ಭೇದ

ಕರ್ನಾಟಕ ನಮ್ಮದು, ಆದರೆ
ಕಾವೇರಿ ನಮ್ಮದಲ್ಲ ಎನ್ನುವ
ಮನೋ ಭಾವ ಕೆಲವರದ್ದು
ಮನದಿಂದ ಕಿತ್ತೊಗೆದು ಒಂದಾಗಬೇಕು
ಕನ್ನಡಿಗರು ಮೊದಲು ಇದನ್ನು

ಕಾವೇರಿಯಾದರೇನು? ಕೃಷ್ಣೆ, ತುಂಗ
ಭದ್ರ, ಮಹದಾಯಿ ಆದರೇನು?
ರಾಜ್ಯದ ವಿಚಾರ ಬಂದಾಗ ಕನ್ನಡಿಗರೆಲ್ಲ
ಒಂದೇ ಎನ್ನುವ ಮನೋ ಭಾವ ಇರಲಿ

ಮನೆಯೊಳಗೆ ಕಲಹಕೆ
ಸಹೋದರರೇ ದಾಯಾದಿಗಳಂತೆ
ನೆರೆಮನೆಗಳ ಕಲಹದಲಿ
ದಾಯಾದಿಗಳೇ ಒಂದಾಗುವರು

ಓಣಿಯ ಅಥವಾ ಕೇರಿಗಳ ಕಲಹದಲಿ
ಮನೆ-ಮನೆಗಳು ಕಲಹ ಮರೆತು
ಒಂದಾಗಿ ಓಣಿಯೇ ಸೇರಿ ಒಂದಾಗಿ ನಿಲ್ಲುವುವು
ಅದೇ ರೀತಿಯಲ್ಲಿ ನಾವು ಕೂಡ

ರಾಜ್ಯದ ಸಮಸ್ಯೆಗೆ ರಾಜ್ಯವೇ ಒಂದಾಗಿ
ದೇಶದ ಸಮಸ್ಯೆಗೆ ರಾಜ್ಯಗಳೆಲ್ಲಾ ಒಂದಾಗಿ
ಸಮಸ್ಯೆಯನ್ನು ಎದುರಿಸುವ ಮನೋಭಾವ
ಬೆಳೆಸಿಕೊಂಡಾಗಲೇ ಮಾತ್ರ ನಾವು
ನಡೆಸಬಹುದು ನೆಮ್ಮದಿಯ ಜೀವನ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೊನೆಗೀಗ ನೋವೆಂದರೆ…..
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧೦

ಸಣ್ಣ ಕತೆ

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…