Home / ಕವನ / ಕವಿತೆ / ಹೊಸ ಬಾಳು

ಹೊಸ ಬಾಳು

ಅರಿತ ಜೀವಿಗಳೆರಡು ಬೆರೆತು
ಸಪ್ತಪದಿಯ ಹಾದಿ ತುಳಿದು
ಜೀವನ ಸಂಗಾತಿಗಳಾಗಿ ನಡೆದು
ಬಾಳ ದೋಣಿಯನೇರಿ ತೀರ ಬಿಡಲು
ಪಯಣವು ಹಾಯಾಗಿ ಸಾಗಿರಲು

ದೂರ ತೀರವ ಸೇರುವ ತವಕ
ನಡೆಯುತಿರಲು ಪ್ರೀತಿಯ ಪುಳಕ
ಪ್ರಣಯದ ಗೀತೆಯ ಹಾಡಿತು ಮನ
ಮಧು ಚಂದ್ರದಲಿ ಒಂದಾದರು ದಿನ
ಕಾಲ ಉರುಳಿ ಕರುಳ ಕುಡಿಗಳ ಜನನ

ಏಳು ಬೀಳಿನ ಅಲೆಗಳಲ್ಲಿ ಸಾಗಿ
ಏರಿಳಿದು ಮುಂದೆ ಸಾಗುತಲಿ ಜೊತೆಯಾಗಿ
ಮಮತೆಯ ಮೂರು ಮಕ್ಕಳ ಜೊತೆ ಸಾಗಿದ
ತುಂಬು ಸಂಸಾರದ ದೋಣಿಯ ಮಧ್ಯ
ಮೋಹದ ಸೆಳೆವಿಗೆ ಸಿಲುಕಿಕೊಂಡಿತ್ತು

ಸ್ವಚ್ಛಂದದ ಸಂಸಾರದ ನಡುವೆ
ಪತಿಯ ಅರಿವಿಗೆ ಮಂಕು ಕವಿದಿತ್ತು
ಮೋಹಿನಿಗೆ ಮೋಹಕೆ ಮನ ಸೋತಿತ್ತು
ಪ್ರೀತಿಯ ಬಲೆಯೊಳಗೆ ಜೀವ ಸಿಲುಕಿತ್ತು
ಬೇರೆ ಸುಂದರ ದೋಣಿ ಏರುವ ಮನಸ್ಸಾಗಿತ್ತು

ಸವತಿಯ ಚೆಲ್ಲಾಟಕೆ ರೋಸಿದ ಸತಿಯು
ದಿನವೂ ಹರಿಸಿದಳು ಕಣ್ಣೀರ ಕೋಡಿಯ
ಸಂಸಾರ ಸೂತ್ರ ಹರಿದ ಗಾಳಿ ಪಟವಾಯಿತೆಂದು
ಅಂಗಲಾಚಿ ತಿದ್ದಿ ಬುದ್ಧಿ ಹೇಳಿ ಬೇಡಿಕೊಂಡರೂ
ಬಿಡದಾದ ಪತಿಯು ಮೋಹಿನಿಯ ಸಂಪರ್ಕವನ್ನು

ಮಡದಿ ಮಕ್ಕಳ ದೂರ ಮಾಡಲಾಗದೆ
ಪ್ರೇಯಸಿಯ ಸಂಗವನ್ನು ಬಿಡಲಾಗದೆ
ಅತಂತ್ರದಿ ಅವನು ಕುಡಿತಕೆ ದಾಸನಾಗಿ
ದಿನಗಳು ಕಳೆದ ಮೇಲೆ ತಪ್ಪಿನ ಅರಿವಾಗಿ
ಪ್ರಾಯಶ್ಚಿತ್ತವ ಬಯಸಿದ ಮಾಡಿದ ತಪ್ಪಿಗಾಗಿ

ಮಡದಿಯ ಬಳಿಯಲಿ ಮೌನವ ಮುರಿದು
ಮಾಡಿದ ತಪ್ಪನು ಮನ್ನಿಸಿ ಬಿಡು ನೀ ಎಂದು
ಅದೇ ತಪ್ಪು ಮಾಡೆನೆಂಬ ಭಾಷೆಯ ಇತ್ತು
ರತ್ನವೇ ನೀನು ನನ್ನೊಡನೆ ಇರುವಾಗಲೂ
ಅರಿಯದೆ ಹೋಗಿ ದ್ರೋಹವ ಮಾಡಿದೆ ಎನ್ನಲು
ಸತಿಯ ಮನ ಕರಗಿ ನೀರಾಗಿ ಹೋಗಲು

ವಸಂತನ ಆಗಮನದಿ ಪ್ರಕೃತಿ ಹಸಿರಾದಂತೆ
ಬಾಡಿದ ಬದುಕದು ಮತ್ತೆ ಚಿಗುರೊಡೆದು
ಇಬ್ಬರ ಮನದೊಳು ಆಸೆಗಳು ಚಿಗುರಿದವು
ಅರಿತ ಜೀವಿಗಳೆರಡು ಒಂದೊಂದಾಗಿ ಬೆರೆತು
ದೋಣಿಯ ಪಯಣವು ಮತ್ತೆ ಸಾಗಿತ್ತು
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...