Home / ಲೇಖನ / ಇತರೆ / ವಚನ ವಿಚಾರ – ಕಲಿಯಬಾರದು

ವಚನ ವಿಚಾರ – ಕಲಿಯಬಾರದು

ಕಲಿಯಬಾರದು ಕಲಿತನವನು
ಕಲಿಯಬಾರದು ವಿವೇಕಸಹಜವನು
ಕಲಿಯಬಾರದು ದಾನಗುಣವನು
ಕಲಿಯಬಾರದು ಸತ್ಪಥವನು
ಸಕಳೇಶ್ವರದೇವಾ ನೀ ಕರುಣಿಸಿದಲ್ಲದೆ

[ಕಲಿಯಬಾರದು-ಕಲಿಯಲು ಬಾರದು, ಅಸಾಧ್ಯ]

ಸಕಲೇಶಮಾದರಸನ ವಚನ. ಈ ವಚನದ ಮೊದಲ ನಾಲ್ಕು ಸಾಲುಗಳಲ್ಲಿರುವ `ಕಲಿಯಬಾರದು’ ಎಂಬ ಮಾತನ್ನು ನಿಷೇಧದ ಅರ್ಥದಲ್ಲಿ ನೋಡಬಾರದು. ಕಲಿಯಲು-ಬಾರದು, ಕಲಿಯಲು ಸಾಧ್ಯವಿಲ್ಲ ಎನ್ನುವ ಅರ್ಥವಿದೆ ಅದಕ್ಕೆ ವಚನಗಳಲ್ಲಿ `ಬಾರದು’ ಎಂಬುದು ನಿಷೇಧದ ಅರ್ಥದಲ್ಲಿ ಅಲ್ಲ, ಅಸಾಧ್ಯ ಅನ್ನುವ ಅರ್ಥದಲ್ಲಿ ಬಳಕೆಯಾಗಿದೆ.

ಕಲಿತನ ಅಥವ ಶೌರ್ಯ, ವಿವೇಕ, ಸಹಜತೆ, ದಾನದ ಗುಣ, ಬದುಕಿನ ಒಳ್ಳೆಯ ದಾರಿ ಇವೆಲ್ಲ ಕಲಿಯಲು ಸಾಧ್ಯವಿಲ್ಲದ ಸಂಗತಿಗಳು. ಸ್ವಭಾವಸಹಜವಾಗಿ, ಸಹ-ಜ, ಹುಟ್ಟಿನಿಂದ ಬಂದ ಗುಣಗಳಾಗಿದ್ದರೆ ಇರುತ್ತವೆ, ಇಲ್ಲದಿದ್ದರೆ ಇಲ್ಲ.

ಹಾಗೆ ಸ್ವ-ಭಾವವನ್ನು ಮೀರಲಾಗದ್ದರಿಂದ ಸ್ವ-ಭಾವವೇ ವ್ಯಕ್ತಿಯ ವಿಧಿ. ಬದಲಾಗುವುದಿದ್ದರೆ ಅದು ಸಕಳೇಶ್ವರನ ಕರುಣೆಯಿಂದಷ್ಟೇ ಎನ್ನುತ್ತಾನೆ. ದೊಡ್ಡ ವಾಗ್ವಾದಕ್ಕೆ ಕಾರಣವಾಗಬಲ್ಲ ನಿಲುವು ಇದು.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...