Home / ಕವನ / ಕವಿತೆ / ಧೂಮಪಾನ

ಧೂಮಪಾನ

ಹೇ…ಸಿಗರೇಟು ನೀನೆಷ್ಟು ಗ್ರೇಟು
ನಿನ್ನ ನೀ ಸುಟ್ಟುಕೊಂಡರೂ ಕೊಡುವೆ ಟೇಸ್ಟು
ಧುಮ್ಮೆಂದು ಧೂಮವ ಸೂಸುತ್ತಾ
ಧೂಳೆಬ್ಬಿಸುವೆ ಧೂಮ ವ್ಯಸನಿಗಳನು

ಮೊದ ಮೊದಲು ನಿನ್ನ ನೋಡಲು ನನಗೆ
ಕುತೂಹಲದಿ ಆಸೆಯಾಯ್ತು ಚುಂಬಿಸಲು
ಕಳೆಯುತ್ತಾ ಕಳೆಯುತ್ತಾ ದಿನಗಳಾಗಲು
ನಿನ್ನೊಳಗೆ ಲೀನವಾಗಿಸಿಬಿಟ್ಟೆ ನನ್ನನ್ನು

ಕೆಲವು ಸಮಯದಲ್ಲಿ ಶೋಕಿಗಾಗಿ ಸೇದಿದೆ
ಹಲವು ಬಾರಿ ಚಿಂತೆ ಮರೆಯಲೆಂದು ಸೇದಿದೆ
ಇನ್ನೂ ಕೆಲವೊಮ್ಮೆ ಒತ್ತಡವ ತಡೆಯದೇ ಸೇದಿದೆ
ಮುಂದೆ ಬಿತ್ತು ಭಾರವೆಲ್ಲ ನನ್ನ ತಲೆಯ ಮೇಲೆಯೇ

ನೀನು ಸುಡುತ್ತಾ ಹೋದೆ ನಿನ್ನ ಅಂದ
ನನ್ನೊಳಗೆ ನಾ ಬೆಂದೆ ನಿನ್ನ ಸೇದುತ್ತಾ
ಮೊದಲು ಅರಿಯಲಿಲ್ಲ ನಾ ಭ್ರಮೆಯಿಂದ
ಹಚ್ಚಿದ ಬೆಂಕಿ ನಿನಗಷ್ಟೇ ಅಲ್ಲ ನನಗೂ ಅಂತ

ಧೂಮಪಾನಿಯಾಗಿ ದಮ್ಮು ಸೇರಿಸಿಕೊಂಡೆ
ಕರಳುಗಳನ್ನು ಸುಟ್ಟು ಕರಕಲಾಗಿಸಿಕೊಂಡೆ
ಮಹಾಮಾರಿ ಕ್ಯಾನ್ಸರನ್ನೂ ಬರಮಾಡಿಕೊಂಡೆ
ನನ್ನ ಸಾವು ಸನಿಹಕೆ ನಾನೇ ಕಾರಣನಾದೆ

ಕುತೂಹಲವು ಆಸೆಯಾಯ್ತು
ಆಸೆಯು ಅಭಿರುಚಿಯಾಯ್ತು
ಅಭಿರುಚಿಯು ಹವ್ಯಾಸವಾಯ್ತು
ಹವ್ಯಾಸವು ಚಟವಾಯ್ತು
ಚಟವು ದುಶ್ಚಟವಾಗಿ ಚಟ್ಟಕ್ಕೆ ಕರೆದೊಯ್ಯಿತಲ್ಲೋ….

ನಾ ಮಾಡಿದ ತಪ್ಪೀಗ ಅರಿವಾದರೇನು ಫಲ
ಬದುಕಿ ಬಾಳಬಲ್ಲೆನೇ ನಾನು ಸಬಲತೆಯಿಂದ
ನನ್ನ ಈ ಬದುಕು ನನಗೆ ಕೊನೆಯಾಗಲಿ
ಧೂಮಪಾನಿಗಳಿಗೆ ನಾ ಮಾದರಿಯಾಗಲಿ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...