ಒಂದು ಮೌನದ ನಡುಗೆ

ಮನೆ ಸಣ್ಣದಾಗಿ ಅಕ್ಕ ಅಣ್ಣ ತಮ್ಮ ತಂಗಿ,
ಬಳಗ ದೊಡ್ಡದಾಗಿ ಸರಳವಾದ ಬಾಲ್ಯ,
ಯಾವ ಅಂಜಿಕೆಯೂ ಸುಳಿಯದ ಯೌವನ,
ಅಮ್ಮ ಅಪ್ಪನ ಬೆಚ್ಚನೆಯ ಭರವಸೆಯ ನುಡಿ,
ಕೈ ಹಿಡಿದು ನಡೆದ ದಾರಿ ತುಂಬ ಪಾರಿಜಾತಗಳು.
ಗಿಡವಾಗಿದ್ದು ಮರವಾಗಲು ತಡವಾಗಲಿಲ್ಲ.

ಬಯಲ ಗಾಳಿ ಹಸಿರು ಗದ್ದೆಯಲಿ ಪಚ್ಚೆಪೈರು
ಭರದ ಮಳೆ ಸುರಿದ ರಾತ್ರಿಗಳು, ಹೊದ್ದ
ಕಂಬಳಿ ತುಂಬ ನಡುಮನೆಯ ಹರಟೆ ನಗು,
ಅವರು ಬಿಟ್ಟು ಇವರ್ಯಾರು. ಆಟ ಮುಟ್ಟಾಟದಲಿ,
ಮನಸ್ಸು ಗಾಳಿಪಟ, ನೀಲ ಗಗನ ತುಂಬ ಚಿಕ್ಕಿಗಳು.
ಹೊಂಗನಸುಗಳ ಮೂಲೆಯ ಕೊರಳು ತುಂಬಿ
ತೇಲಿ ತೇಲಿದ ದುಂಬಿಗಳು ಹೂಗಳ ತುಂಬ.

ಹೂವು ಹಾಸಿಗೆ, ಬಾಹು ಬಂಧನ ಚುಂಬನ.
ಎಲ್ಲದರೊಳು ಒಂದಾದ ಮಂಕು ತಿಂಮ್ಮ.
ದಾರಿ ಸವೆದ ಮೈಲುಗಲ್ಲುಗಳು ಊರಿಂದ
ಊರಿಗೆ ಹಾರಿದ ಚಿಟ್ಟೆಗಳು, ಮರದ ತುಂಬ
ಇಣಚಿ, ಹಕ್ಕಿಗಳು ಹೂಗಳ ಗಂಧ ಅರಳಿ.

ಮಿಡಿಯಾಗುವ ಚೈತ್ರದ ಹಾಡುಗಳು.
ರಾಗಗಳಾಗಿ ಇಳಿದ ಸಂಜೆ ಸಂಕ್ರಮಣ.

ಹುಡುಕುವ ಶಕ್ತಿಯ ಮೌನದ ಕಣಿವೆಯಲಿ,
ಒಬ್ಬಳೇ ಅಲೆಯುತ್ತಿದ್ದೇನೆ. ನೀನು ಜೊತೆಗೆ
ಬರಲಾರೆಯಾ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಓ ಮಕ್ಕಳೆ
Next post ತೇರು!

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…