Home / ಕವನ / ಕವಿತೆ / ದುಃಖ

ದುಃಖ

ಮಂಜಿನ ತೆರೆಯ ಹೊದ್ದ ಬೆಟ್ಟದ ಮೇಲೆ
ಗೋಣು ಹೊರಳಿಸಿ ತೇಲುವ ಹಕ್ಕಿ ಮತ್ತೆ
ರೆಪ್ಪೆ ಭಾರದ ಬೆಳಗು, ತೆರೆದ ಕಿಟಕಿಯ
ಹೊರಗೆ ಮುಸುಕು ಮುಗಿಲು, ಧೂಳು ಬೀದಿಯಲಿ
ಬೆನ್ನಹತ್ತಿ ತಿರುಗುವ ನಾಯಿಗಳು.

ಬಾಗಿಲಿಗೆ ಬಿದ್ದ ವರ್ತಮಾನ ಪತ್ರಿಕೆಯ ತುಂಬ
ಕೆಂಪು ನೆತ್ತರಿನ ಸುದ್ದಿ, ಒಳಗೆ ಒಲೆ ಹಿಡಿಯದೇ
ಅವ್ವ ಉಸಿರುಗಟ್ಟಿ ಊದುತ್ತಿದ್ದಾಳೆ, ಶ್ಲೋಕಗಳ
ವೃತ್ತಗಳ ನಡುವೆ ಅವರಿವರ ಹೆಜ್ಜೆ ಗುರುತುಗಳು,
ರಾತ್ರಿಯ ಕನಸೋ ಚಿಟ್ಟೆಯ ಹಾರಾಟದ ಭ್ರಮೆ.

ಮೆಟ್ಟಲುಗಳ ಸವೆಸುತ್ತ ಬಾರಿಸುವ ಗುಡಿ ಗಂಟೆ,
ಅವಸರದ ಕೈಗಳಲ್ಲಿ ಅವರ ಕಾಣದ ಒಳಸುಳಿ,
ಚಕ್ರಬಿಂಬದ ಸುತ್ತ ಸುಳಿದ ದೇವರು ಒಕ್ಕಲೆಬ್ಬಿಸಿದ್ದಾನೆ.
ಅವಳ ಆಟ, ಅವನ ನೋಟ, ಎಲ್ಲರ ಬೇಟಿಯಾಟ,
ಬೇಸರ ಬೆಳೆದಿದೆ ಒಂದೂ ಮಾತನಾಡದೇ ಮೌನ.

ಒಂದೂ ಮಾತನಾಡದ ಕಲ್ಲು, ಮಣ್ಣು, ಮರ
ಒಳಗೊಂಡಿದೆ ನಿಮ್ಮೊಳಗೆ ನನ್ನೊಳಗೆ, ಮತ್ತೆ
ತರಲೆ ತಾಕಲಾಟದ ಊರು ಸಂದಿಗೊಂದಿಗಳು,
ತಂತಿ ಬಲೆಯಲಿ ಸಿಕ್ಕಿ ಹಾಕಿಕೊಂಡು ನರಳಾಟ ರಾತ್ರಿ,
ನಮ್ಮೊಳಗೆ ನಾವೇ ಸುಟ್ಟುಕೊಳ್ಳುವ ಕೊನೆ ಇರದ ಕೊರಗು.
*****

Tagged:

Leave a Reply

Your email address will not be published. Required fields are marked *

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...