ನೀ ಗಮನಿಸು

ಬೆಳ್ಳಕ್ಕಿ ಹಿಂಡು ಸೂರ್‍ಯ ಕಂತುವ
ಸಮಯದಲ್ಲಿ ನೆತ್ತಿ ಸವರಿ ಹಾರಿವೆ
ಅವನ ನೆನಪಲ್ಲಿ ವಿಶಾದದ ಮಬ್ಬು ಆವರಿಸಿದೆ
ದೇವರ ಮನೆಯಲ್ಲಿ ನಂದಾದೀಪ ಉರಿದಿದೆ.

ಮರಗಳ ಮೌನಗೀತೆಯನ್ನು ಹಕ್ಕಿಗಳು
ಗೂಡಿನಲ್ಲಿ ಜಪಿಸಿವೆ ಮತ್ತೆ ಪ್ರೀತಿಯ
ಪಾರಿಜಾತ ಅವನ ಒಲುಮೆಯ ದಾರಿಗೆ ಹಾಸಿವೆ
ಕೆಂಪು ಬಿಳಿ ಮಕಮಲ್ಲು ಜೀವರಸ ಹರಿದ ಸಂಧ್ಯಾರಾಗ

ಮನದ ತುಂಬ ಅವನ ಭರವಸೆಯ ಕನಸುಗಳು
ದೇಹ ಇಲ್ಲಿ ಆತ್ಮದ ಸಂಗಕೆ ಕಾದು ಕುಳಿತಿವೆ
ಅವಳು ತೊಟ್ಟಿಲು ತೂಗುತ್ತಿದ್ದಾಳೆ ನಾಳೆಯ
ಅರಳಿಸಲು ಸಂಜೆ ತಂಗಾಳಿಯ ಮಧುರ ಮಂಜುಳ.

ಖಾಲಿ ಮನೆಯಲಿ ಅವನ ಧ್ಯಾನವರಳಿ ಘಮ
ಒಲೆಯ ಮೇಲೆ ಅರಳಿದ ಬಿಳಿ ಅನ್ನ ನಿಜದ ಪ್ರೀತಿ
ಸ್ವರ್‍ಗ ಆಸೆ ಇರದ ಮನದ ನಿರ್‍ಮಲ ಪ್ರೀತಿ
ನೀಲ ಆಕಾಶದ ತುಂಬ ಸ್ವಚ್ಛಂದ ಚಿಕ್ಕಿಗಳು.

ಎಷ್ಟು ಸವೆದಿರುವೆ ದಾರಿ ದುಃಖದಲಿ ಬಳಲಿ
ನನ್ನ ನೋವಿನಲಿ ಎಷ್ಟು ಕರೆದರೂ ನೀ ಬಲುದೂರ
ಕರುಣೆಯಲಿ ಒಮ್ಮೆ ಅಪ್ಪಿಕೋ ಬೆಳದಿಂಗಳ ಸ್ಮರಿಸಿ
ಪುಟ್ಟ ಪಾದದ ಗುರುತುಗಳ ನೀ ಗಮನಿಸಬೇಕಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಡ ಬೇಡ ಗೆಳತಿ
Next post ಕುರುಡನ ಕೂಗು

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…