ಬದರಿಕಾಶ್ರಮದಲ್ಲಿ ಒಂದು ಬೆಳಗು

ಕತ್ತಲೆಯ ಕಿಡಿಗೇಡಿತನ ಕಂಡು ಋಭು ನೊಂದು
ದೇವಗಾನದಿ ಬೆಳಕ ತಂದನೇನು?
ಬೆಳಕೆ ದಾರಿಯತೋರು ಎಂಬ ಒಳದನಿ ಕೇಳಿ
ಸೂರ್ಯನಾರಾಯಣನು ಬಂದನೇನು ?

ತಾಮಸದ ಪಾಚಿಯನು ಎತ್ತಿ ಹಾಕಿದ ಹಾಗೆ
ಹಿಮಕೆ ಮುತ್ತಿದ ತಿಮಿರರಾಸಿಯನ್ನು
ಮಾಯಮಾಡಿದ ಅಬ್ಬ! ಆದಿತ್ಯನವಗಾವು-
ದೀಡಹುದು ! ಕೇಳುವನೆ ಘನತಮವನು?

ಭಕ್ತಿ ಹಣ್ಣಾದಂತೆ ಬೆಳಕು ಸೋರಿತು ಬುವಿಗೆ
ಹಿಮಕೆ ಎರೆದಿತು ಬೆಳೆಕುಜೇನು ತುಂಬ
ಜೀವಿಗಳನೆಬ್ಬಿಸಿತು “ಏಳಿ ಕಳೆದಿದೆ ಕಾಳು
ಬನ್ನಿ ತುಂಬಿಹುದೀಗ ಅಮೃತಕುಂಭ

ನಾರಾಯಣಾದ್ರಿಯಲಿ ಆತ್ಮಪ್ರಭೆಯನು ಕಂಡು
ಪೂರ್ವನರಗಿರಿ ಮಿಂಚಿ ಬೆಳಗುತಿಹುದು
ತನ್ನಲ್ಲಿ ಆ ಬಿಂಬದೈಸಿರಿಯನುಂಡುಂಡು
ಸಾರೂಪ್ಯ ಸೌಖ್ಯದಲಿ ತೊಳಗುತಿಹುದು

ಓ! ದಿವ್ಯ ದೃಷ್ಟಿಯನ್ನು ತೆರೆದಾಗ ಪುಣ್ಯವೋ
ಪಾಪವೋ ಏನೆಲ್ಲ ಮಾಯವಾಗಿ
ಏಕಮೇವಂ ಆದ ದಿವ್ಯ ಪುರುಷನ ಇದಿರು
ಜೀವ ನಿಲುವದು ಬಾಗಿ ಭಕ್ತನಾಗಿ

ಪ್ರಕೃತಿಗೀಯಲು ನೆರವ ಕಾರುಣ್ಯದಲಿ ಪುರುಷ
ಅವಳ ಬಸಿರಲಿ ಬಹುದು ದಿವ್ಯ ಸೃಷ್ಟಿ
ಮಾಯೆಯಾವುದು ಇಲ್ಲಿ ಭಗವಂತನಾಟದಲಿ?
ನೀಡಿರಲು ನಮಗಾತ ಸತ್ಯದೃಷ್ಟಿ

ಬದರಿಕಾಶ್ರಮದಲ್ಲಿ ನೋಡಿದೆನು ಬೆಳಗಿನಲಿ
ಹಿಮಗಿರಿಯು ಬುದ್ಧನೊಲು ನಿಂತಿದ್ದಿತು
ನಿಸ್ಸೀಮವಾಗಿರುವ ಬಾನು ಬಯಲುಗಳಲ್ಲಿ
ಬಗೆವಕ್ಕಿ ಪಕ್ಕಗಳ ಕೆದರಿದ್ದಿತು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೂಮಳೆ
Next post ರಾವಣಾಂತರಂಗ – ೨೧

ಸಣ್ಣ ಕತೆ

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ತಾಯಿ-ಬಂಜೆ

    "ಅಯ್ಯೋ! ಅಮ್ಮ!... ನೋವು... ನೋವು... ಸಂಕಟ.... ಅಮ್ಮ!-" ಒಂದೇ ಸಮನಾಗಿ ನರಳಾಟ. ಹೊಟ್ಟೆಯನ್ನು ಕಡೆಗೋಲಿನಿಂದ ಕಡದಂತಾಗುತ್ತಿತ್ತು. ಈ ಕಲಕಾಟದಿಂದ ನರ ನರವೂ ಕಿತ್ತು ಹೋದಂತಾಗಿ ಮೈಕೈಯೆಲ್ಲಾ ನೋವಿನಿಂದ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…