ಗುಹೇಶ್ವರ

ಆದಿ ಅನಾದಿ ಇಲ್ಲದ ಬಟ್ಟ ಬಯಲಿನ
ಹೂವಿನ ಕಂಪನ ನೀರಿನ ಕಂಪನ ಮನಸ್ಸಿನ
ಕಂಪನ ದೇಹದ ಕಂಪನ ಎಲ್ಲವನ್ನೂ ಸಮೀಕರಿಸಿ,
ಉಂಟು ಇಲ್ಲ ಎಂಬವರ ಲೆಕ್ಕಕ್ಕೆ ಚುಕ್ತಾ ಮಾಡುವ
ಮಿಂಚು ಕತ್ತಲೆಗಳ ನಡುವೆ ಸೆಳೆವ ಹೊಸ ಪದ
ಪ್ರಯೋಗ ಗುಹೇಶ್ವರ.

ದೇಶ ಕಾಲಗಳ ಇತಿಹಾಸದ ಪುಟಗಳ ಸರಿಸಿ,
ಇದ್ದ ಬಯಲಿನ ಘಮ ಘಮ ಆಕಾಶಕ್ಕೆ
ಪಸರಿಸಿ, ಎಲ್ಲಾ ದಿಕ್ಕುಗಳಲ್ಲಿ ಬೆಳಕ ಕಿರಣಗಳ
ಹರಡಿ ಹಾಸಿ ಇದು ಕಾಣಿ ನಿಜದ ನೆರಳು
ಪದಗಳ ಅರ್ಥಗಳ ಗಂಟು ಕಟ್ಟಿ ಮಾಯೆಯ
ಗೆಜ್ಜೆಯ ಹೊಸ ರಿಂಗಣ ಗುಹೇಶ್ವರ.

ಉರಿದ ಶರೀರದ ಬೂದಿ ಚೆಲ್ಲಿ ಹರಡಿ ಹಾಸಿದ
ಬಯಲು ಅಣು ಅಣುವಿನಲಿ ಲೋಕದ ತುಂಬ
ಮೊಗ್ಗುಗಳು ಹೂಗಳಾಗಿ ಅರಳಿ ಘಮ ಹರಡಿ,
ಅವನ ಪ್ರಜೆಯ ಒಳಗೂಡಿದ ಒಳ ಹರವು
ಮೋಹ ಮರುಳದ ಲಯವಾಗಿ ಕರಗಿದ ಜಂಗಮ
ಸರಸವಾದ ಗುಹೇಶ್ವರ.

ಕಣ್ಣು ಕಕ್ಷೆ ಮೀರಿ ಅರಳಿದ ಆಂತರ್ಯದ ಚೆಲುವು
ಮಾಯೆಯ ಮುಸಕ ಎಳೆದು ಆ ಮಾತು ಈ
ಮಾತ ಜಗದ ಸಂತೆಯ ತುಂಬ ಶರಣ
ಸತಿ ಲಿಂಗಪತಿ, ಭವದ ದಾವತಿ, ಶರೀರದ
ಅವಸ್ಥೆ ಅಭೇಧ್ಯನರಿಯವರ ಮರಳು ಮಾಡಿದ
ಗುಹೇಶ್ವರ ನಿರಂತರ ಸಾವಧಾನಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೂವರು ತಾಯಂದಿರು
Next post ಸುಭದ್ರಾ ಪರಿಣಯ

ಸಣ್ಣ ಕತೆ

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…