ಸುವ್ವಿ ಸುವ್ವ ಲಾಲೀ

ಸುವ್ವಿ ಸುವ್ವ ಲಾಲೀ ಹಾಡೆ ತಂಗಾಳಿ
ಸುವ್ವಿ ಸುವ್ವ ಲಾಲೀ ಹಾಡಿ ತಂಪಾಗಿಸಿ
ನನ್ನ ಮನಸನು ಓಲಾಡಿಸು ತಂಗಾಳಿ

ನಿನ್ನ ಬಯಸಿ ಬಯಕೆಗಳ
ಚಿಗುರಲಿ ಹೊಸ ಗೀತೆಯ
ಬರೆದು ವಸಂತನ ಕರೆದು
ನನ್ನ ಮನಸನು ತೂಗಿಸು ತಂಗಾಳಿ

ಆ ಮರದ ಹೂವು ಈ ಮರದ
ಹೂ ಗೊಂಚಲು ನನ್ನ ಮುಡಿಯೇರಿ
ನಗುತಾದ ಮಲ್ಲಿಗೆ ಹಾಸಿಗೆ
ಜಾಜಿ ಸುಪ್ಪತ್ತಿಗೆ ಏರಿ ದಿಬ್ಬಣ ಹೊರಟಾವು ತಂಗಾಳಿ

ನಿನ್ನ ರಾಗದೊಳಗೆ ಔತಣಕೂಟ
ಹೂ ಕಾಯಿ ಪಲ್ಯೆ ಹೂರಣ
ಭರಪೂರ ಭೋಜನ ಲಗ್ನದಾಗ
ವಧುವರರು ಸಪ್ತಪದಿಯ ತುಳಿದಾರು ತಂಗಾಳಿ

ನಾನು ಹಾಡಿ ನಲಿವಾಕೀ ತಂಗಾಳಿ
ನಿನ್ನ ರಾಗದೆ ತಾಳವ ಮೇಳವ
ಕೂಡಿಸಿ ಒಲಿಸಿ ಹೊಳ ಬಾಳಿಗೆ
ಓಕಳಿ ಆಡಿಸಿ ಮದು ಮಕ್ಕಳ
ಸಿಂಗಾರ ಬಂಗಾರ ಕೊಡುತೀನಿ ತಂಗಾಳಿ

ಸುವ್ವಿ ಸುವ್ವ ಲಾಲೀ ಹಾಡೆ ತಂಗಾಳಿ
ನನ್ನಲ್ಲಿ ನೀನು ಬೆಸೆದು
ಹೊಸ ಕಾವ್ಯಕೆ ಮುನ್ನುಡಿ ಬರೆದು
ನನ್ನ ಮನಸನು ಮುದಗೊಳಿಸು ತಂಗಾಳಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಗವಾನ ಶ್ರೀ ರಾಮಕೃಷ್ಣರಿಗೆ
Next post ಮೊಳಕೆ

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

cheap jordans|wholesale air max|wholesale jordans|wholesale jewelry|wholesale jerseys