ಜೀವನ್ಮುಕ್ತರು

ಅಂದು ರಾತ್ರಿ ಮಲಗಿದವರು
ಏಳಲೇ ಇಲ್ಲ
ಕಳಚಿ ನಡೆದರು ದೂರ ದೂರ
ಬದುಕಿನ ಬವಣೆಗಳನ್ನೆಲ್ಲಾ.
ವರವೋ ಶಾಪವೋ ಅವರಿಗೆ ಭೂಕಂಪ
ಜನತೆ ತೋರುತಿದೆ ನಿಟ್ಟುಸಿರಿನ ಅನುಕಂಪ
ಕನಸನ್ನು ಕನಸಾಗಿಯೇ ಉಳಿಸಿ
ನಶ್ವರ ಬಾಳಿನ ಸತ್ಯವ ತಿಳಿಸಿ
ನಡೆದರು ದೂರ ಬಹು ದೂರ
ಗೊತ್ತು ಗುರಿ ಇಲ್ಲದ ತೀರ
ತಮ್ಮೆದೆಯ ಕುಡಿಗಳೇನಿತ್ತೋ
ಆಸೆ ಆಕಾಂಕ್ಷೆಯ ಹೊನಲೆಷ್ಟಿತ್ತೋ
ಅರಿಯುವರಾರು ಬಾಳಿನ ಗುಟ್ಟು
ಎಲ್ಲವನ್ನು ಉಳಿದವರಿಗಾಗಿ ಬಿಟ್ಟು
ನಡೆದರು ದೂರ ಬಹು ದೂರ
ಇಳಿಸಿ ಬದುಕಿನ ಭಾರ
ಕನಸುಗಳು ಕಮರಿದವು ಉಸಿರಿನೊಂದಿಗೆ
ಬಯಕೆಗಳೂ ಬೂದಿಯಾದವು ಚಿತೆಯೊಂದಿಗೆ
ನೋವು ನಲಿವುಗಳ ಬೇಲಿ ಕಿತ್ತೆಸೆದು
ನಡೆದರು ದೂರ ಬಹು ದೂರ
ಪಡೆದು ನೆಮ್ಮದಿಯ ತೀರ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ನಿಜವೇ?
Next post ದೇವ ಗಂಗಾಧರನ ಗಾಯನ

ಸಣ್ಣ ಕತೆ

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

cheap jordans|wholesale air max|wholesale jordans|wholesale jewelry|wholesale jerseys