ಹೂಮಳೆ

ತುಂಬಿ ಬಂದಿದೆ ಹೃದಯವಿಂದು ನಿನ್ನ ನೆನಪೇ ತಂದಿದೆ |
ಅಲೆಗಳಿಲ್ಲದೆ ಪ್ರೇಮಗಂಗೆ ಶಾಂತವಾಗಿ ಹರಿದಿದೆ || ಪ ||

ಹುಣ್ಣಿಮೆಯ ಈ ಶುಭ ರಾತ್ರಿ ಹಗಲಿನಂತೆ ಬೆಳಗಿದೆ |
ಧರೆಗೆ ಇಳಿದಾ ಚಂದ್ರ ಕಾಂತಿ ಹಾಲಿನಂತೆ ಹರಡಿದೆ || ೨ ||

ಜೋಡಿ ಹಂಸದ ಪುಟ್ಟ ದೋಣಿ ತೇಲಿ ತೇಲಿ ಸಾಗಿದೆ |
ನವ ವಸಂತದ ಬಾಳ ನೌಕೆ ಒಲುವೆ ಇಂದಲೆ ಚಲಿಸಿದೆ || ೩ ||

ಗಿರಿಗಾಡಿನ ವನಸಿರಿ ಹಚ್ಚಹಸುರನೆ ಹಾಸಿದೆ |
ತಂಪನೆರೆಯುತ ತಂಗಾಳಿ ಶ್ವೇತ ಹಿಮವನೆ ಹೊದಿಸಿದೆ || ೪ ||

ನೋವನೆಲ್ಲವ ಮರೆಸಿ ಒಲವು ಹೂಮಳೆಯನು ಸುರಿಸಿದೆ |
ನಿನ್ನ ಪ್ರೇಮದ ಅಮೃತ ಧಾರೆ ಇಳೆಗೆ ಸಗ್ಗವ ಇಳಿಸಿದೆ || ೫ ||

ತುಂಬಿ ಬಂದಿದೆ ಹೃದಯವಿಂದು ನಿನ್ನ ನೆನಪೇ ತಂದಿದೆ |
ಅಲೆಗಳಿಲ್ಲದೆ ಪ್ರೇಮಗಂಗೆ ಶಾಂತವಾಗಿ ಹರಿದಿದೆ || ಪ ||
*****
೧೦-೦೧-೧೯೯೪

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನ ಮಂಥನ ಸಿರಿ – ೬
Next post ಬದರಿಕಾಶ್ರಮದಲ್ಲಿ ಒಂದು ಬೆಳಗು

ಸಣ್ಣ ಕತೆ

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…