ಓ ದೇವಿಯೆ

ಓ ದೇವಿಯೆ
ಭರತ ಮಾತೆಯೆ
ನಿನ್ನ ಹೇಗೆ ಬಣ್ಣಿಸಲಿ ತಾಯೆ

ನಿನ್ನ ಬಣ್ಣಿಸಲಸದಳವು
ಮಾತೆಯೆ ಮಾತು ಸಾಲದಾಗಿದೆ
ನಿನ್ನ ನೋಡಲು ಯುಗಗಳೆ ಸಾಲದು
ನಿನ್ನ ಹೊಗಳಲು ಜನ್ಮಗಳೆ ಸಾಲದು

ಹಸಿರು ಸೀರೆಯನುಟ್ಟು
ಸಂಸ್ಕೃತಿಯೆ ಹಣೆಗೆ ಬೊಟ್ಟು
ಕಾವ್ಯಗಳೆ ನಿನ್ನಯ ಕೇಶರಾಶಿ
ಹಿಮಮಣಿಗಳೆ ನಿನಗೆ ಹಾರವು

ಹೊಂಬಣ್ಣದ ಹೂಗಳೆ ನಿನ್ನ ಓಲೆಗಳು
ಗಿರಿಶಿಖರಗಳೆ ನಿನ್ನಯ ಮುಕುಟವು
ಸತ್ಯ ಧರ್‍ಮಗಳ ತ್ರಿಶೂಲವಾಗಿಹವು
ನಿನ್ನ ಮಡಿಲ ಮಕ್ಕಳೆ ಹಣತೆಗಳಾಗಿರಲು

ಸ್ವರ್‍ಗದ ಹಿರಿಮೆಯೆ ಧರೆಗೆ ಇಳಿದಿರಲು
ನಿನ್ನ ಮಡಿಲಲ್ಲಿ ಹುಟ್ಟಿದ ನಾವು ಭಾಗ್ಯವಂತರು
ತಾಯೆ ಜನನಿಯೆ ನಾವೇ ಭಾಗ್ಯವಂತರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಕ್ತಿಧಾಮ
Next post ಅವನ ಬಿಟ್ಟು ಇವನ್ಯಾರು

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…