ಭೇದ

ಕರ್ನಾಟಕ ನಮ್ಮದು, ಆದರೆ
ಕಾವೇರಿ ನಮ್ಮದಲ್ಲ ಎನ್ನುವ
ಮನೋ ಭಾವ ಕೆಲವರದ್ದು
ಮನದಿಂದ ಕಿತ್ತೊಗೆದು ಒಂದಾಗಬೇಕು
ಕನ್ನಡಿಗರು ಮೊದಲು ಇದನ್ನು

ಕಾವೇರಿಯಾದರೇನು? ಕೃಷ್ಣೆ, ತುಂಗ
ಭದ್ರ, ಮಹದಾಯಿ ಆದರೇನು?
ರಾಜ್ಯದ ವಿಚಾರ ಬಂದಾಗ ಕನ್ನಡಿಗರೆಲ್ಲ
ಒಂದೇ ಎನ್ನುವ ಮನೋ ಭಾವ ಇರಲಿ

ಮನೆಯೊಳಗೆ ಕಲಹಕೆ
ಸಹೋದರರೇ ದಾಯಾದಿಗಳಂತೆ
ನೆರೆಮನೆಗಳ ಕಲಹದಲಿ
ದಾಯಾದಿಗಳೇ ಒಂದಾಗುವರು

ಓಣಿಯ ಅಥವಾ ಕೇರಿಗಳ ಕಲಹದಲಿ
ಮನೆ-ಮನೆಗಳು ಕಲಹ ಮರೆತು
ಒಂದಾಗಿ ಓಣಿಯೇ ಸೇರಿ ಒಂದಾಗಿ ನಿಲ್ಲುವುವು
ಅದೇ ರೀತಿಯಲ್ಲಿ ನಾವು ಕೂಡ

ರಾಜ್ಯದ ಸಮಸ್ಯೆಗೆ ರಾಜ್ಯವೇ ಒಂದಾಗಿ
ದೇಶದ ಸಮಸ್ಯೆಗೆ ರಾಜ್ಯಗಳೆಲ್ಲಾ ಒಂದಾಗಿ
ಸಮಸ್ಯೆಯನ್ನು ಎದುರಿಸುವ ಮನೋಭಾವ
ಬೆಳೆಸಿಕೊಂಡಾಗಲೇ ಮಾತ್ರ ನಾವು
ನಡೆಸಬಹುದು ನೆಮ್ಮದಿಯ ಜೀವನ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೊನೆಗೀಗ ನೋವೆಂದರೆ…..
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧೦

ಸಣ್ಣ ಕತೆ

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…