Home / ಲೇಖನ / ಇತರೆ / ವಚನ ವಿಚಾರ – ಸಂಧಿಸುವುದು ಇಲ್ಲ

ವಚನ ವಿಚಾರ – ಸಂಧಿಸುವುದು ಇಲ್ಲ

ಗಂಧವ ವಾಯು ಕೊಂಬಾಗ
ಅದ ತಂದು ಕೂಡಿದವರಾರು
ನಿಂದ ಮರಕ್ಕೆ ಸುಗಂಧ ಹುಟ್ಟುವಾಗ
ಅದ ಬಂಧಿಸಿ ತಂದು ಇರಿಸಿದವರಾರು
ಅವು ತಮ್ಮ ಅಂಗಸ್ವಭಾವದಂತೆ
ನಿಂದ ನಿಜವೆ ತಾನಾಗಿ
ಅಲ್ಲಿ ಬೇರೊಂದು ಸಂದೇಹವ ಸಂಧಿಸಲಿಲ್ಲ
ಎಂದನಂಬಿಗಚೌಡಯ್ಯ

ಗಾಳಿಯು ಸುಗಂಧವನ್ನು ಕೊಳ್ಳುವಾಗ ಅವೆರಡನ್ನೂ ಕೂಡಿಸಿದವರು ಯಾರು, ಸುಮ್ಮನೆ ಇರುವ ಮರಕ್ಕೆ ಸುಂಗಧ ಮೂಡಿದಾಗ ಅದನ್ನು ಮರದಲ್ಲಿ ಬಂಧಿಸಿಟ್ಟವರು ಯಾರು-ಇಂಥ ಪ್ರಶ್ನೆಗಳನ್ನು ಅನೇಕ ಕವಿಗಳು ಚೆಲುವಾದ ಪದ್ಯಗಳನ್ನಾಗಿಸಿದ್ದು ನಮಗೆಲ್ಲಾ ಗೊತ್ತೇ ಇದೆ.

ಈ ವಚನದಲ್ಲಿ ಅಂಬಿಗರ ಚೌಡಯ್ಯನು ಇಂಥ ಸಂದೇಹಗಳನ್ನು `ಸಂಧಿಸುವುದು ಇಲ್ಲ’, ಹೀಗೆ ಪ್ರಶ್ನಿಸಿಕೊಳ್ಳುವುದೇ ತಪ್ಪು ಅನ್ನುತ್ತಿದ್ದಾನೆ. ಯಾಕೆಂದರೆ ಸುಗಂಧ, ಗಾಳಿ, ಮರ ಇವೆಲ್ಲ ತಮ್ಮ ಸಹಜ ಸ್ವಭಾವಕ್ಕೆ ತಕ್ಕಂತೆ (ಅಂಗಸ್ವಭಾವದಂತೆ) ವರ್ತಿಸುತ್ತಿವೆ. ಅವು ನಿಜವಾಗಿ ಹೇಗಿವೆಯೋ ಹಾಗೇ ಇವೆ, ಹಾಗೇ ವರ್ತಿಸುತ್ತಿವೆ. ಹೀಗಿರುವಾಗ ಇದೆಲ್ಲ ಏಕೆ, ಹೇಗೆ ಎಂದು ಪ್ರಶ್ನೆ ಕೇಳುವುದು ಹುಸಿಯಲ್ಲವೇ ಎಂದು ಚೌಡಯ್ಯ ಕೇಳುತ್ತಿರುವಂತಿದೆ.

ಕವಿಗಳಿಗೆ ವಿಸ್ಮಯವಿರಬೇಕು ನಿಜ. ಆದರೆ ವಿಸ್ಮಯಪಡುವುದೂ ಒಂದು ಚಟವಾಗಬಾರದು ಎಂದು ಎಚ್ಚರಿಸುವಂತಿದೆ ಈ ವಚನ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...