ಬಾಲ್ಯ

ಅಂಗಳದೆ ಆಡುವ ಅನುಜರ
ಕಂಡಾಗ ಅರಳುವ ಮನ
ಕ್ಷಣದೊಳಗೆ ಮುದುಡಿದ ತಾವರೆ
ಹಿಂದಡಿಯಿಟ್ಟ ನೆನಪಿನ ಬಂಡಿ
ಮಸ್ತಿಷ್ಕದೊಳಗೆ ಅಡಗಿದ
ರಸನಿಮಿಷಗಳ ಹುಂಡಿ
ಅಮ್ಮನ ಲಾಲಿ ಹಾಡಿನಷ್ಟೇ ಮಧುರ
ಬಾಲ್ಯದ ಸವಿನೆನಪುಗಳ ಹಂದರ
ಅಪ್ಪನಿಗೆ ಸಡ್ಡು ಹೊಡೆದು
ಹಿಂಬಾಗಿಲಿನಿಂದ ಜಾರಿ
ಗೆಳತಿಯರ ಹಿಂಡು ಸೇರಿ
ಆಡಿ ನಲಿದ ಆಟಗಳೆಷ್ಟು
ಕುಣಿದು ಕುಪ್ಪಳಿಸಿದ ದಿನಗಳೆಷ್ಟೋ
ಕುಂಟೆಬಿಲ್ಲೆ ಅಳುಗುಣಿ ಚೌಕಾಬಾರ
ಮುಗ್ಧ ಹೃದಯದ ಹಾಡಿನ ಪ್ರಸ್ತಾರ
ಎದ್ದು ಬಿದ್ದು ಕದ್ದು ಬಂದು
ಅಮ್ಮನ ಬೈಗುಳ ತಿಂದು ಹೊದ್ದು
ಮೂಲೆಯಲಿ ಸರಬರ ಸದ್ದು
ಅಮ್ಮನೇ ಸೋತು ಗುದ್ದು ಹಾಕಿ
ಮುದ್ದು ಮಾಡಿ ರಮಿಸಿ
ಕೈತುತ್ತು ತಿನಿಸುವಾಗಿನ ಕ್ಷಣ
ಮಡಿಲಲ್ಲಿ ಮಗುವಾಗಿ ಮಲಗಿದಂತೆ
ಜಗದ ಆಗುಹೋಗುಗಳೆಲ್ಲ ಸ್ತಬ್ಧವಾದಂತೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಜ್ಞಾನದ ಎರಡು ಮುಖ
Next post ಆಹಾ ಅಮೃತ ಸಮಯ ಸುಮಧುರ

ಸಣ್ಣ ಕತೆ

  • ಅನಾವರಣ

    "ಹಲೋ-ಸ್ವೀಟಿ-ಗುಡ್ ಮಾರ್‍ನಿಂಗ್-" ಡಾಕ್ಟರ್ ವಿಜಯಾ ಪ್ರೊಫೆಸರ್‍ಗೆ ವಿಶ್ ಮಾಡಿದಳು. ಆತ್ಮವಿಶ್ವಾಸದ, ಧೈರ್‍ಯ-ಆಸೆ ಭರವಸೆ ಹುಟ್ಟಿಸುವ ಪುಟ್ಟ ತೀಕ್ಷ್ಣವಾದ ಕಣ್ಣುಗಳ ಸ್ವಲ್ಪವೇ ಸ್ಥೂಲಕಾಯದ ಎತ್ತರದ ನಿಲುವಿನ ಮಧ್ಯ ವಯಸ್ಸು… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…