ಹೊಸ ಬಾಳು

ಅರಿತ ಜೀವಿಗಳೆರಡು ಬೆರೆತು
ಸಪ್ತಪದಿಯ ಹಾದಿ ತುಳಿದು
ಜೀವನ ಸಂಗಾತಿಗಳಾಗಿ ನಡೆದು
ಬಾಳ ದೋಣಿಯನೇರಿ ತೀರ ಬಿಡಲು
ಪಯಣವು ಹಾಯಾಗಿ ಸಾಗಿರಲು

ದೂರ ತೀರವ ಸೇರುವ ತವಕ
ನಡೆಯುತಿರಲು ಪ್ರೀತಿಯ ಪುಳಕ
ಪ್ರಣಯದ ಗೀತೆಯ ಹಾಡಿತು ಮನ
ಮಧು ಚಂದ್ರದಲಿ ಒಂದಾದರು ದಿನ
ಕಾಲ ಉರುಳಿ ಕರುಳ ಕುಡಿಗಳ ಜನನ

ಏಳು ಬೀಳಿನ ಅಲೆಗಳಲ್ಲಿ ಸಾಗಿ
ಏರಿಳಿದು ಮುಂದೆ ಸಾಗುತಲಿ ಜೊತೆಯಾಗಿ
ಮಮತೆಯ ಮೂರು ಮಕ್ಕಳ ಜೊತೆ ಸಾಗಿದ
ತುಂಬು ಸಂಸಾರದ ದೋಣಿಯ ಮಧ್ಯ
ಮೋಹದ ಸೆಳೆವಿಗೆ ಸಿಲುಕಿಕೊಂಡಿತ್ತು

ಸ್ವಚ್ಛಂದದ ಸಂಸಾರದ ನಡುವೆ
ಪತಿಯ ಅರಿವಿಗೆ ಮಂಕು ಕವಿದಿತ್ತು
ಮೋಹಿನಿಗೆ ಮೋಹಕೆ ಮನ ಸೋತಿತ್ತು
ಪ್ರೀತಿಯ ಬಲೆಯೊಳಗೆ ಜೀವ ಸಿಲುಕಿತ್ತು
ಬೇರೆ ಸುಂದರ ದೋಣಿ ಏರುವ ಮನಸ್ಸಾಗಿತ್ತು

ಸವತಿಯ ಚೆಲ್ಲಾಟಕೆ ರೋಸಿದ ಸತಿಯು
ದಿನವೂ ಹರಿಸಿದಳು ಕಣ್ಣೀರ ಕೋಡಿಯ
ಸಂಸಾರ ಸೂತ್ರ ಹರಿದ ಗಾಳಿ ಪಟವಾಯಿತೆಂದು
ಅಂಗಲಾಚಿ ತಿದ್ದಿ ಬುದ್ಧಿ ಹೇಳಿ ಬೇಡಿಕೊಂಡರೂ
ಬಿಡದಾದ ಪತಿಯು ಮೋಹಿನಿಯ ಸಂಪರ್ಕವನ್ನು

ಮಡದಿ ಮಕ್ಕಳ ದೂರ ಮಾಡಲಾಗದೆ
ಪ್ರೇಯಸಿಯ ಸಂಗವನ್ನು ಬಿಡಲಾಗದೆ
ಅತಂತ್ರದಿ ಅವನು ಕುಡಿತಕೆ ದಾಸನಾಗಿ
ದಿನಗಳು ಕಳೆದ ಮೇಲೆ ತಪ್ಪಿನ ಅರಿವಾಗಿ
ಪ್ರಾಯಶ್ಚಿತ್ತವ ಬಯಸಿದ ಮಾಡಿದ ತಪ್ಪಿಗಾಗಿ

ಮಡದಿಯ ಬಳಿಯಲಿ ಮೌನವ ಮುರಿದು
ಮಾಡಿದ ತಪ್ಪನು ಮನ್ನಿಸಿ ಬಿಡು ನೀ ಎಂದು
ಅದೇ ತಪ್ಪು ಮಾಡೆನೆಂಬ ಭಾಷೆಯ ಇತ್ತು
ರತ್ನವೇ ನೀನು ನನ್ನೊಡನೆ ಇರುವಾಗಲೂ
ಅರಿಯದೆ ಹೋಗಿ ದ್ರೋಹವ ಮಾಡಿದೆ ಎನ್ನಲು
ಸತಿಯ ಮನ ಕರಗಿ ನೀರಾಗಿ ಹೋಗಲು

ವಸಂತನ ಆಗಮನದಿ ಪ್ರಕೃತಿ ಹಸಿರಾದಂತೆ
ಬಾಡಿದ ಬದುಕದು ಮತ್ತೆ ಚಿಗುರೊಡೆದು
ಇಬ್ಬರ ಮನದೊಳು ಆಸೆಗಳು ಚಿಗುರಿದವು
ಅರಿತ ಜೀವಿಗಳೆರಡು ಒಂದೊಂದಾಗಿ ಬೆರೆತು
ದೋಣಿಯ ಪಯಣವು ಮತ್ತೆ ಸಾಗಿತ್ತು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒರೆಸಿಹೋಗುತ್ತವೆ
Next post ಸಂತೆಯಲ್ಲಿ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…