ಬಾಲ್ಯ

ಅಂಗಳದೆ ಆಡುವ ಅನುಜರ
ಕಂಡಾಗ ಅರಳುವ ಮನ
ಕ್ಷಣದೊಳಗೆ ಮುದುಡಿದ ತಾವರೆ
ಹಿಂದಡಿಯಿಟ್ಟ ನೆನಪಿನ ಬಂಡಿ
ಮಸ್ತಿಷ್ಕದೊಳಗೆ ಅಡಗಿದ
ರಸನಿಮಿಷಗಳ ಹುಂಡಿ
ಅಮ್ಮನ ಲಾಲಿ ಹಾಡಿನಷ್ಟೇ ಮಧುರ
ಬಾಲ್ಯದ ಸವಿನೆನಪುಗಳ ಹಂದರ
ಅಪ್ಪನಿಗೆ ಸಡ್ಡು ಹೊಡೆದು
ಹಿಂಬಾಗಿಲಿನಿಂದ ಜಾರಿ
ಗೆಳತಿಯರ ಹಿಂಡು ಸೇರಿ
ಆಡಿ ನಲಿದ ಆಟಗಳೆಷ್ಟು
ಕುಣಿದು ಕುಪ್ಪಳಿಸಿದ ದಿನಗಳೆಷ್ಟೋ
ಕುಂಟೆಬಿಲ್ಲೆ ಅಳುಗುಣಿ ಚೌಕಾಬಾರ
ಮುಗ್ಧ ಹೃದಯದ ಹಾಡಿನ ಪ್ರಸ್ತಾರ
ಎದ್ದು ಬಿದ್ದು ಕದ್ದು ಬಂದು
ಅಮ್ಮನ ಬೈಗುಳ ತಿಂದು ಹೊದ್ದು
ಮೂಲೆಯಲಿ ಸರಬರ ಸದ್ದು
ಅಮ್ಮನೇ ಸೋತು ಗುದ್ದು ಹಾಕಿ
ಮುದ್ದು ಮಾಡಿ ರಮಿಸಿ
ಕೈತುತ್ತು ತಿನಿಸುವಾಗಿನ ಕ್ಷಣ
ಮಡಿಲಲ್ಲಿ ಮಗುವಾಗಿ ಮಲಗಿದಂತೆ
ಜಗದ ಆಗುಹೋಗುಗಳೆಲ್ಲ ಸ್ತಬ್ಧವಾದಂತೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಜ್ಞಾನದ ಎರಡು ಮುಖ
Next post ಆಹಾ ಅಮೃತ ಸಮಯ ಸುಮಧುರ

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…