ಇದ್ದಾರೆ ಕಲಿಯುಗದಲ್ಲೂ
ಅಹಲ್ಯೆಯರು
ಆಧುನಿಕ ಅಹಲ್ಯೆಯರು
ಇಂದು ಎಂದು ಮುಂದೆಂದೂ
ಕೂಪ ಮಂಡೂಕಗಳಂತೆ
ಗಂಡ ಮನೆ ಮಕ್ಕಳು
ತಾವೇ ಕಟ್ಟಿಕೊಂಡ ಕೋಟೆಗೆ
ಬೀಗ ಹಾಕಿಸಿ ಬೀಗದ ಕೈ
ಗಂಡಂದಿರಿಗೆ ಕೊಟ್ಟು
ಸ್ವಾಭಿಮಾನವ ಮೂಲೆಗಿಟ್ಟು
ವ್ಯಕ್ತಿತ್ವವ ಅಡವಿಟ್ಟು
ಬದುಕುತ್ತಾರೆ ಉಂಡುಟ್ಟು
ಒಂದಿಷ್ಟು ಅನ್ನ ಮೈತುಂಬಾ ಚಿನ್ನ
ಐಷಾರಾಮದ ಜೀವನದೊಟ್ಟಿಗೆ
ಇರಲೇಬೇಕು ಮೂರ್ಖರ ಪೆಟ್ಟಿಗೆ
ಶಾಪಗ್ರಸ್ತ ಅಹಲ್ಯೆಯರಿವರು.
ಯಾವ ಕಾಲದ ರಾಮ ಬಂದರೂ
ಪ್ರತಿಕ್ರಿಯಿಸದ ಹೆಬ್ಬಂಡೆಗಳು
ಊರು ಕೊಳ್ಳೆ ಹೊಡೆದರೂ
ನಿಂತ ನೆಲವೇ ಕುಸಿದರೂ
ಶಿಲರೂಪದ ವನಿತೆಯರು
ಸ್ತ್ರೀ ವಿಮೋಚನೆ ಸ್ತ್ರೀಪರ ಕಾಳಜಿ
ಭಾಷಣಗಳಿಗಷ್ಟೇ ಸೀಮಿತ
ಎಡಗಿವಿಯಲ್ಲಿ ಕೇಳಿ ಬಲಗಿವಿಯಿಂದ ಬಿಟ್ಟು
ನಿರಾತಂಕವಾಗಿ ಮನೆ ಸೇರುವ
ಮುಗ್ಧ ಮುತ್ತೈದೆಯರು
ಹಲ್ಲಿಯಂತೆ ಲೊಚ್ಚಗುಟ್ಟಿ
ಪರಿತಾಪ ಪಶ್ಚಾತ್ತಾಪವಿಲ್ಲ
ಈಗಲ್ಲ ನಾಳೆಗಲ್ಲ ಮೂರು ನೂರು
ತಲೆಮಾರು ಕಳೆದರೂ
ಬದಲಾಗದ ನಾರೀಮಣಿಯರು.
*****
Related Post
ಸಣ್ಣ ಕತೆ
-
ಪಾಠ
ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…
-
ಮುದುಕನ ಮದುವೆ
ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…
-
ಆ ರಾತ್ರಿ
ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…
-
ಮುಗ್ಧ
ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…
-
ಎರಡು ಪರಿವಾರಗಳು
ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…