ದುಃಖ

ಮಂಜಿನ ತೆರೆಯ ಹೊದ್ದ ಬೆಟ್ಟದ ಮೇಲೆ
ಗೋಣು ಹೊರಳಿಸಿ ತೇಲುವ ಹಕ್ಕಿ ಮತ್ತೆ
ರೆಪ್ಪೆ ಭಾರದ ಬೆಳಗು, ತೆರೆದ ಕಿಟಕಿಯ
ಹೊರಗೆ ಮುಸುಕು ಮುಗಿಲು, ಧೂಳು ಬೀದಿಯಲಿ
ಬೆನ್ನಹತ್ತಿ ತಿರುಗುವ ನಾಯಿಗಳು.

ಬಾಗಿಲಿಗೆ ಬಿದ್ದ ವರ್ತಮಾನ ಪತ್ರಿಕೆಯ ತುಂಬ
ಕೆಂಪು ನೆತ್ತರಿನ ಸುದ್ದಿ, ಒಳಗೆ ಒಲೆ ಹಿಡಿಯದೇ
ಅವ್ವ ಉಸಿರುಗಟ್ಟಿ ಊದುತ್ತಿದ್ದಾಳೆ, ಶ್ಲೋಕಗಳ
ವೃತ್ತಗಳ ನಡುವೆ ಅವರಿವರ ಹೆಜ್ಜೆ ಗುರುತುಗಳು,
ರಾತ್ರಿಯ ಕನಸೋ ಚಿಟ್ಟೆಯ ಹಾರಾಟದ ಭ್ರಮೆ.

ಮೆಟ್ಟಲುಗಳ ಸವೆಸುತ್ತ ಬಾರಿಸುವ ಗುಡಿ ಗಂಟೆ,
ಅವಸರದ ಕೈಗಳಲ್ಲಿ ಅವರ ಕಾಣದ ಒಳಸುಳಿ,
ಚಕ್ರಬಿಂಬದ ಸುತ್ತ ಸುಳಿದ ದೇವರು ಒಕ್ಕಲೆಬ್ಬಿಸಿದ್ದಾನೆ.
ಅವಳ ಆಟ, ಅವನ ನೋಟ, ಎಲ್ಲರ ಬೇಟಿಯಾಟ,
ಬೇಸರ ಬೆಳೆದಿದೆ ಒಂದೂ ಮಾತನಾಡದೇ ಮೌನ.

ಒಂದೂ ಮಾತನಾಡದ ಕಲ್ಲು, ಮಣ್ಣು, ಮರ
ಒಳಗೊಂಡಿದೆ ನಿಮ್ಮೊಳಗೆ ನನ್ನೊಳಗೆ, ಮತ್ತೆ
ತರಲೆ ತಾಕಲಾಟದ ಊರು ಸಂದಿಗೊಂದಿಗಳು,
ತಂತಿ ಬಲೆಯಲಿ ಸಿಕ್ಕಿ ಹಾಕಿಕೊಂಡು ನರಳಾಟ ರಾತ್ರಿ,
ನಮ್ಮೊಳಗೆ ನಾವೇ ಸುಟ್ಟುಕೊಳ್ಳುವ ಕೊನೆ ಇರದ ಕೊರಗು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬನ್ನಿ ಬನ್ನಿ ಮಕ್ಕಳೆ
Next post ಅಂಬೆಯ ಅಳಲು

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…