ಅವನ ಬಿಟ್ಟು ಇವನ್ಯಾರು

ಎಲ್ಲಾ ಸ್ವಚ್ಛಂದದ ಸೆಳವು
ಒಳಗೊಳಗೆ ಇಳಿದ ತಂಗಾಳಿ,
ಮೈ ಹಗುರಾಗುವ ನಿನ್ನ ಸ್ಪರ್ಶ,
ಹರವು ದಾಟಿದ ಒಂದು ನದಿ ಬಯಲು.

ಘಮ ಘಮಿಸಿದ ಮುಂಜಾನೆ,
ಕಿರಣಗಳ ಸೋಕಿ ಉಮೇದಗೊಂಡ
ಭಾವಗಳು ಹೊಸ ಹಾಡು ಹಕ್ಕಿ ಕೊರಳು,
ಒಡಲ ತುಂಬ ಹಸಿರು ಚಿಮ್ಮುವ ಹವಣಿಕೆ.

ನಡೆಯುವ ದಾರಿತುಂಬ ಸತ್ಯದ ಬೆಳಕು.
ದಿವ್ಯ ದರ್ಶನಗಳ ಪದಕೋಶ ಎದೆಗೆ ಅಮರಿ,
ಮೂರ್ತದಲಿ ಅಮೂರ್ತಗಳ ಕವಿತೆಗಳು.
ಫಳಿಫಳಿಸಿದ ಕಣ್ಣ ಕಾಂತಿಯ ಪ್ರಭೆ ಮನೆಯೊಳಗೆ.

ನೆಲ ನೀರು ಗಾಳಿ ಮಳೆಯಲಿ ಕರಗಿ ಸೂರ್ಯ,
ಹುಡುಕುವ ಹೊಸ ಹುಟ್ಟಿನ ದಾರಿ ತಾಯಿ ಗರ್ಭ.
ಪುಟ್ಟ ಚಂದಿರನ ಬೆಳದಿಂಗಳು ಹರಡಿ ಹಾಸಿದ ಮಾಡು,
ಚಂದದ ಲಾಲೀ ಹಾಡಿದ ಪ್ರಥಾ ಪೂರ್ಣ ಸುಂದರಿ.

ಎಲ್ಲಾ ದಿಕ್ಕುಗಳು ಕಂಪನಗಳ ಕಂಪು ಹಣಿದು
ಬಯಲಲ್ಲಿ ಬೆತ್ತಲಾದ ಮುಪ್ಪು, ಅದಕ್ಕೂ ಇದಕ್ಕೂ
ಎಲ್ಲರೊಳಗೊಂಡು ಜೇನು ಹಂಚಿ ಜನನಿಬಿಡ ಸಂತೆ.
ಸಂತನಾಗುವ ಪರಿಯ ಅಚ್ಚರಿಯ ವಿಸ್ಮಯ ವ್ಯೋಮ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಓ ದೇವಿಯೆ
Next post ಶಾಪ !

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…