ಬಾ ಗೆಳೆಯ ಬಾ
ಹೃದಯದಂಗಳದಲ್ಲಿ
ಚಿತ್ತಾರ ಬಿಡಿಸು ಬಾ
ಬಾನಿನಂಗಳದಲ್ಲಿ
ಚಂದಿರ ನೀನಾಗು ಬಾ
ನೀ ಬರುವಿಯೆಂದು
ಕಾಯುತಿರುವೆ ಕಾತುರದೆ
ಇಹಪರವ ಮರೆತು
ಹೃದಯ ಬಾಗಿಲು ತೆರೆದು
ಕಣ್ಣಿನಲಿ ಪ್ರೀತಿ ದೀಪ ಬೆಳಗಿಸಿ
ಮುಗುಳ್ಳಗೆಯ ಮಲ್ಲಿಗೆ ಮುಡಿದು
ಮೌನ ಬಂಗಾರದ ಒಡವೆ ತೊಟ್ಟು
ನಿನ್ನ ದಾರಿಗೆ ಹೂ ಚೆಲ್ಲಲು
ಮನದ ಕತ್ತಲೆ ಕಳೆವ
ಜೀವ ಜ್ಯೋತಿ ನೀನಾಗು ಬಾ.
ಬರಡಾದ ಬದುಕಿಗೆ
ಚೈತನ್ಯ ಚಿಲುಮೆಯಾಗು ಬಾ
ಬಯಕೆಗಳ ಬೆಂಕಿಗೆ
ವರುಣ ನೀನಾಗು ಬಾ
ಏಕತಾನದ ಬಾಳಿನಲ್ಲಿ
ಸುಸ್ವರವ ನುಡಿಸು ಬಾ
ರಾಮನಿಗೆ ಕಾಯ್ದ ಶಬರಿಯಂತೆ
ಚಂದ್ರಮಗೆ ಕಾಯುವ ಚಕೋರಿಯಂತೆ
ಭ್ರಮರಂಗೆ ಪರಿತಪಿಸುವ ಹೂವಿನಂತೆ
ಭಕ್ತನಿಗೆ ಕಾಯುವ ಭಗವಂತನಂತೆ
ಬಾ ಗೆಳೆಯ ಬಾ
ಹೃದಯಂಗಳದಲ್ಲಿ
ಚಿತ್ತಾರ ಬಿಡಿಸು ಬಾ.
*****
Related Post
ಸಣ್ಣ ಕತೆ
-
ಆ ರಾಮ!
ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…
-
ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು
ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…
-
ಧರ್ಮಸಂಸ್ಥಾಪನಾರ್ಥಾಯ
ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…
-
ಕರಿಗಾಲಿನ ಗಿರಿರಾಯರು
ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…
-
ಮೃಗಜಲ
"People are trying to work towards a good quality of life for tomorrow instead of living for today, for many… Read more…