ಹೊಸ ಬಾಳು

ಅರಿತ ಜೀವಿಗಳೆರಡು ಬೆರೆತು
ಸಪ್ತಪದಿಯ ಹಾದಿ ತುಳಿದು
ಜೀವನ ಸಂಗಾತಿಗಳಾಗಿ ನಡೆದು
ಬಾಳ ದೋಣಿಯನೇರಿ ತೀರ ಬಿಡಲು
ಪಯಣವು ಹಾಯಾಗಿ ಸಾಗಿರಲು

ದೂರ ತೀರವ ಸೇರುವ ತವಕ
ನಡೆಯುತಿರಲು ಪ್ರೀತಿಯ ಪುಳಕ
ಪ್ರಣಯದ ಗೀತೆಯ ಹಾಡಿತು ಮನ
ಮಧು ಚಂದ್ರದಲಿ ಒಂದಾದರು ದಿನ
ಕಾಲ ಉರುಳಿ ಕರುಳ ಕುಡಿಗಳ ಜನನ

ಏಳು ಬೀಳಿನ ಅಲೆಗಳಲ್ಲಿ ಸಾಗಿ
ಏರಿಳಿದು ಮುಂದೆ ಸಾಗುತಲಿ ಜೊತೆಯಾಗಿ
ಮಮತೆಯ ಮೂರು ಮಕ್ಕಳ ಜೊತೆ ಸಾಗಿದ
ತುಂಬು ಸಂಸಾರದ ದೋಣಿಯ ಮಧ್ಯ
ಮೋಹದ ಸೆಳೆವಿಗೆ ಸಿಲುಕಿಕೊಂಡಿತ್ತು

ಸ್ವಚ್ಛಂದದ ಸಂಸಾರದ ನಡುವೆ
ಪತಿಯ ಅರಿವಿಗೆ ಮಂಕು ಕವಿದಿತ್ತು
ಮೋಹಿನಿಗೆ ಮೋಹಕೆ ಮನ ಸೋತಿತ್ತು
ಪ್ರೀತಿಯ ಬಲೆಯೊಳಗೆ ಜೀವ ಸಿಲುಕಿತ್ತು
ಬೇರೆ ಸುಂದರ ದೋಣಿ ಏರುವ ಮನಸ್ಸಾಗಿತ್ತು

ಸವತಿಯ ಚೆಲ್ಲಾಟಕೆ ರೋಸಿದ ಸತಿಯು
ದಿನವೂ ಹರಿಸಿದಳು ಕಣ್ಣೀರ ಕೋಡಿಯ
ಸಂಸಾರ ಸೂತ್ರ ಹರಿದ ಗಾಳಿ ಪಟವಾಯಿತೆಂದು
ಅಂಗಲಾಚಿ ತಿದ್ದಿ ಬುದ್ಧಿ ಹೇಳಿ ಬೇಡಿಕೊಂಡರೂ
ಬಿಡದಾದ ಪತಿಯು ಮೋಹಿನಿಯ ಸಂಪರ್ಕವನ್ನು

ಮಡದಿ ಮಕ್ಕಳ ದೂರ ಮಾಡಲಾಗದೆ
ಪ್ರೇಯಸಿಯ ಸಂಗವನ್ನು ಬಿಡಲಾಗದೆ
ಅತಂತ್ರದಿ ಅವನು ಕುಡಿತಕೆ ದಾಸನಾಗಿ
ದಿನಗಳು ಕಳೆದ ಮೇಲೆ ತಪ್ಪಿನ ಅರಿವಾಗಿ
ಪ್ರಾಯಶ್ಚಿತ್ತವ ಬಯಸಿದ ಮಾಡಿದ ತಪ್ಪಿಗಾಗಿ

ಮಡದಿಯ ಬಳಿಯಲಿ ಮೌನವ ಮುರಿದು
ಮಾಡಿದ ತಪ್ಪನು ಮನ್ನಿಸಿ ಬಿಡು ನೀ ಎಂದು
ಅದೇ ತಪ್ಪು ಮಾಡೆನೆಂಬ ಭಾಷೆಯ ಇತ್ತು
ರತ್ನವೇ ನೀನು ನನ್ನೊಡನೆ ಇರುವಾಗಲೂ
ಅರಿಯದೆ ಹೋಗಿ ದ್ರೋಹವ ಮಾಡಿದೆ ಎನ್ನಲು
ಸತಿಯ ಮನ ಕರಗಿ ನೀರಾಗಿ ಹೋಗಲು

ವಸಂತನ ಆಗಮನದಿ ಪ್ರಕೃತಿ ಹಸಿರಾದಂತೆ
ಬಾಡಿದ ಬದುಕದು ಮತ್ತೆ ಚಿಗುರೊಡೆದು
ಇಬ್ಬರ ಮನದೊಳು ಆಸೆಗಳು ಚಿಗುರಿದವು
ಅರಿತ ಜೀವಿಗಳೆರಡು ಒಂದೊಂದಾಗಿ ಬೆರೆತು
ದೋಣಿಯ ಪಯಣವು ಮತ್ತೆ ಸಾಗಿತ್ತು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒರೆಸಿಹೋಗುತ್ತವೆ
Next post ಸಂತೆಯಲ್ಲಿ

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…