|wholesale jerseys