Home / ಕವನ / ಕವಿತೆ / ಧೂಮಪಾನ

ಧೂಮಪಾನ

ಹೇ…ಸಿಗರೇಟು ನೀನೆಷ್ಟು ಗ್ರೇಟು
ನಿನ್ನ ನೀ ಸುಟ್ಟುಕೊಂಡರೂ ಕೊಡುವೆ ಟೇಸ್ಟು
ಧುಮ್ಮೆಂದು ಧೂಮವ ಸೂಸುತ್ತಾ
ಧೂಳೆಬ್ಬಿಸುವೆ ಧೂಮ ವ್ಯಸನಿಗಳನು

ಮೊದ ಮೊದಲು ನಿನ್ನ ನೋಡಲು ನನಗೆ
ಕುತೂಹಲದಿ ಆಸೆಯಾಯ್ತು ಚುಂಬಿಸಲು
ಕಳೆಯುತ್ತಾ ಕಳೆಯುತ್ತಾ ದಿನಗಳಾಗಲು
ನಿನ್ನೊಳಗೆ ಲೀನವಾಗಿಸಿಬಿಟ್ಟೆ ನನ್ನನ್ನು

ಕೆಲವು ಸಮಯದಲ್ಲಿ ಶೋಕಿಗಾಗಿ ಸೇದಿದೆ
ಹಲವು ಬಾರಿ ಚಿಂತೆ ಮರೆಯಲೆಂದು ಸೇದಿದೆ
ಇನ್ನೂ ಕೆಲವೊಮ್ಮೆ ಒತ್ತಡವ ತಡೆಯದೇ ಸೇದಿದೆ
ಮುಂದೆ ಬಿತ್ತು ಭಾರವೆಲ್ಲ ನನ್ನ ತಲೆಯ ಮೇಲೆಯೇ

ನೀನು ಸುಡುತ್ತಾ ಹೋದೆ ನಿನ್ನ ಅಂದ
ನನ್ನೊಳಗೆ ನಾ ಬೆಂದೆ ನಿನ್ನ ಸೇದುತ್ತಾ
ಮೊದಲು ಅರಿಯಲಿಲ್ಲ ನಾ ಭ್ರಮೆಯಿಂದ
ಹಚ್ಚಿದ ಬೆಂಕಿ ನಿನಗಷ್ಟೇ ಅಲ್ಲ ನನಗೂ ಅಂತ

ಧೂಮಪಾನಿಯಾಗಿ ದಮ್ಮು ಸೇರಿಸಿಕೊಂಡೆ
ಕರಳುಗಳನ್ನು ಸುಟ್ಟು ಕರಕಲಾಗಿಸಿಕೊಂಡೆ
ಮಹಾಮಾರಿ ಕ್ಯಾನ್ಸರನ್ನೂ ಬರಮಾಡಿಕೊಂಡೆ
ನನ್ನ ಸಾವು ಸನಿಹಕೆ ನಾನೇ ಕಾರಣನಾದೆ

ಕುತೂಹಲವು ಆಸೆಯಾಯ್ತು
ಆಸೆಯು ಅಭಿರುಚಿಯಾಯ್ತು
ಅಭಿರುಚಿಯು ಹವ್ಯಾಸವಾಯ್ತು
ಹವ್ಯಾಸವು ಚಟವಾಯ್ತು
ಚಟವು ದುಶ್ಚಟವಾಗಿ ಚಟ್ಟಕ್ಕೆ ಕರೆದೊಯ್ಯಿತಲ್ಲೋ….

ನಾ ಮಾಡಿದ ತಪ್ಪೀಗ ಅರಿವಾದರೇನು ಫಲ
ಬದುಕಿ ಬಾಳಬಲ್ಲೆನೇ ನಾನು ಸಬಲತೆಯಿಂದ
ನನ್ನ ಈ ಬದುಕು ನನಗೆ ಕೊನೆಯಾಗಲಿ
ಧೂಮಪಾನಿಗಳಿಗೆ ನಾ ಮಾದರಿಯಾಗಲಿ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...