ಆಧುನಿಕ ಅಹಲ್ಯೆಯರು

ಇದ್ದಾರೆ ಕಲಿಯುಗದಲ್ಲೂ
ಅಹಲ್ಯೆಯರು
ಆಧುನಿಕ ಅಹಲ್ಯೆಯರು
ಇಂದು ಎಂದು ಮುಂದೆಂದೂ
ಕೂಪ ಮಂಡೂಕಗಳಂತೆ
ಗಂಡ ಮನೆ ಮಕ್ಕಳು
ತಾವೇ ಕಟ್ಟಿಕೊಂಡ ಕೋಟೆಗೆ
ಬೀಗ ಹಾಕಿಸಿ ಬೀಗದ ಕೈ
ಗಂಡಂದಿರಿಗೆ ಕೊಟ್ಟು
ಸ್ವಾಭಿಮಾನವ ಮೂಲೆಗಿಟ್ಟು
ವ್ಯಕ್ತಿತ್ವವ ಅಡವಿಟ್ಟು
ಬದುಕುತ್ತಾರೆ ಉಂಡುಟ್ಟು
ಒಂದಿಷ್ಟು ಅನ್ನ ಮೈತುಂಬಾ ಚಿನ್ನ
ಐಷಾರಾಮದ ಜೀವನದೊಟ್ಟಿಗೆ
ಇರಲೇಬೇಕು ಮೂರ್ಖರ ಪೆಟ್ಟಿಗೆ
ಶಾಪಗ್ರಸ್ತ ಅಹಲ್ಯೆಯರಿವರು.
ಯಾವ ಕಾಲದ ರಾಮ ಬಂದರೂ
ಪ್ರತಿಕ್ರಿಯಿಸದ ಹೆಬ್ಬಂಡೆಗಳು
ಊರು ಕೊಳ್ಳೆ ಹೊಡೆದರೂ
ನಿಂತ ನೆಲವೇ ಕುಸಿದರೂ
ಶಿಲರೂಪದ ವನಿತೆಯರು
ಸ್ತ್ರೀ ವಿಮೋಚನೆ ಸ್ತ್ರೀಪರ ಕಾಳಜಿ
ಭಾಷಣಗಳಿಗಷ್ಟೇ ಸೀಮಿತ
ಎಡಗಿವಿಯಲ್ಲಿ ಕೇಳಿ ಬಲಗಿವಿಯಿಂದ ಬಿಟ್ಟು
ನಿರಾತಂಕವಾಗಿ ಮನೆ ಸೇರುವ
ಮುಗ್ಧ ಮುತ್ತೈದೆಯರು
ಹಲ್ಲಿಯಂತೆ ಲೊಚ್ಚಗುಟ್ಟಿ
ಪರಿತಾಪ ಪಶ್ಚಾತ್ತಾಪವಿಲ್ಲ
ಈಗಲ್ಲ ನಾಳೆಗಲ್ಲ ಮೂರು ನೂರು
ತಲೆಮಾರು ಕಳೆದರೂ
ಬದಲಾಗದ ನಾರೀಮಣಿಯರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಕೊಟ್ಟ ಕುದುರೆ
Next post ಮುದ್ದು ಕಂದನ ವಚನಗಳು : ಒಂದು

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

cheap jordans|wholesale air max|wholesale jordans|wholesale jewelry|wholesale jerseys