Home / ಕವನ / ಕವಿತೆ / ಹೊಸ ಬಾಳು

ಹೊಸ ಬಾಳು

ಅರಿತ ಜೀವಿಗಳೆರಡು ಬೆರೆತು
ಸಪ್ತಪದಿಯ ಹಾದಿ ತುಳಿದು
ಜೀವನ ಸಂಗಾತಿಗಳಾಗಿ ನಡೆದು
ಬಾಳ ದೋಣಿಯನೇರಿ ತೀರ ಬಿಡಲು
ಪಯಣವು ಹಾಯಾಗಿ ಸಾಗಿರಲು

ದೂರ ತೀರವ ಸೇರುವ ತವಕ
ನಡೆಯುತಿರಲು ಪ್ರೀತಿಯ ಪುಳಕ
ಪ್ರಣಯದ ಗೀತೆಯ ಹಾಡಿತು ಮನ
ಮಧು ಚಂದ್ರದಲಿ ಒಂದಾದರು ದಿನ
ಕಾಲ ಉರುಳಿ ಕರುಳ ಕುಡಿಗಳ ಜನನ

ಏಳು ಬೀಳಿನ ಅಲೆಗಳಲ್ಲಿ ಸಾಗಿ
ಏರಿಳಿದು ಮುಂದೆ ಸಾಗುತಲಿ ಜೊತೆಯಾಗಿ
ಮಮತೆಯ ಮೂರು ಮಕ್ಕಳ ಜೊತೆ ಸಾಗಿದ
ತುಂಬು ಸಂಸಾರದ ದೋಣಿಯ ಮಧ್ಯ
ಮೋಹದ ಸೆಳೆವಿಗೆ ಸಿಲುಕಿಕೊಂಡಿತ್ತು

ಸ್ವಚ್ಛಂದದ ಸಂಸಾರದ ನಡುವೆ
ಪತಿಯ ಅರಿವಿಗೆ ಮಂಕು ಕವಿದಿತ್ತು
ಮೋಹಿನಿಗೆ ಮೋಹಕೆ ಮನ ಸೋತಿತ್ತು
ಪ್ರೀತಿಯ ಬಲೆಯೊಳಗೆ ಜೀವ ಸಿಲುಕಿತ್ತು
ಬೇರೆ ಸುಂದರ ದೋಣಿ ಏರುವ ಮನಸ್ಸಾಗಿತ್ತು

ಸವತಿಯ ಚೆಲ್ಲಾಟಕೆ ರೋಸಿದ ಸತಿಯು
ದಿನವೂ ಹರಿಸಿದಳು ಕಣ್ಣೀರ ಕೋಡಿಯ
ಸಂಸಾರ ಸೂತ್ರ ಹರಿದ ಗಾಳಿ ಪಟವಾಯಿತೆಂದು
ಅಂಗಲಾಚಿ ತಿದ್ದಿ ಬುದ್ಧಿ ಹೇಳಿ ಬೇಡಿಕೊಂಡರೂ
ಬಿಡದಾದ ಪತಿಯು ಮೋಹಿನಿಯ ಸಂಪರ್ಕವನ್ನು

ಮಡದಿ ಮಕ್ಕಳ ದೂರ ಮಾಡಲಾಗದೆ
ಪ್ರೇಯಸಿಯ ಸಂಗವನ್ನು ಬಿಡಲಾಗದೆ
ಅತಂತ್ರದಿ ಅವನು ಕುಡಿತಕೆ ದಾಸನಾಗಿ
ದಿನಗಳು ಕಳೆದ ಮೇಲೆ ತಪ್ಪಿನ ಅರಿವಾಗಿ
ಪ್ರಾಯಶ್ಚಿತ್ತವ ಬಯಸಿದ ಮಾಡಿದ ತಪ್ಪಿಗಾಗಿ

ಮಡದಿಯ ಬಳಿಯಲಿ ಮೌನವ ಮುರಿದು
ಮಾಡಿದ ತಪ್ಪನು ಮನ್ನಿಸಿ ಬಿಡು ನೀ ಎಂದು
ಅದೇ ತಪ್ಪು ಮಾಡೆನೆಂಬ ಭಾಷೆಯ ಇತ್ತು
ರತ್ನವೇ ನೀನು ನನ್ನೊಡನೆ ಇರುವಾಗಲೂ
ಅರಿಯದೆ ಹೋಗಿ ದ್ರೋಹವ ಮಾಡಿದೆ ಎನ್ನಲು
ಸತಿಯ ಮನ ಕರಗಿ ನೀರಾಗಿ ಹೋಗಲು

ವಸಂತನ ಆಗಮನದಿ ಪ್ರಕೃತಿ ಹಸಿರಾದಂತೆ
ಬಾಡಿದ ಬದುಕದು ಮತ್ತೆ ಚಿಗುರೊಡೆದು
ಇಬ್ಬರ ಮನದೊಳು ಆಸೆಗಳು ಚಿಗುರಿದವು
ಅರಿತ ಜೀವಿಗಳೆರಡು ಒಂದೊಂದಾಗಿ ಬೆರೆತು
ದೋಣಿಯ ಪಯಣವು ಮತ್ತೆ ಸಾಗಿತ್ತು
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....