ನಂದಿ ಬೆಟ್ಟವ ಕಂಡೆ

ಹೆಂಗ ಹೇಳಲಿ ನಾನು ಹೇಳಲಾರದ ಹಿಗ್ಗು
ಯೋಗ ನಂದೀಶ್ವರನ ಶಿಖರ ಕಂಡೆ
ಭೋಗನಂದಿಯು ಕೆಳಗ ಯೋಗನಂದಿಯು ಮ್ಯಾಗ
ನಂದಿ ಬೆಟ್ಟದ ಖುಶಿಯ ಬೆಳಕು ಕಂಡೆ

ಬೆಟ್ಟ ಬೆಟ್ಟದ ಮ್ಯಾಲೆ ಗಟ್ಟ ಗಟ್ಟದ ಮಾಲೆ
ನೋಡಿಲ್ಲಿ ನಿಂದಾನು ನಂದಿದೇವಾ
ಇವನೆ ಪ್ರೀತಿಯ ದೇವಾ ವಿಶ್ವಶಕ್ತಿಯ ಕಾವಾ
ಜಗದಾದಿ ಯುಗದಾದಿ ಆದಿದೇವಾ

ಮುತ್ತು ಮಾಣಿಕ ರಾಣಿ ಮುಕ್ತಾಂಬೆ ಪಾರ್ವತಿಯು
ನೋಡಿಲ್ಲಿ ಮಕ್ಕಳನ್ನು ಕೂಗುತಾಳು
ಮುದ್ದು ಮಕ್ಕಳೆ ಬನ್ನಿ ಚಿನ್ನ ಚಲುವರೆ ಬನ್ನಿ
ಮುತ್ತು ರತ್ನವ ತಾಯಿ ತೂರುತಾಳು

ನಂದಿ ಬೆಟ್ಟವ ಕಂಡೆ ನಂದಿ ದೇವನ ಕಂಡೆ
ನಂದಿ ದೇವನ ತಾಯಿ ದೇವಿ ಕಂಡೆ
ಆತ್ಮ ಶಿಖರವ ಕಂಡೆ ಸತ್ಯ ಶಿಖರವ ಕಂಡೆ
ಶಿವಶಿವಾ ಶಿವಜ್ಞಾನ ಮುಕುರ ಕಂಡೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೆಮ್ಮದಿಯ ತಾಣ
Next post ಕಾಸಿನ ಬಿಸಿಗೆ ಕರಗುವ ಮೌಲ್ಯವುಳಿವುದೆಂತು?

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…