ಅಂದು ರಾತ್ರಿ ಮಲಗಿದವರು
ಏಳಲೇ ಇಲ್ಲ
ಕಳಚಿ ನಡೆದರು ದೂರ ದೂರ
ಬದುಕಿನ ಬವಣೆಗಳನ್ನೆಲ್ಲಾ.
ವರವೋ ಶಾಪವೋ ಅವರಿಗೆ ಭೂಕಂಪ
ಜನತೆ ತೋರುತಿದೆ ನಿಟ್ಟುಸಿರಿನ ಅನುಕಂಪ
ಕನಸನ್ನು ಕನಸಾಗಿಯೇ ಉಳಿಸಿ
ನಶ್ವರ ಬಾಳಿನ ಸತ್ಯವ ತಿಳಿಸಿ
ನಡೆದರು ದೂರ ಬಹು ದೂರ
ಗೊತ್ತು ಗುರಿ ಇಲ್ಲದ ತೀರ
ತಮ್ಮೆದೆಯ ಕುಡಿಗಳೇನಿತ್ತೋ
ಆಸೆ ಆಕಾಂಕ್ಷೆಯ ಹೊನಲೆಷ್ಟಿತ್ತೋ
ಅರಿಯುವರಾರು ಬಾಳಿನ ಗುಟ್ಟು
ಎಲ್ಲವನ್ನು ಉಳಿದವರಿಗಾಗಿ ಬಿಟ್ಟು
ನಡೆದರು ದೂರ ಬಹು ದೂರ
ಇಳಿಸಿ ಬದುಕಿನ ಭಾರ
ಕನಸುಗಳು ಕಮರಿದವು ಉಸಿರಿನೊಂದಿಗೆ
ಬಯಕೆಗಳೂ ಬೂದಿಯಾದವು ಚಿತೆಯೊಂದಿಗೆ
ನೋವು ನಲಿವುಗಳ ಬೇಲಿ ಕಿತ್ತೆಸೆದು
ನಡೆದರು ದೂರ ಬಹು ದೂರ
ಪಡೆದು ನೆಮ್ಮದಿಯ ತೀರ
*****
Related Post
ಸಣ್ಣ ಕತೆ
-
ಪತ್ರ ಪ್ರೇಮ
ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…
-
ತೊಳೆದ ಮುತ್ತು
ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…
-
ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು
ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…
-
ದಿನಚರಿಯ ಪುಟದಿಂದ
ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್ಪ್ರೆಸ್ ಬಸ್ಸುಗಳು… Read more…
-
ಪ್ರಥಮ ದರ್ಶನದ ಪ್ರೇಮ
ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…