ಮುಕ್ತಿಧಾಮ

ಕಾಂಚನ ಕಾಮ ಲೋಭಗಳಲ್ಲಿ
ಇನ್ನೆಷ್ಟು ದಿನವು ನಿನ್ನಾಟ
ಕ್ಷಣ ಹೊತ್ತಿನ ಈ ಪ್ರಪಂಚದಲ್ಲಿದ್ದು
ಶಾಶ್ವತ ಕನಸುಗಳ ಹುಡುಕಾಟ

ಕನಸುಗಳು ಬರೀ ಕನ್ಸುಗಳು ಮಾತ್ರ
ಅವುಗಳಿಗೆಲ್ಲಿಯದು ಆಕಾರ
ಆ ಕನ್ಸು ಆಗಿವೆ ನಿನ್ನ ಚಲನೆ ಸೂತ್ರ
ಮರೆತಿರುವೆ ನಿ ವಿಶ್ವದ ಚಿತ್ರಕಾರ

ದೇಹದಲ್ಲಿ ಕೆಲವು ವೇಳೆ ನೆಲಿಸಿದ್ದು
ಶರೀರವೆ ನೀನೆಂಬ ಮೋಸ
ಕಾಯ ಮಾಯಗಳು ನೀನಲ್ಲ
ನೀನು ಕೇವಲ ಪರಮಾತ್ಮನ ದಾಸ

ಎಲ್ಲಕ್ಕೂ ನೀ ನಾಗಬೇಕು ಸಾಕ್ಷಿ
ಏನನ್ನೂ ಅನುಭವಿಸದೆ ಕಾಣಬೇಕು
ಶರೀರ ಮನಸ್ಸುಗಳಿರದ ನೀನು
ಮಾಣಿಕ್ಯ ವಿಠಲನಾದ ಸೇರಬೇಕು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೪೦
Next post ಓ ದೇವಿಯೆ

ಸಣ್ಣ ಕತೆ

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…