ಬಾಲ್ಯ

ಅಂಗಳದೆ ಆಡುವ ಅನುಜರ
ಕಂಡಾಗ ಅರಳುವ ಮನ
ಕ್ಷಣದೊಳಗೆ ಮುದುಡಿದ ತಾವರೆ
ಹಿಂದಡಿಯಿಟ್ಟ ನೆನಪಿನ ಬಂಡಿ
ಮಸ್ತಿಷ್ಕದೊಳಗೆ ಅಡಗಿದ
ರಸನಿಮಿಷಗಳ ಹುಂಡಿ
ಅಮ್ಮನ ಲಾಲಿ ಹಾಡಿನಷ್ಟೇ ಮಧುರ
ಬಾಲ್ಯದ ಸವಿನೆನಪುಗಳ ಹಂದರ
ಅಪ್ಪನಿಗೆ ಸಡ್ಡು ಹೊಡೆದು
ಹಿಂಬಾಗಿಲಿನಿಂದ ಜಾರಿ
ಗೆಳತಿಯರ ಹಿಂಡು ಸೇರಿ
ಆಡಿ ನಲಿದ ಆಟಗಳೆಷ್ಟು
ಕುಣಿದು ಕುಪ್ಪಳಿಸಿದ ದಿನಗಳೆಷ್ಟೋ
ಕುಂಟೆಬಿಲ್ಲೆ ಅಳುಗುಣಿ ಚೌಕಾಬಾರ
ಮುಗ್ಧ ಹೃದಯದ ಹಾಡಿನ ಪ್ರಸ್ತಾರ
ಎದ್ದು ಬಿದ್ದು ಕದ್ದು ಬಂದು
ಅಮ್ಮನ ಬೈಗುಳ ತಿಂದು ಹೊದ್ದು
ಮೂಲೆಯಲಿ ಸರಬರ ಸದ್ದು
ಅಮ್ಮನೇ ಸೋತು ಗುದ್ದು ಹಾಕಿ
ಮುದ್ದು ಮಾಡಿ ರಮಿಸಿ
ಕೈತುತ್ತು ತಿನಿಸುವಾಗಿನ ಕ್ಷಣ
ಮಡಿಲಲ್ಲಿ ಮಗುವಾಗಿ ಮಲಗಿದಂತೆ
ಜಗದ ಆಗುಹೋಗುಗಳೆಲ್ಲ ಸ್ತಬ್ಧವಾದಂತೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಜ್ಞಾನದ ಎರಡು ಮುಖ
Next post ಆಹಾ ಅಮೃತ ಸಮಯ ಸುಮಧುರ

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

cheap jordans|wholesale air max|wholesale jordans|wholesale jewelry|wholesale jerseys