ನೀ ಗಮನಿಸು

ಬೆಳ್ಳಕ್ಕಿ ಹಿಂಡು ಸೂರ್‍ಯ ಕಂತುವ
ಸಮಯದಲ್ಲಿ ನೆತ್ತಿ ಸವರಿ ಹಾರಿವೆ
ಅವನ ನೆನಪಲ್ಲಿ ವಿಶಾದದ ಮಬ್ಬು ಆವರಿಸಿದೆ
ದೇವರ ಮನೆಯಲ್ಲಿ ನಂದಾದೀಪ ಉರಿದಿದೆ.

ಮರಗಳ ಮೌನಗೀತೆಯನ್ನು ಹಕ್ಕಿಗಳು
ಗೂಡಿನಲ್ಲಿ ಜಪಿಸಿವೆ ಮತ್ತೆ ಪ್ರೀತಿಯ
ಪಾರಿಜಾತ ಅವನ ಒಲುಮೆಯ ದಾರಿಗೆ ಹಾಸಿವೆ
ಕೆಂಪು ಬಿಳಿ ಮಕಮಲ್ಲು ಜೀವರಸ ಹರಿದ ಸಂಧ್ಯಾರಾಗ

ಮನದ ತುಂಬ ಅವನ ಭರವಸೆಯ ಕನಸುಗಳು
ದೇಹ ಇಲ್ಲಿ ಆತ್ಮದ ಸಂಗಕೆ ಕಾದು ಕುಳಿತಿವೆ
ಅವಳು ತೊಟ್ಟಿಲು ತೂಗುತ್ತಿದ್ದಾಳೆ ನಾಳೆಯ
ಅರಳಿಸಲು ಸಂಜೆ ತಂಗಾಳಿಯ ಮಧುರ ಮಂಜುಳ.

ಖಾಲಿ ಮನೆಯಲಿ ಅವನ ಧ್ಯಾನವರಳಿ ಘಮ
ಒಲೆಯ ಮೇಲೆ ಅರಳಿದ ಬಿಳಿ ಅನ್ನ ನಿಜದ ಪ್ರೀತಿ
ಸ್ವರ್‍ಗ ಆಸೆ ಇರದ ಮನದ ನಿರ್‍ಮಲ ಪ್ರೀತಿ
ನೀಲ ಆಕಾಶದ ತುಂಬ ಸ್ವಚ್ಛಂದ ಚಿಕ್ಕಿಗಳು.

ಎಷ್ಟು ಸವೆದಿರುವೆ ದಾರಿ ದುಃಖದಲಿ ಬಳಲಿ
ನನ್ನ ನೋವಿನಲಿ ಎಷ್ಟು ಕರೆದರೂ ನೀ ಬಲುದೂರ
ಕರುಣೆಯಲಿ ಒಮ್ಮೆ ಅಪ್ಪಿಕೋ ಬೆಳದಿಂಗಳ ಸ್ಮರಿಸಿ
ಪುಟ್ಟ ಪಾದದ ಗುರುತುಗಳ ನೀ ಗಮನಿಸಬೇಕಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಡ ಬೇಡ ಗೆಳತಿ
Next post ಕುರುಡನ ಕೂಗು

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

cheap jordans|wholesale air max|wholesale jordans|wholesale jewelry|wholesale jerseys