ಶಾಪ !

ಕಾಳರಾಣಿ ಕೊಲೆಪಾತಕ ಬಂದ!
ಮೂಳನಾಗಿ ಮೊಗದೋರಲು ಬಂದ!! ೧

ಮುಗಿಲರಮನೆ ಮುಂಭಾಗದಿ ನಿಂದ!
ಜಗದ ಜಾತಿಗಳ ನೆಬ್ಬಿಸಿರೆಂದ!! ೨

ಮನುಜನೊಬ್ಬ ಮನೆಯಿಂದಲಿ ಬಂದ!
ಹನಿನೀರಿಗೆ ತಾ ಕೆರೆಗೈ ತಂದ !! ೩

`ಕೊನೆಯಮನುಜ ನಾ ಕಾಣಿರಿ’ ಯೆಂದ!
`ಕನಿಕರ ಕಣ್ಣೀರೆರೆಯಿರಿ’ ಯೆಂದ!! ೪

ಸೂರ್ಯನು ಸಹಿಸದೆ ಸಾಗುತೆ ಬಂದ!
ಕೌರ್ಯಾ೦ಬುಗಳಂ ಕೆಡುಹಲು ಬಂದ!! ೫

ಸಾಲದೆ, ಸಾಗಿಯೆ ಸಾಗಿಯೆ ಬಂದ!
ಕೋಲು ಕಿರಣಗಳ ಕೆಡಹುತೆ ಬಂದ!! ೬

ಪಡುವಣಾಂಗನೆಯ ಪತಿಯಾಗಲು ಬಂದ!
ಕಡಲಿನೊಡೆತನವ ತಾ ಕೋರಲು ಸಂದ!! ೭

ಮರುಗಿ ಮರಳಿ ಆ ಮನುಜನು ಬಂದ!
ಬರಿಯ ಕೊಡವ ತಾ ಮನೆಯೊಳು ತಂದ!! ೮

ಮಕ್ಕಳ ಮುಖಗಳ ನೋಡುತೆ ನೊಂದ!
ಉಕ್ಕುವ ದುಃಖದಿ ಕಂಬನಿ ತಂದ!! ೯

`ಸಲಹುವ ಸೃಷ್ಟಿಯ ನ್ಯಾಯವಿದೆಂ’ ದ!
`ಹೊಲೆಯರೆಲ್ಲ ಹಾಳಾಗಲಿ’ ಯೆಂದ!! ೧೦
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅವನ ಬಿಟ್ಟು ಇವನ್ಯಾರು
Next post ವಚನ ವಿಚಾರ – ಸುಖ ದುಃಖದ ನಕ್ಷತ್ರ

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

cheap jordans|wholesale air max|wholesale jordans|wholesale jewelry|wholesale jerseys