ಬದುಕುತ್ತೇನೆ ಗೆಳೆಯಾ
ನೀನಿಲ್ಲದೆಯೂ
ಬದುಕುತ್ತೇನೆ ನಾನು ನಾನಾಗಿ
ನಶ್ವರದ ಪಯಣದಲಿ
ಅಗಲುವಿಕೆ ಅನಿವಾರ್ಯತೆ
ಒಂಟಿತನ ಸಹಜ ತಾನೇ
ಅದೆಷ್ಟು ಸಿಹಿಯಾಗಿದ್ದೆ ಸಕ್ಕರೆಯಂತೆ
ಸವಿಯಾಗಿ ಮಾತನಾಡಿ
ಹೊಂಗನಸಿನಲಿ ತೇಲಾಡಿಸಿ
ಅಣುಅಣುವಿನಲ್ಲಿ ನೀನಾಗಿದ್ದೆ
ಅತಿಯಾದರೆ ಅಮೃತವೂ ವಿಷ
ಅರಿವಾದದ್ದು ನಿನ್ನಿಂದಲೇ
ವಾಮನನಂತಿದ್ದ ನೀನು
ದೇಹದ ಕಣಕಣಗಳನ್ನೆಲ್ಲಾ ವ್ಯಾಪಿಸಿ
ತ್ರಿವಿಕ್ರಮನಾಗಿ ಬೆಳೆದಾಗಲೇ
ನಿಜಸ್ವರೂಪದ ಅರಿವು
ಅಸ್ತಿತ್ವವನ್ನೇ ಬುಡಮೇಲು ಮಾಡಿ
ಪತನದತ್ತ ಹೆಜ್ಜೆ ಇರಿಸುತ್ತಿರುವ
ನಿನ್ನ ಬಿಡದೆ ಗತ್ಯಂತರವಿಲ್ಲ
ಗೆಳೆಯಾ ನಾನು ಬದುಕಬೇಕಲ್ಲ.
*****
Related Post
ಸಣ್ಣ ಕತೆ
-
ಮಾದಿತನ
ಮುಂಗೋಳಿ... ಕೂಗಿದ್ದೆ ತಡ, ಪೆರ್ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…
-
ಕ್ಷಮೆ
ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…
-
ಸಾವಿಗೊಂದು ಸ್ಮಾರಕ
ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…
-
ಪ್ರಕೃತಿಬಲ
ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…
-
ತಿಥಿ
"ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…