ಬಾ ಗೆಳೆಯ ಬಾ

ಬಾ ಗೆಳೆಯ ಬಾ
ಹೃದಯದಂಗಳದಲ್ಲಿ
ಚಿತ್ತಾರ ಬಿಡಿಸು ಬಾ
ಬಾನಿನಂಗಳದಲ್ಲಿ
ಚಂದಿರ ನೀನಾಗು ಬಾ
ನೀ ಬರುವಿಯೆಂದು
ಕಾಯುತಿರುವೆ ಕಾತುರದೆ
ಇಹಪರವ ಮರೆತು
ಹೃದಯ ಬಾಗಿಲು ತೆರೆದು
ಕಣ್ಣಿನಲಿ ಪ್ರೀತಿ ದೀಪ ಬೆಳಗಿಸಿ
ಮುಗುಳ್ಳಗೆಯ ಮಲ್ಲಿಗೆ ಮುಡಿದು
ಮೌನ ಬಂಗಾರದ ಒಡವೆ ತೊಟ್ಟು
ನಿನ್ನ ದಾರಿಗೆ ಹೂ ಚೆಲ್ಲಲು
ಮನದ ಕತ್ತಲೆ ಕಳೆವ
ಜೀವ ಜ್ಯೋತಿ ನೀನಾಗು ಬಾ.
ಬರಡಾದ ಬದುಕಿಗೆ
ಚೈತನ್ಯ ಚಿಲುಮೆಯಾಗು ಬಾ
ಬಯಕೆಗಳ ಬೆಂಕಿಗೆ
ವರುಣ ನೀನಾಗು ಬಾ
ಏಕತಾನದ ಬಾಳಿನಲ್ಲಿ
ಸುಸ್ವರವ ನುಡಿಸು ಬಾ
ರಾಮನಿಗೆ ಕಾಯ್ದ ಶಬರಿಯಂತೆ
ಚಂದ್ರಮಗೆ ಕಾಯುವ ಚಕೋರಿಯಂತೆ
ಭ್ರಮರಂಗೆ ಪರಿತಪಿಸುವ ಹೂವಿನಂತೆ
ಭಕ್ತನಿಗೆ ಕಾಯುವ ಭಗವಂತನಂತೆ
ಬಾ ಗೆಳೆಯ ಬಾ
ಹೃದಯಂಗಳದಲ್ಲಿ
ಚಿತ್ತಾರ ಬಿಡಿಸು ಬಾ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಹೆಸರು ಹೊತ್ತು ತಿರುಗುವವರು
Next post ಗಾದೆ

ಸಣ್ಣ ಕತೆ

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

cheap jordans|wholesale air max|wholesale jordans|wholesale jewelry|wholesale jerseys