ಮಾನವನ ಮೂರನೇ ಹಂತವೇ ಮುಪ್ಪು
ಮುಪ್ಪು ಬಂದಾಗ ಬೆಪ್ಪು ಎನ್ನುವವರೇ ಹೆಚ್ಚು
ಬಾಲ್ಯ ಕಳೆದು ಯೌವ್ವನ ಮಾಗಿದಂತೆ
ಮುಪ್ಪು ಮೆಲ್ಲಗೆ ಅಡಿಯಿಡುವುದಂತೆ
ಮುಪ್ಪಿನ ಕಲ್ಪನೆಯೇ ಭೀಕರ
ಊರಿಗೆ ದೂರ ಸಾವಿಗೆ ಹತ್ತಿರ
ರಾಜ ಮಹಾರಾಜ ಜಗದೇಕಸುಂದರಿ
ಪಕ್ಷಪಾತವಿಲ್ಲದೆ ತಬ್ಬುವ ಮುಪ್ಪು
ಬಾಲ್ಯದ ಮುಗ್ಧರೂಪ, ಯೌವ್ವನದ ಮೈಮಾಟ
ಕಾಲನಾಟದಲ್ಲಿ ಬಣ್ಣ ಬಯಲು
ಬಿಸಿಲಿಗೆ ಮಂಜು ಕರಗಿದಂತೆ
ಕಬಳಿಸಿದೆ ಕಾಲ ಸೂರ್ಯ
ಯೌವ್ವನದ ಬಿಸಿ ಕರಗಿ ಹೆಪ್ಪಾಗಿ ಸುಕ್ಕಾಗಿ
ಹೊಸದೊಂದು ಮಾಯಾಲೋಕ
ಮುಪ್ಪು ಬರುವ ಮುನ್ನ ಸಾವೇ
ಶ್ರೇಷ್ಠ ಎನ್ನುವ ಮಂದಿ.
ಅರ್ವತ್ತಕ್ಕೆ ಅರಳು ಮರುಳೆಂದು
ಮಾಡುವರು ಮೂಲೆಗುಂಪು
ಮುಪ್ಪೆಂದರೆ ಪರವಾಲಂಬನೆಯ ಸ್ವೀಕಾರ
ಪರಿತಾಪ ಪಶ್ಚಾತ್ತಾಪಗಳ ಆಗರ.
*****
Related Post
ಸಣ್ಣ ಕತೆ
-
ಕಲ್ಪನಾ
ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…
-
ಹುಟ್ಟು
ಶಾದಿ ಮಹಲ್ನ ಒಳ ಆವರಣದಲ್ಲಿ ದೊಡ್ಡ ಹಾಲ್ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…
-
ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ
ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್ಗೆ ಕಾಲ್ಚೆಂಡು ಆಟ… Read more…
-
ಯಿದು ನಿಜದಿ ಕತೀ…
ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ... ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ, ವುಗಾದಿ… Read more…
-
ಮೋಟರ ಮಹಮ್ಮದ
ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…