Home / ಕವನ / ಕವಿತೆ / ಧೂಮಪಾನ

ಧೂಮಪಾನ

ಹೇ…ಸಿಗರೇಟು ನೀನೆಷ್ಟು ಗ್ರೇಟು
ನಿನ್ನ ನೀ ಸುಟ್ಟುಕೊಂಡರೂ ಕೊಡುವೆ ಟೇಸ್ಟು
ಧುಮ್ಮೆಂದು ಧೂಮವ ಸೂಸುತ್ತಾ
ಧೂಳೆಬ್ಬಿಸುವೆ ಧೂಮ ವ್ಯಸನಿಗಳನು

ಮೊದ ಮೊದಲು ನಿನ್ನ ನೋಡಲು ನನಗೆ
ಕುತೂಹಲದಿ ಆಸೆಯಾಯ್ತು ಚುಂಬಿಸಲು
ಕಳೆಯುತ್ತಾ ಕಳೆಯುತ್ತಾ ದಿನಗಳಾಗಲು
ನಿನ್ನೊಳಗೆ ಲೀನವಾಗಿಸಿಬಿಟ್ಟೆ ನನ್ನನ್ನು

ಕೆಲವು ಸಮಯದಲ್ಲಿ ಶೋಕಿಗಾಗಿ ಸೇದಿದೆ
ಹಲವು ಬಾರಿ ಚಿಂತೆ ಮರೆಯಲೆಂದು ಸೇದಿದೆ
ಇನ್ನೂ ಕೆಲವೊಮ್ಮೆ ಒತ್ತಡವ ತಡೆಯದೇ ಸೇದಿದೆ
ಮುಂದೆ ಬಿತ್ತು ಭಾರವೆಲ್ಲ ನನ್ನ ತಲೆಯ ಮೇಲೆಯೇ

ನೀನು ಸುಡುತ್ತಾ ಹೋದೆ ನಿನ್ನ ಅಂದ
ನನ್ನೊಳಗೆ ನಾ ಬೆಂದೆ ನಿನ್ನ ಸೇದುತ್ತಾ
ಮೊದಲು ಅರಿಯಲಿಲ್ಲ ನಾ ಭ್ರಮೆಯಿಂದ
ಹಚ್ಚಿದ ಬೆಂಕಿ ನಿನಗಷ್ಟೇ ಅಲ್ಲ ನನಗೂ ಅಂತ

ಧೂಮಪಾನಿಯಾಗಿ ದಮ್ಮು ಸೇರಿಸಿಕೊಂಡೆ
ಕರಳುಗಳನ್ನು ಸುಟ್ಟು ಕರಕಲಾಗಿಸಿಕೊಂಡೆ
ಮಹಾಮಾರಿ ಕ್ಯಾನ್ಸರನ್ನೂ ಬರಮಾಡಿಕೊಂಡೆ
ನನ್ನ ಸಾವು ಸನಿಹಕೆ ನಾನೇ ಕಾರಣನಾದೆ

ಕುತೂಹಲವು ಆಸೆಯಾಯ್ತು
ಆಸೆಯು ಅಭಿರುಚಿಯಾಯ್ತು
ಅಭಿರುಚಿಯು ಹವ್ಯಾಸವಾಯ್ತು
ಹವ್ಯಾಸವು ಚಟವಾಯ್ತು
ಚಟವು ದುಶ್ಚಟವಾಗಿ ಚಟ್ಟಕ್ಕೆ ಕರೆದೊಯ್ಯಿತಲ್ಲೋ….

ನಾ ಮಾಡಿದ ತಪ್ಪೀಗ ಅರಿವಾದರೇನು ಫಲ
ಬದುಕಿ ಬಾಳಬಲ್ಲೆನೇ ನಾನು ಸಬಲತೆಯಿಂದ
ನನ್ನ ಈ ಬದುಕು ನನಗೆ ಕೊನೆಯಾಗಲಿ
ಧೂಮಪಾನಿಗಳಿಗೆ ನಾ ಮಾದರಿಯಾಗಲಿ
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...