ಎಡವೂರ ವೀರಭದ್ರನ ಸ್ತೋತ್ರ

ಎಡವೂರ ತಳದಲ್ಲಿ ಏನೇನ ಶಡಗರ
ಎಡಕ ನಂದೀಕೋಲ ಬಲಕ ಪಲ್ಲಕಿ ಪಂಕ
ಶಡಗರದ ಛತ್ತರಕಿ ಎಡಬಲ ಬತಾಗೀರಿ
ಹಾರೂವ ಹೂಬಾಣ ಹೊಬತ್ತಿ ಕಂಡಿಽರಿ
ಗುಗ್ಗಽಳದಾರೂತಿ ಗುಡಿಮುಂದ ಕಂಡಿಽರಿ
ಶರಣಬಂದಯ್ಯಗ ಕರಣ ನೋಡಿ ಪೂಜಿಗೋಳ ಬನ್ನೆ
ಜಯಮಂಗಳಽ ನಿತ್ಯ ಶಿನಮಂಗಳ ||೧||

ಹಣಿಯ ಮ್ಯಾಲಿನ ಗಂಧ ಗಿಣಿರಾಮ ಕುಂತಂಗ
ಕರಿಯ ಕುಂದಲದ್ಹರಳ ಕಿವಿಯಾಗ ಇಟ್ಟಾನ
ಏಸೊಂದು ಶೃಂಗಾರ ಎಡಗೈಲಿ ಹಿಡದಾನ
ಪರವೂತ ಗಿರಿಗುಡ್ಡ ಬಲಗೈಲಿ ಹಿಡದಾನ
ಚಳ್ಳುಂಗ್ರ ಚಿಮ್ಮೂತ ಕ್ವಾರ್‍ಮೀಸಿ ತಿದ್ದೂತ
ಕರಿ ಈರಭದ್ರನ ಕರಣ ನೋಡಿ ಪೂಜಿಗೋಳ ಬನ್ನೆ
ಜಯಮಂಗಳಽ ನಿತ್ಯ ಶಿವಮಂಗಳ ||೨||

ಬಿಳಿಯಂಗಿ ತೊಟ್ಟಾನ ಬಿಗದುಟ್ಟು ನಿಂತಾನ
ಸರಗಂಟಿ ಸರಮಾಲಿ ಕೊರಳೀಗಿ ಹಾಕ್ಯಾನ
ಏಸೊಂದು ರುದ್ರಾಕ್ಷಿ ಸ್ವಾಮಿ ತಾ ಧರಸ್ಯಾನ
ಪಡವಽಲ ದಿಕ್ಕಿಽಗಿ ಒಡೆಯ ತಾ ನೆನೆದಾನ
ತುಂಗಬದ್ರಿ ಕಾಳಿ ಬಾಗಿಽಲ ತೆರೆಯಂದ
ಕರಿ ಈರಭದ್ರನ ಕರಣ ನೋಡಿ ಪೂಜಿಗೋಳ ಬನ್ನೆ
ಜಯಮಂಗಳಽ ನಿತ್ಯ ಶಿನಮಂಗಳ ||೩||

ಮಂಗಳಾರಽ ದಿನ ವೀರ ನಿನ್ನೋಲಗೆ
ಚಿಟ್ಟಿ ಚಿಣಗೀ ಹೂವ ದುಂಡಮಲ್ಲಿಗಿ ಹೂವ
ಕೊಂಡಾಡೊ ದಾಸ್ಯಾಳ ಮಂಡ್ಲೇಸೂರದ್ಹೂವ
ಏಳ ಸಮದುರದಾನ ಪಾರಿಽಜಾತದ ಹೂವ
ಕಂಚಿಽಯ ಈ ಮಗ್ಗಿ ಕಮಳದ ಈ ಮಗ್ಗಿ
ಖ್ಯಾದಿಽಗಿ ಹೊಡಿ ನೂರು ಖ್ಯಾದಿಽಗಿ ಗರಿ ನೂರು
ಎಲ್ಲಽಕ ಹೆಚ್ಚಿಂದು ಬೆಲ್ಲಪತ್ತುರಿ ನೂರು
ಕರಕಿಽಯ ಪತ್ತೂಽರಿ ಕರಿಯ ತುಂಬೀ ಹೂವ
ಕರಿ ಈರಭದ್ರನ ಕರಣ ನೋಡಿ ಪೂಜಿಗೋಳ ಬನ್ನೆ
ಜಯಮುಂಗಳಽ ನಿತ್ಯ ಶಿನಮಂಗಳ ||೪||

ಹೆಗ್ಗಾಳಿ ಚಿನಕಾಳಿ ದೊಡ್ಡ ರಂಗಿನ ಕಾಳಿ
ಊದುಽಸು ನೆಽಪೇರಿ ಬಾರಿಸು ನಗಾರಿ
ಆಡು ಪಾತರ ಮ್ಯಾಳ ಗುಡಿಮುಂದ ಕಂಡಿಽರಿ
ಗುಗ್ಗಽಳದಾರೂತಿ ಗುಡಿಮುಂದ ಕಂಡಿಽರಿ
ಶರಣಬಂದಯ್ಯಗ ಕರಣ ನೋಡಿ ಪೂಜಿಗೋಳ ಬನ್ನೆ
ಜಯಮಂಗಳಽ ನಿತ್ಯ ಶಿವಮಂಗಳ ||೫||
*****

ಮೊದಲನೆಯ ನುಡಿಯಲ್ಲಿ ಮೂರ್ತಿಯ ಅಲಂಕಾರವರ್ಣನೆ, ಎರಡನೆಯದರಲ್ಲಿ ಗುಡಿಯೊಳಗಿನ ಭಜನೆಯ ಮೇಳದ ವರ್ಣನೆ, ಮೂರನೆಯದರಲ್ಲಿ ಕ್ಷೇತ್ರ ವರ್ಣನೆ, ನಾಲ್ಕನೆಯದರಲ್ಲಿ ಭಕ್ತಿಯ ಬಯಕೆ, ಹೀಗೆ ಕ್ರಮವಿದೆ.

ಛಂದಸ್ಸು:- ಮೂರು ಮೂರು ಮಾತ್ರೆಯ ಗಣಗಳಿವೆ. ಉತ್ಸಾಹ ರಗಳೆ.

ಶಬ್ದಪ್ರಯೋಗಗಳು:- ಇಟ್ಟಗಿ=ಇಟ್ಟಂಗಿ. ನಿಂತಾನ=ನಿಂತಿದ್ದಾನೆ. ಮಂದೀಲ=ಮುಂಡಾಸ. ಗೋಮ=ಪವಿತ್ರ. ಟೊಂಕ=ಸೊಂಟ. ಹೃದಯದಲ್ಲಿ ಲತ್ತಿಪೆಟ್ಟು=ದೇವರಾಯನ ಎದೆಗೆ ಆತನ ಸತಿಯಾದ ಶ್ರೀಲಕ್ಷ್ಮಿಯ ಬಲವಾದ ಏಟು ಕೊಟ್ಟಿದ್ದಾಳೆ ಎಂದು ಒಂದು ಪೌರಾಣಿಕ ಕಥೆ. ಮಾಳಿ=ಮಾಲೆ. ಬುಕ್ಕಿಟ್ಟು=ಕಪ್ಪು ಗಂಧದ ಪುಡಿ. ಔಂದೇ ಅಂಸ=ಅವನದೇ ವಂಶ. ಭಜನೆಗೋಳು=ಭಜನೆಗಳು. ಲಿಂಗಾಕಾರ=ಲಿಂಗದಾಕಾರ. ಟಿಳಕಬಟ್ಟ=ತಿಲಕದ ಬೊಟ್ಟು. ಪುಂಡಲೀಕ=ವಿಠ್ಠಲರಾಯನ ಒಬ್ಬ ಮಹಾಭಕ್ತ. ಬೌದ್ಧ್ಯ ರೂಪ=ವಿಠೋಬನು ಬೌದ್ಧವತಾರನೆಂದು ಜನರೂಢಿ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗನ್ನು ನಿಮ್ಮದು ಪೆನ್ನು ನಮ್ಮದು
Next post ಅಪರಾಧಿಗಳ ಪತ್ತೆಗೆ ಸತ್ಯ ಬಿತ್ತರಗೊಳಿಸುವ ತಂತ್ರಜ್ಞಾನ

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…