ಏಕನಾದ

ಕೇಳುತ್ತಿರುವುದೊಂದು ದನಿಯು
ಏಕನಾದದಿಂದ ನುಡಿಯು
ನೇತಿ ನೇತಿ ಎಂಬ ನಿಗಮ
ನೀತಿ ಕೇಳುತಿರುವದಮ್ಮ
ಮಿಡಿವುದೇಕೊ ಏಕನಾದ
ನುಡಿವುದೇನೊ ಹಲವು ವಾದ.

ಒಂದು ತಂತಿಯಿಂದ ಹಲವು
ನಾದವೊಡೆದು ರಾಗರಸವು
ಹಳೆಯದನ್ನು ಹೊಸದು ಮಾಡಿ
ಹೂಸದ ಹಳಯದಾಗಿ ಮಾಡಿ
ಧರ್‍ಮವುರುಳೆ ಕರ್‍ಮ ಸಡಿಲೆ
ಸತ್ಯ ಸೊರಗಿಹೋಯ್ತು ಮೇಲೆ.

ಲೋಕದಿರವ ಹಾಡುತಿಹುದು
ಭಿಕ್ಷವನ್ನು ಬೇಡುತಿಹುದು
ಜೀವ ಮಿಡಿದು ನೋಡುತಿಹುದು
ಮಧುರ ಶ್ರುತಿಗೆ ಹೇಳುತಿಹುದು
ರಾಗ ರಚನೆ ರಸ-ವಿಹಾರ
ವೊಂದರೊಳಗೆ ನೆರೆ ಗಭೀರ.

ಲಜ್ಜೆ ಭೀತಿಯಿಲ್ಲದಿರುವ
ತಂತಿಯರಿತು ಜೀವ ಭಾವ
ನುಡಿಯುತಿಹುದು ಲೋಕಕೂಲವ
ಏಳಮಾರ್‍ಗ ನೋಟ ಹಲವ
ಚಿತ್ರ ತೋರಿ ಹಾಡುತಿರುವ
ತಂತಿಗೊಲಿದು ಕುಣಿತ ಕುಣಿವ.

ಒಂದೆ ರಾಗ ಒಂದೆ ಸ್ವರ
ಒಂದೆ ಮೇಳ ನಾದವಮರ
ಹೃದಯದೊಳಗೆ ಒಳಗೆ ಒಳಗೆ
ಇರುವ ದೇವ ನಲಿದು ಹೊರಗೆ
ದರುಶನವ ನೀಡೆ ಬಂದ
ತಂತಿ ಮಿಡಿದು ಹಾಡು ಎಂದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾತು ಮೌನ
Next post ಕಂಡೆ

ಸಣ್ಣ ಕತೆ

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…