ನಕ್ಕು ಬಿಡು ಗೆಳತಿ
ಅಂಜದಿರು ಅಳುಕದಿರು
ನಿರಾಶೆಯಲಿ ಧೃತಿಗೆಡದಿರು
ಕಂಗೆಡದಿರು, ಕಷ್ಟಗಳೆದುರು.
ಜೀವನವಲ್ಲ ಹೂವಿನ ಹಾಸಿಗೆ
ನೋವು ನಲಿವುಗಳ ಒಸಗೆ
ತಾಳಿದವನು ಬಾಳಿಯಾನು
ಮನನವಾಗಲಿ ಮುತ್ತಿನಂತಹ ಮಾತು.
ತಾಳು ತಾಳು ಧೈರ್ಯ ತಾಳು
ಧೈರ್ಯವೇ ಸಂಜೀವಿನಿ ಕೇಳು
ತಾಳುವಿಕೆಯ ತಪದ ಫಲ
ಸಿಕ್ಕೀತು ಬಿಡದಿರು ಛಲ.
ಇದ್ದೀತು ಹಾದಿಯಲ್ಲಿ ಕಲ್ಲು ಮುಳ್ಳು
ಅಂಜಿಕೆ ಆತಂಕವ ದೂರ ತಳ್ಳು
ಇರುಳ ಹಿಂದೆಯೇ ಹಗಲು
ಬಂದಾಗ ಸಂತಸದ ಹೊನಲು.
ಗೆಳತಿ, ಚಿಂತೆಬಿಡು, ನಕ್ಕುಬಿಡು
ನಿನ್ನ ನಗುವಲ್ಲಿ ಕೊಚ್ಚಿ ಹೋಗಲಿ
ದುಃಖ ದುಮ್ಮಾನದ ದುಗುಡ.
*****
Related Post
ಸಣ್ಣ ಕತೆ
-
ನಂಬಿಕೆ
ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…
-
ಕಲಾವಿದ
"ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…
-
ಮಿಂಚು
"ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…
-
ಮೈಥಿಲೀ
"ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…
-
ತೊಳೆದ ಮುತ್ತು
ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…