ಏಕನಾದ

ಕೇಳುತ್ತಿರುವುದೊಂದು ದನಿಯು
ಏಕನಾದದಿಂದ ನುಡಿಯು
ನೇತಿ ನೇತಿ ಎಂಬ ನಿಗಮ
ನೀತಿ ಕೇಳುತಿರುವದಮ್ಮ
ಮಿಡಿವುದೇಕೊ ಏಕನಾದ
ನುಡಿವುದೇನೊ ಹಲವು ವಾದ.

ಒಂದು ತಂತಿಯಿಂದ ಹಲವು
ನಾದವೊಡೆದು ರಾಗರಸವು
ಹಳೆಯದನ್ನು ಹೊಸದು ಮಾಡಿ
ಹೂಸದ ಹಳಯದಾಗಿ ಮಾಡಿ
ಧರ್‍ಮವುರುಳೆ ಕರ್‍ಮ ಸಡಿಲೆ
ಸತ್ಯ ಸೊರಗಿಹೋಯ್ತು ಮೇಲೆ.

ಲೋಕದಿರವ ಹಾಡುತಿಹುದು
ಭಿಕ್ಷವನ್ನು ಬೇಡುತಿಹುದು
ಜೀವ ಮಿಡಿದು ನೋಡುತಿಹುದು
ಮಧುರ ಶ್ರುತಿಗೆ ಹೇಳುತಿಹುದು
ರಾಗ ರಚನೆ ರಸ-ವಿಹಾರ
ವೊಂದರೊಳಗೆ ನೆರೆ ಗಭೀರ.

ಲಜ್ಜೆ ಭೀತಿಯಿಲ್ಲದಿರುವ
ತಂತಿಯರಿತು ಜೀವ ಭಾವ
ನುಡಿಯುತಿಹುದು ಲೋಕಕೂಲವ
ಏಳಮಾರ್‍ಗ ನೋಟ ಹಲವ
ಚಿತ್ರ ತೋರಿ ಹಾಡುತಿರುವ
ತಂತಿಗೊಲಿದು ಕುಣಿತ ಕುಣಿವ.

ಒಂದೆ ರಾಗ ಒಂದೆ ಸ್ವರ
ಒಂದೆ ಮೇಳ ನಾದವಮರ
ಹೃದಯದೊಳಗೆ ಒಳಗೆ ಒಳಗೆ
ಇರುವ ದೇವ ನಲಿದು ಹೊರಗೆ
ದರುಶನವ ನೀಡೆ ಬಂದ
ತಂತಿ ಮಿಡಿದು ಹಾಡು ಎಂದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾತು ಮೌನ
Next post ಕಂಡೆ

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

cheap jordans|wholesale air max|wholesale jordans|wholesale jewelry|wholesale jerseys