ನಕ್ಕುಬಿಡು

ನಕ್ಕು ಬಿಡು ಗೆಳತಿ
ಅಂಜದಿರು ಅಳುಕದಿರು
ನಿರಾಶೆಯಲಿ ಧೃತಿಗೆಡದಿರು
ಕಂಗೆಡದಿರು, ಕಷ್ಟಗಳೆದುರು.
ಜೀವನವಲ್ಲ ಹೂವಿನ ಹಾಸಿಗೆ
ನೋವು ನಲಿವುಗಳ ಒಸಗೆ
ತಾಳಿದವನು ಬಾಳಿಯಾನು
ಮನನವಾಗಲಿ ಮುತ್ತಿನಂತಹ ಮಾತು.
ತಾಳು ತಾಳು ಧೈರ್‍ಯ ತಾಳು
ಧೈರ್‍ಯವೇ ಸಂಜೀವಿನಿ ಕೇಳು
ತಾಳುವಿಕೆಯ ತಪದ ಫಲ
ಸಿಕ್ಕೀತು ಬಿಡದಿರು ಛಲ.
ಇದ್ದೀತು ಹಾದಿಯಲ್ಲಿ ಕಲ್ಲು ಮುಳ್ಳು
ಅಂಜಿಕೆ ಆತಂಕವ ದೂರ ತಳ್ಳು
ಇರುಳ ಹಿಂದೆಯೇ ಹಗಲು
ಬಂದಾಗ ಸಂತಸದ ಹೊನಲು.
ಗೆಳತಿ, ಚಿಂತೆಬಿಡು, ನಕ್ಕುಬಿಡು
ನಿನ್ನ ನಗುವಲ್ಲಿ ಕೊಚ್ಚಿ ಹೋಗಲಿ
ದುಃಖ ದುಮ್ಮಾನದ ದುಗುಡ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ನೀರಿನಂಥ ಮನಸ್ಸು
Next post ಹಸಿರು ಮರಗಳು ತೇರು ಎಳೆದಿವೆ

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…