ಅಸ್ತಿತ್ವ

ಬದುಕುತ್ತೇನೆ ಗೆಳೆಯಾ
ನೀನಿಲ್ಲದೆಯೂ
ಬದುಕುತ್ತೇನೆ ನಾನು ನಾನಾಗಿ
ನಶ್ವರದ ಪಯಣದಲಿ
ಅಗಲುವಿಕೆ ಅನಿವಾರ್ಯತೆ
ಒಂಟಿತನ ಸಹಜ ತಾನೇ
ಅದೆಷ್ಟು ಸಿಹಿಯಾಗಿದ್ದೆ ಸಕ್ಕರೆಯಂತೆ
ಸವಿಯಾಗಿ ಮಾತನಾಡಿ
ಹೊಂಗನಸಿನಲಿ ತೇಲಾಡಿಸಿ
ಅಣುಅಣುವಿನಲ್ಲಿ ನೀನಾಗಿದ್ದೆ
ಅತಿಯಾದರೆ ಅಮೃತವೂ ವಿಷ
ಅರಿವಾದದ್ದು ನಿನ್ನಿಂದಲೇ
ವಾಮನನಂತಿದ್ದ ನೀನು
ದೇಹದ ಕಣಕಣಗಳನ್ನೆಲ್ಲಾ ವ್ಯಾಪಿಸಿ
ತ್ರಿವಿಕ್ರಮನಾಗಿ ಬೆಳೆದಾಗಲೇ
ನಿಜಸ್ವರೂಪದ ಅರಿವು
ಅಸ್ತಿತ್ವವನ್ನೇ ಬುಡಮೇಲು ಮಾಡಿ
ಪತನದತ್ತ ಹೆಜ್ಜೆ ಇರಿಸುತ್ತಿರುವ
ನಿನ್ನ ಬಿಡದೆ ಗತ್ಯಂತರವಿಲ್ಲ
ಗೆಳೆಯಾ ನಾನು ಬದುಕಬೇಕಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಗುರು ಶಿಷ್ಯರು
Next post ಕಮಲದೆಲೆಯ ಮೇಲೆ

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…