Home / ಕವನ / ಕವಿತೆ / ಗುಹೇಶ್ವರ

ಗುಹೇಶ್ವರ

ಆದಿ ಅನಾದಿ ಇಲ್ಲದ ಬಟ್ಟ ಬಯಲಿನ
ಹೂವಿನ ಕಂಪನ ನೀರಿನ ಕಂಪನ ಮನಸ್ಸಿನ
ಕಂಪನ ದೇಹದ ಕಂಪನ ಎಲ್ಲವನ್ನೂ ಸಮೀಕರಿಸಿ,
ಉಂಟು ಇಲ್ಲ ಎಂಬವರ ಲೆಕ್ಕಕ್ಕೆ ಚುಕ್ತಾ ಮಾಡುವ
ಮಿಂಚು ಕತ್ತಲೆಗಳ ನಡುವೆ ಸೆಳೆವ ಹೊಸ ಪದ
ಪ್ರಯೋಗ ಗುಹೇಶ್ವರ.

ದೇಶ ಕಾಲಗಳ ಇತಿಹಾಸದ ಪುಟಗಳ ಸರಿಸಿ,
ಇದ್ದ ಬಯಲಿನ ಘಮ ಘಮ ಆಕಾಶಕ್ಕೆ
ಪಸರಿಸಿ, ಎಲ್ಲಾ ದಿಕ್ಕುಗಳಲ್ಲಿ ಬೆಳಕ ಕಿರಣಗಳ
ಹರಡಿ ಹಾಸಿ ಇದು ಕಾಣಿ ನಿಜದ ನೆರಳು
ಪದಗಳ ಅರ್ಥಗಳ ಗಂಟು ಕಟ್ಟಿ ಮಾಯೆಯ
ಗೆಜ್ಜೆಯ ಹೊಸ ರಿಂಗಣ ಗುಹೇಶ್ವರ.

ಉರಿದ ಶರೀರದ ಬೂದಿ ಚೆಲ್ಲಿ ಹರಡಿ ಹಾಸಿದ
ಬಯಲು ಅಣು ಅಣುವಿನಲಿ ಲೋಕದ ತುಂಬ
ಮೊಗ್ಗುಗಳು ಹೂಗಳಾಗಿ ಅರಳಿ ಘಮ ಹರಡಿ,
ಅವನ ಪ್ರಜೆಯ ಒಳಗೂಡಿದ ಒಳ ಹರವು
ಮೋಹ ಮರುಳದ ಲಯವಾಗಿ ಕರಗಿದ ಜಂಗಮ
ಸರಸವಾದ ಗುಹೇಶ್ವರ.

ಕಣ್ಣು ಕಕ್ಷೆ ಮೀರಿ ಅರಳಿದ ಆಂತರ್ಯದ ಚೆಲುವು
ಮಾಯೆಯ ಮುಸಕ ಎಳೆದು ಆ ಮಾತು ಈ
ಮಾತ ಜಗದ ಸಂತೆಯ ತುಂಬ ಶರಣ
ಸತಿ ಲಿಂಗಪತಿ, ಭವದ ದಾವತಿ, ಶರೀರದ
ಅವಸ್ಥೆ ಅಭೇಧ್ಯನರಿಯವರ ಮರಳು ಮಾಡಿದ
ಗುಹೇಶ್ವರ ನಿರಂತರ ಸಾವಧಾನಿ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...