Home / ಕವನ / ಕವಿತೆ / ಅವನ ಬಿಟ್ಟು ಇವನ್ಯಾರು

ಅವನ ಬಿಟ್ಟು ಇವನ್ಯಾರು

ಎಲ್ಲಾ ಸ್ವಚ್ಛಂದದ ಸೆಳವು
ಒಳಗೊಳಗೆ ಇಳಿದ ತಂಗಾಳಿ,
ಮೈ ಹಗುರಾಗುವ ನಿನ್ನ ಸ್ಪರ್ಶ,
ಹರವು ದಾಟಿದ ಒಂದು ನದಿ ಬಯಲು.

ಘಮ ಘಮಿಸಿದ ಮುಂಜಾನೆ,
ಕಿರಣಗಳ ಸೋಕಿ ಉಮೇದಗೊಂಡ
ಭಾವಗಳು ಹೊಸ ಹಾಡು ಹಕ್ಕಿ ಕೊರಳು,
ಒಡಲ ತುಂಬ ಹಸಿರು ಚಿಮ್ಮುವ ಹವಣಿಕೆ.

ನಡೆಯುವ ದಾರಿತುಂಬ ಸತ್ಯದ ಬೆಳಕು.
ದಿವ್ಯ ದರ್ಶನಗಳ ಪದಕೋಶ ಎದೆಗೆ ಅಮರಿ,
ಮೂರ್ತದಲಿ ಅಮೂರ್ತಗಳ ಕವಿತೆಗಳು.
ಫಳಿಫಳಿಸಿದ ಕಣ್ಣ ಕಾಂತಿಯ ಪ್ರಭೆ ಮನೆಯೊಳಗೆ.

ನೆಲ ನೀರು ಗಾಳಿ ಮಳೆಯಲಿ ಕರಗಿ ಸೂರ್ಯ,
ಹುಡುಕುವ ಹೊಸ ಹುಟ್ಟಿನ ದಾರಿ ತಾಯಿ ಗರ್ಭ.
ಪುಟ್ಟ ಚಂದಿರನ ಬೆಳದಿಂಗಳು ಹರಡಿ ಹಾಸಿದ ಮಾಡು,
ಚಂದದ ಲಾಲೀ ಹಾಡಿದ ಪ್ರಥಾ ಪೂರ್ಣ ಸುಂದರಿ.

ಎಲ್ಲಾ ದಿಕ್ಕುಗಳು ಕಂಪನಗಳ ಕಂಪು ಹಣಿದು
ಬಯಲಲ್ಲಿ ಬೆತ್ತಲಾದ ಮುಪ್ಪು, ಅದಕ್ಕೂ ಇದಕ್ಕೂ
ಎಲ್ಲರೊಳಗೊಂಡು ಜೇನು ಹಂಚಿ ಜನನಿಬಿಡ ಸಂತೆ.
ಸಂತನಾಗುವ ಪರಿಯ ಅಚ್ಚರಿಯ ವಿಸ್ಮಯ ವ್ಯೋಮ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...