ಮೊಳಕೆ

ಕತ್ತಲೆಯಲ್ಲಿ ಕತ್ತಲೆ ಆವರಿಸಿದ ರಾತ್ರಿ
ನಕ್ಷತ್ರಗಳು ನೆತ್ತಿಯ ಮೇಲೆ ಕುಣಿದಾಡುತ್ತಿವೆ

ವಾಸನೆ ಹೊತ್ತ ತಲೆದಿಂಬ ಅವರ ಸುಖನಿದ್ರೆ
ಆವರಿಸಿದೆ ಎಣ್ಣೆಯ ಕಮಟು ವಾಸನೆಯಲಿ.

ದೂರದಲ್ಲಿ ಎಲ್ಲೋ ನಾಯಿ ಬೆಚ್ಚಿ ಬೊಗಳಿದೆ
ಗೂರ್‍ಖಾನ ಸೀಟಿ ಅರೆಮಂಪರಿನಲಿ ಕೇಳಿಸಿದೆ.

ಪುಟ್ಟ ಚೈನು ಕಳಚಿದ ಸೈಕಲ್ಲಿನ ರಿಪೇರಿಯ
ಚಿಂತೆಯ ಕನಸುಗಳು ನಾಲ್ಕೂ ದಿಕ್ಕುಗಳ ಬಿಕ್ಕುಗಳು

ಜಾವದ ನರಳುವಿಕೆಯಲ್ಲಿ ಗಿಡದ ಹೂಗಳು
ಅರಳಿವೆ ಬೆಳಕಿಗೆ ತಮ್ಮ ಅರ್‍ಪಿಸಲು ಸಜ್ಜಾಗಿವೆ.

ಸುತ್ತಿದ ಚಾಪೆಯ ಸಂದಿಯಿಂದ ಇಲಿ ಹಾರಿ
ಬಚ್ಚಲಗೂಡು ಸೇರಿವೆ ಅವರಿವರ ಪಾದಗಳು

ಮಗು ಹೊಯ್ದ ಉಚ್ಚೆ ಜೋಳಿಗೆ ತೊಯ್ದಿದೆ
ಎದೆ ತುಂಬಿದ ಹಾಲು ಬಿಗಿದು ಅವಳು ಮುಲುಕಾಡಿದ್ದಾಳೆ

ರಾತ್ರಿಯ ಎಲ್ಲಾ ಕತ್ತಲೆ ಕನವರಿಕೆಗಳು ಮತ್ತೆ
ಹೊಸದಾಗಿ ಸೂರ್‍ಯನ ಕಿರಣದ ದಾರಿಯಲಿ
ಪಾದಗಳ ಊರುತ್ತ ನಡೆದಿವೆ

ಹೀಗೊಂದು ಕವಿತೆ ಕನ್ನಡಿ ಮುಂದೆ ನಿಂತು
ಅಲಂಕರಿಸಿಕೊಂಡಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುವ್ವಿ ಸುವ್ವ ಲಾಲೀ
Next post ನನ್ನ ಕವಿತೆ

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

cheap jordans|wholesale air max|wholesale jordans|wholesale jewelry|wholesale jerseys