ವಚನ ವಿಚಾರ – ಕಲಿಯಬಾರದು

ವಚನ ವಿಚಾರ – ಕಲಿಯಬಾರದು

ಕಲಿಯಬಾರದು ಕಲಿತನವನು
ಕಲಿಯಬಾರದು ವಿವೇಕಸಹಜವನು
ಕಲಿಯಬಾರದು ದಾನಗುಣವನು
ಕಲಿಯಬಾರದು ಸತ್ಪಥವನು
ಸಕಳೇಶ್ವರದೇವಾ ನೀ ಕರುಣಿಸಿದಲ್ಲದೆ

[ಕಲಿಯಬಾರದು-ಕಲಿಯಲು ಬಾರದು, ಅಸಾಧ್ಯ]

ಸಕಲೇಶಮಾದರಸನ ವಚನ. ಈ ವಚನದ ಮೊದಲ ನಾಲ್ಕು ಸಾಲುಗಳಲ್ಲಿರುವ `ಕಲಿಯಬಾರದು’ ಎಂಬ ಮಾತನ್ನು ನಿಷೇಧದ ಅರ್ಥದಲ್ಲಿ ನೋಡಬಾರದು. ಕಲಿಯಲು-ಬಾರದು, ಕಲಿಯಲು ಸಾಧ್ಯವಿಲ್ಲ ಎನ್ನುವ ಅರ್ಥವಿದೆ ಅದಕ್ಕೆ ವಚನಗಳಲ್ಲಿ `ಬಾರದು’ ಎಂಬುದು ನಿಷೇಧದ ಅರ್ಥದಲ್ಲಿ ಅಲ್ಲ, ಅಸಾಧ್ಯ ಅನ್ನುವ ಅರ್ಥದಲ್ಲಿ ಬಳಕೆಯಾಗಿದೆ.

ಕಲಿತನ ಅಥವ ಶೌರ್ಯ, ವಿವೇಕ, ಸಹಜತೆ, ದಾನದ ಗುಣ, ಬದುಕಿನ ಒಳ್ಳೆಯ ದಾರಿ ಇವೆಲ್ಲ ಕಲಿಯಲು ಸಾಧ್ಯವಿಲ್ಲದ ಸಂಗತಿಗಳು. ಸ್ವಭಾವಸಹಜವಾಗಿ, ಸಹ-ಜ, ಹುಟ್ಟಿನಿಂದ ಬಂದ ಗುಣಗಳಾಗಿದ್ದರೆ ಇರುತ್ತವೆ, ಇಲ್ಲದಿದ್ದರೆ ಇಲ್ಲ.

ಹಾಗೆ ಸ್ವ-ಭಾವವನ್ನು ಮೀರಲಾಗದ್ದರಿಂದ ಸ್ವ-ಭಾವವೇ ವ್ಯಕ್ತಿಯ ವಿಧಿ. ಬದಲಾಗುವುದಿದ್ದರೆ ಅದು ಸಕಳೇಶ್ವರನ ಕರುಣೆಯಿಂದಷ್ಟೇ ಎನ್ನುತ್ತಾನೆ. ದೊಡ್ಡ ವಾಗ್ವಾದಕ್ಕೆ ಕಾರಣವಾಗಬಲ್ಲ ನಿಲುವು ಇದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏಕಲವ್ಯನ ಗುರುದಕ್ಷಿಣೆ
Next post ಸಾವು

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…