ವಚನ ವಿಚಾರ – ಹೆಸರು ಹೊತ್ತು ತಿರುಗುವವರು

ವಚನ ವಿಚಾರ – ಹೆಸರು ಹೊತ್ತು ತಿರುಗುವವರು

ಕಾಗೆಯ ಮರಿ ಕೋಗಿಲೆಯಾಗಬಲ್ಲುದೆ
ಆಡಿನ ಮರಿ ಆನೆಯಾಗಬಲ್ಲುದೆ
ಸೀಳುನಾಯಿ ಸಿಂಹದ ಮರಿಯಾಗಬಲ್ಲುದೆ
ಅರಿವು ಆಚಾರ ಸಮ್ಯಜ್ಞಾನವನರಿಯದೆ
ನಾಮವ ಹೊತ್ತುಕೊಂಡು ತಿರುಗುವ ಗಾವಿಲರ
ಮುಖವ ನೋಡಲಾಗದು ಆಮುಗೇಶ್ವರಾ

[ಗಾವಿಲ-ಹಳ್ಳಿಗ, ಅಶಿಕ್ಷಿತ]

ಆಮುಗೆ ರಾಯಮ್ಮನ ವಚನ. ಅರಿವು, ಅರಿತದ್ದರ ಆಚರಣೆ, ಒಳ್ಳೆಯ ಜ್ಞಾನ ಇವು ಇಲ್ಲದೆ ಇದ್ದರೆ ಕಾಗೆಯ ಮರಿ ತಾನು ಕೋಗಿಲೆ ಎಂದುಕೊಂಡಂತೆ, ಆಡಿನ ಮರಿ ತಾನು ಆನೆಯ ಮರಿ ಎಂದುಕೊಂಡಂತೆ, ಸೀಳುನಾಯಿ ತನ್ನನ್ನು ಸಿಂಹದ ಮರಿ ಎಂದು ಕರೆದುಕೊಂಡಂತೆ. ಹಾಗೆ ಅಂದುಕೊಳ್ಳುವವರ ಮುಖ ನೋಡಬಾರದು ಅನ್ನುತ್ತಾಳೆ.

ತಾವು ಏನೋ ಎಂದು ಹೇಳಿಕೊಳ್ಳುವವರು ನಿಜವಾಗಿಯೂ ಅದು ಆಗಿರುವುದಿಲ್ಲ ಅನ್ನುವ ಸತ್ಯ ಸೂಕ್ಷ್ಮವಾದ ಹೆಣ್ಣು ಪ್ರಜ್ಞೆಗಷ್ಟೇ ಅರಿವಾಗುವ ಸಂಗತಿ ಅನ್ನಿಸುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾರಣಾವತಕ್ಕೆ ಹೊರಟ ಪಾಂಡವರು
Next post ಬಾ ಗೆಳೆಯ ಬಾ

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

cheap jordans|wholesale air max|wholesale jordans|wholesale jewelry|wholesale jerseys