ಹಸಿರು ಮರಗಳು ತೇರು ಎಳೆದಿವೆ

ಹಸಿರು ಮರಗಳು ತೇರು ಎಳೆದಿವೆ
ಇಗೋ ನೀಲಿಯ ಮುಗಿಲಲಿ
ಶಿಖರ ಸಾಲ್ಗಳು ತಬ್ಬಿ ನಿಂದಿವೆ
ಅಗೋ ಧಾರೆಯ ಜಲದಲಿ

ಮುಗಿಯಲಾರದ ಮುಗಿಲು ಮುಗಿದಿದೆ
ಕ್ಷಿತಿಜ ಓಕುಳಿಯಾಡಿದೆ
ಸಿಡಿಲು ಘಂಟಾನಾದ ಮೊಳಗಿದೆ
ಕಡಲು ಭೂಮಿಯ ತಬ್ಬಿದೆ

ಮಿನುಗು ತಾರೆಯ ಗಗನ ನೀರೆಯ
ಕೇಶ ಹಾಸಿದೆ ಹುಡಿಯಲಿ
ಹಗಲು ರಾತ್ರಿಯ ಮಿಲನ ಮಾಡಿದೆ
ಕಾಡು ಕಂದರ ಕೊಳದಲಿ

ಮೌನ ಗಿಣಿಯು ಮಾತನಾಡಿದೆ
ಮರಿಗೆ ಗುಟುಕನು ಉಣಿಸಿದೆ
ಮಗುವು ತಾಯಿಯ ತಬ್ಬಿ ಹಿಡಿದಿದೆ
ಎದೆಯ ಹಾಲನು ಕುಡಿದಿದೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಕ್ಕುಬಿಡು
Next post ಲಾಭವದಾರಿಗೊ? ರಸ ಗೊಬ್ಬರವಿದ್ಯಾಕೋ?

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…