ಅಂದು ರಾತ್ರಿ ಮಲಗಿದವರು
ಏಳಲೇ ಇಲ್ಲ
ಕಳಚಿ ನಡೆದರು ದೂರ ದೂರ
ಬದುಕಿನ ಬವಣೆಗಳನ್ನೆಲ್ಲಾ.
ವರವೋ ಶಾಪವೋ ಅವರಿಗೆ ಭೂಕಂಪ
ಜನತೆ ತೋರುತಿದೆ ನಿಟ್ಟುಸಿರಿನ ಅನುಕಂಪ
ಕನಸನ್ನು ಕನಸಾಗಿಯೇ ಉಳಿಸಿ
ನಶ್ವರ ಬಾಳಿನ ಸತ್ಯವ ತಿಳಿಸಿ
ನಡೆದರು ದೂರ ಬಹು ದೂರ
ಗೊತ್ತು ಗುರಿ ಇಲ್ಲದ ತೀರ
ತಮ್ಮೆದೆಯ ಕುಡಿಗಳೇನಿತ್ತೋ
ಆಸೆ ಆಕಾಂಕ್ಷೆಯ ಹೊನಲೆಷ್ಟಿತ್ತೋ
ಅರಿಯುವರಾರು ಬಾಳಿನ ಗುಟ್ಟು
ಎಲ್ಲವನ್ನು ಉಳಿದವರಿಗಾಗಿ ಬಿಟ್ಟು
ನಡೆದರು ದೂರ ಬಹು ದೂರ
ಇಳಿಸಿ ಬದುಕಿನ ಭಾರ
ಕನಸುಗಳು ಕಮರಿದವು ಉಸಿರಿನೊಂದಿಗೆ
ಬಯಕೆಗಳೂ ಬೂದಿಯಾದವು ಚಿತೆಯೊಂದಿಗೆ
ನೋವು ನಲಿವುಗಳ ಬೇಲಿ ಕಿತ್ತೆಸೆದು
ನಡೆದರು ದೂರ ಬಹು ದೂರ
ಪಡೆದು ನೆಮ್ಮದಿಯ ತೀರ
*****
Related Post
ಸಣ್ಣ ಕತೆ
-
ಅಪರೂಪದ ಬಾಂಧವ್ಯ
ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…
-
ಯಿದು ನಿಜದಿ ಕತೀ…
ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ... ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ, ವುಗಾದಿ… Read more…
-
ಮಿಂಚಿನ ದೀಪ
ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…
-
ಮೌನರಾಗ
ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…
-
ವಾಮನ ಮಾಸ್ತರರ ಏಳು ಬೀಳು
"ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…