ದುಃಖ

ಮಂಜಿನ ತೆರೆಯ ಹೊದ್ದ ಬೆಟ್ಟದ ಮೇಲೆ
ಗೋಣು ಹೊರಳಿಸಿ ತೇಲುವ ಹಕ್ಕಿ ಮತ್ತೆ
ರೆಪ್ಪೆ ಭಾರದ ಬೆಳಗು, ತೆರೆದ ಕಿಟಕಿಯ
ಹೊರಗೆ ಮುಸುಕು ಮುಗಿಲು, ಧೂಳು ಬೀದಿಯಲಿ
ಬೆನ್ನಹತ್ತಿ ತಿರುಗುವ ನಾಯಿಗಳು.

ಬಾಗಿಲಿಗೆ ಬಿದ್ದ ವರ್ತಮಾನ ಪತ್ರಿಕೆಯ ತುಂಬ
ಕೆಂಪು ನೆತ್ತರಿನ ಸುದ್ದಿ, ಒಳಗೆ ಒಲೆ ಹಿಡಿಯದೇ
ಅವ್ವ ಉಸಿರುಗಟ್ಟಿ ಊದುತ್ತಿದ್ದಾಳೆ, ಶ್ಲೋಕಗಳ
ವೃತ್ತಗಳ ನಡುವೆ ಅವರಿವರ ಹೆಜ್ಜೆ ಗುರುತುಗಳು,
ರಾತ್ರಿಯ ಕನಸೋ ಚಿಟ್ಟೆಯ ಹಾರಾಟದ ಭ್ರಮೆ.

ಮೆಟ್ಟಲುಗಳ ಸವೆಸುತ್ತ ಬಾರಿಸುವ ಗುಡಿ ಗಂಟೆ,
ಅವಸರದ ಕೈಗಳಲ್ಲಿ ಅವರ ಕಾಣದ ಒಳಸುಳಿ,
ಚಕ್ರಬಿಂಬದ ಸುತ್ತ ಸುಳಿದ ದೇವರು ಒಕ್ಕಲೆಬ್ಬಿಸಿದ್ದಾನೆ.
ಅವಳ ಆಟ, ಅವನ ನೋಟ, ಎಲ್ಲರ ಬೇಟಿಯಾಟ,
ಬೇಸರ ಬೆಳೆದಿದೆ ಒಂದೂ ಮಾತನಾಡದೇ ಮೌನ.

ಒಂದೂ ಮಾತನಾಡದ ಕಲ್ಲು, ಮಣ್ಣು, ಮರ
ಒಳಗೊಂಡಿದೆ ನಿಮ್ಮೊಳಗೆ ನನ್ನೊಳಗೆ, ಮತ್ತೆ
ತರಲೆ ತಾಕಲಾಟದ ಊರು ಸಂದಿಗೊಂದಿಗಳು,
ತಂತಿ ಬಲೆಯಲಿ ಸಿಕ್ಕಿ ಹಾಕಿಕೊಂಡು ನರಳಾಟ ರಾತ್ರಿ,
ನಮ್ಮೊಳಗೆ ನಾವೇ ಸುಟ್ಟುಕೊಳ್ಳುವ ಕೊನೆ ಇರದ ಕೊರಗು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬನ್ನಿ ಬನ್ನಿ ಮಕ್ಕಳೆ
Next post ಅಂಬೆಯ ಅಳಲು

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…