ಬದರಿಕಾಶ್ರಮದಲ್ಲಿ ಒಂದು ಬೆಳಗು

ಕತ್ತಲೆಯ ಕಿಡಿಗೇಡಿತನ ಕಂಡು ಋಭು ನೊಂದು
ದೇವಗಾನದಿ ಬೆಳಕ ತಂದನೇನು?
ಬೆಳಕೆ ದಾರಿಯತೋರು ಎಂಬ ಒಳದನಿ ಕೇಳಿ
ಸೂರ್ಯನಾರಾಯಣನು ಬಂದನೇನು ?

ತಾಮಸದ ಪಾಚಿಯನು ಎತ್ತಿ ಹಾಕಿದ ಹಾಗೆ
ಹಿಮಕೆ ಮುತ್ತಿದ ತಿಮಿರರಾಸಿಯನ್ನು
ಮಾಯಮಾಡಿದ ಅಬ್ಬ! ಆದಿತ್ಯನವಗಾವು-
ದೀಡಹುದು ! ಕೇಳುವನೆ ಘನತಮವನು?

ಭಕ್ತಿ ಹಣ್ಣಾದಂತೆ ಬೆಳಕು ಸೋರಿತು ಬುವಿಗೆ
ಹಿಮಕೆ ಎರೆದಿತು ಬೆಳೆಕುಜೇನು ತುಂಬ
ಜೀವಿಗಳನೆಬ್ಬಿಸಿತು “ಏಳಿ ಕಳೆದಿದೆ ಕಾಳು
ಬನ್ನಿ ತುಂಬಿಹುದೀಗ ಅಮೃತಕುಂಭ

ನಾರಾಯಣಾದ್ರಿಯಲಿ ಆತ್ಮಪ್ರಭೆಯನು ಕಂಡು
ಪೂರ್ವನರಗಿರಿ ಮಿಂಚಿ ಬೆಳಗುತಿಹುದು
ತನ್ನಲ್ಲಿ ಆ ಬಿಂಬದೈಸಿರಿಯನುಂಡುಂಡು
ಸಾರೂಪ್ಯ ಸೌಖ್ಯದಲಿ ತೊಳಗುತಿಹುದು

ಓ! ದಿವ್ಯ ದೃಷ್ಟಿಯನ್ನು ತೆರೆದಾಗ ಪುಣ್ಯವೋ
ಪಾಪವೋ ಏನೆಲ್ಲ ಮಾಯವಾಗಿ
ಏಕಮೇವಂ ಆದ ದಿವ್ಯ ಪುರುಷನ ಇದಿರು
ಜೀವ ನಿಲುವದು ಬಾಗಿ ಭಕ್ತನಾಗಿ

ಪ್ರಕೃತಿಗೀಯಲು ನೆರವ ಕಾರುಣ್ಯದಲಿ ಪುರುಷ
ಅವಳ ಬಸಿರಲಿ ಬಹುದು ದಿವ್ಯ ಸೃಷ್ಟಿ
ಮಾಯೆಯಾವುದು ಇಲ್ಲಿ ಭಗವಂತನಾಟದಲಿ?
ನೀಡಿರಲು ನಮಗಾತ ಸತ್ಯದೃಷ್ಟಿ

ಬದರಿಕಾಶ್ರಮದಲ್ಲಿ ನೋಡಿದೆನು ಬೆಳಗಿನಲಿ
ಹಿಮಗಿರಿಯು ಬುದ್ಧನೊಲು ನಿಂತಿದ್ದಿತು
ನಿಸ್ಸೀಮವಾಗಿರುವ ಬಾನು ಬಯಲುಗಳಲ್ಲಿ
ಬಗೆವಕ್ಕಿ ಪಕ್ಕಗಳ ಕೆದರಿದ್ದಿತು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೂಮಳೆ
Next post ರಾವಣಾಂತರಂಗ – ೨೧

ಸಣ್ಣ ಕತೆ

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…