ಸಾವು

“ಸಾವು” ಪದವೇ ಭಯಂಕರ ಭೀಕರ
ಎದೆ ನಡುಗಿಸುವ ಎರಡಕ್ಷರ
ಹುಡುಕಿದರೂ ಸಿಕ್ಕದು ನೀನಿಲ್ಲದ ಜಾಗ
ನಿನ್ನ ನಿರ್ನಾಮಕ್ಕೆ ಮಾಡುತಿಹರು ಮಹಾಯಾಗ
ಸಾವಿಲ್ಲದ ಮನೆಯ ಸಾಸಿವೆ
ತರಲು ಹೇಳಿದ ಬುದ್ಧ
ಸಂಸಾರವೇ ತೊರೆದು ಎದ್ದ
ಬಯಸುವವರಾರು ನಿನಗೆ ಸ್ವಾಗತ
ಬೇಡವೆಂದರೂ ಬರುವ ಅಭ್ಯಾಗತ
ನಿನ್ನಲಿಲ್ಲ ಮೇಲುಕೀಳೆಂಬ ಪಕ್ಷಪಾತ
ವಿಶಾಲ ಮನೋಭಾವದ ಧೀಮಂತ
ನಿನ್ನಲ್ಲಿದೆಯೇ ಕಿಂಚಿತ್ತಾದರೂ ಕರುಣೆ
ಅರಿವಾದರೆ ತಾನೇ ಮಾನವನ ಬವಣೆ
ಬಡವ ಶ್ರೀಮಂತ ಮುದುಕ ಯುವಕ
ಹಾಲು ಹಸುಳೆಯ ಬಿಡದ ಕಿರಾತಕ
ನೀನೆಂದರೆ ನಿರ್ಭಯ ನಿರಾಕಾರ
ನಿರ್ಲಕ್ಷ್ಯ ನಿರ್ಲಜ್ಜತೆಯ ಸಾಕಾರ
ನೀನಿದ್ದೆಡೆ ಭಯ ಆತಂಕ ಸ್ವರೂಪ
ಅನುಕಂಪ ಆರ್ತನಾದದ ಮೂರ್ತರೂಪ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಕಲಿಯಬಾರದು
Next post ವರಾ ಬಂದಾ ಸರಾ ತಂದಾ

ಸಣ್ಣ ಕತೆ

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

cheap jordans|wholesale air max|wholesale jordans|wholesale jewelry|wholesale jerseys