ಎಡವೂರ ವೀರಭದ್ರನ ಸ್ತೋತ್ರ

ಎಡವೂರ ತಳದಲ್ಲಿ ಏನೇನ ಶಡಗರ
ಎಡಕ ನಂದೀಕೋಲ ಬಲಕ ಪಲ್ಲಕಿ ಪಂಕ
ಶಡಗರದ ಛತ್ತರಕಿ ಎಡಬಲ ಬತಾಗೀರಿ
ಹಾರೂವ ಹೂಬಾಣ ಹೊಬತ್ತಿ ಕಂಡಿಽರಿ
ಗುಗ್ಗಽಳದಾರೂತಿ ಗುಡಿಮುಂದ ಕಂಡಿಽರಿ
ಶರಣಬಂದಯ್ಯಗ ಕರಣ ನೋಡಿ ಪೂಜಿಗೋಳ ಬನ್ನೆ
ಜಯಮಂಗಳಽ ನಿತ್ಯ ಶಿನಮಂಗಳ ||೧||

ಹಣಿಯ ಮ್ಯಾಲಿನ ಗಂಧ ಗಿಣಿರಾಮ ಕುಂತಂಗ
ಕರಿಯ ಕುಂದಲದ್ಹರಳ ಕಿವಿಯಾಗ ಇಟ್ಟಾನ
ಏಸೊಂದು ಶೃಂಗಾರ ಎಡಗೈಲಿ ಹಿಡದಾನ
ಪರವೂತ ಗಿರಿಗುಡ್ಡ ಬಲಗೈಲಿ ಹಿಡದಾನ
ಚಳ್ಳುಂಗ್ರ ಚಿಮ್ಮೂತ ಕ್ವಾರ್‍ಮೀಸಿ ತಿದ್ದೂತ
ಕರಿ ಈರಭದ್ರನ ಕರಣ ನೋಡಿ ಪೂಜಿಗೋಳ ಬನ್ನೆ
ಜಯಮಂಗಳಽ ನಿತ್ಯ ಶಿವಮಂಗಳ ||೨||

ಬಿಳಿಯಂಗಿ ತೊಟ್ಟಾನ ಬಿಗದುಟ್ಟು ನಿಂತಾನ
ಸರಗಂಟಿ ಸರಮಾಲಿ ಕೊರಳೀಗಿ ಹಾಕ್ಯಾನ
ಏಸೊಂದು ರುದ್ರಾಕ್ಷಿ ಸ್ವಾಮಿ ತಾ ಧರಸ್ಯಾನ
ಪಡವಽಲ ದಿಕ್ಕಿಽಗಿ ಒಡೆಯ ತಾ ನೆನೆದಾನ
ತುಂಗಬದ್ರಿ ಕಾಳಿ ಬಾಗಿಽಲ ತೆರೆಯಂದ
ಕರಿ ಈರಭದ್ರನ ಕರಣ ನೋಡಿ ಪೂಜಿಗೋಳ ಬನ್ನೆ
ಜಯಮಂಗಳಽ ನಿತ್ಯ ಶಿನಮಂಗಳ ||೩||

ಮಂಗಳಾರಽ ದಿನ ವೀರ ನಿನ್ನೋಲಗೆ
ಚಿಟ್ಟಿ ಚಿಣಗೀ ಹೂವ ದುಂಡಮಲ್ಲಿಗಿ ಹೂವ
ಕೊಂಡಾಡೊ ದಾಸ್ಯಾಳ ಮಂಡ್ಲೇಸೂರದ್ಹೂವ
ಏಳ ಸಮದುರದಾನ ಪಾರಿಽಜಾತದ ಹೂವ
ಕಂಚಿಽಯ ಈ ಮಗ್ಗಿ ಕಮಳದ ಈ ಮಗ್ಗಿ
ಖ್ಯಾದಿಽಗಿ ಹೊಡಿ ನೂರು ಖ್ಯಾದಿಽಗಿ ಗರಿ ನೂರು
ಎಲ್ಲಽಕ ಹೆಚ್ಚಿಂದು ಬೆಲ್ಲಪತ್ತುರಿ ನೂರು
ಕರಕಿಽಯ ಪತ್ತೂಽರಿ ಕರಿಯ ತುಂಬೀ ಹೂವ
ಕರಿ ಈರಭದ್ರನ ಕರಣ ನೋಡಿ ಪೂಜಿಗೋಳ ಬನ್ನೆ
ಜಯಮುಂಗಳಽ ನಿತ್ಯ ಶಿನಮಂಗಳ ||೪||

ಹೆಗ್ಗಾಳಿ ಚಿನಕಾಳಿ ದೊಡ್ಡ ರಂಗಿನ ಕಾಳಿ
ಊದುಽಸು ನೆಽಪೇರಿ ಬಾರಿಸು ನಗಾರಿ
ಆಡು ಪಾತರ ಮ್ಯಾಳ ಗುಡಿಮುಂದ ಕಂಡಿಽರಿ
ಗುಗ್ಗಽಳದಾರೂತಿ ಗುಡಿಮುಂದ ಕಂಡಿಽರಿ
ಶರಣಬಂದಯ್ಯಗ ಕರಣ ನೋಡಿ ಪೂಜಿಗೋಳ ಬನ್ನೆ
ಜಯಮಂಗಳಽ ನಿತ್ಯ ಶಿವಮಂಗಳ ||೫||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗನ್ನು ನಿಮ್ಮದು ಪೆನ್ನು ನಮ್ಮದು
Next post ಅಪರಾಧಿಗಳ ಪತ್ತೆಗೆ ಸತ್ಯ ಬಿತ್ತರಗೊಳಿಸುವ ತಂತ್ರಜ್ಞಾನ

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…