Home / ಕವನ / ತತ್ವಪದ / ಭಗವಾನ ಶ್ರೀ ರಾಮಕೃಷ್ಣರಿಗೆ

ಭಗವಾನ ಶ್ರೀ ರಾಮಕೃಷ್ಣರಿಗೆ

ಪರಮಹಂಸರು ನೀವು ಮಹಾ ಚೇತನರು
ಬಾಳೆಲ್ಲ ದೈವತ್ವದಲ್ಲಿ ಕಳೆದವರು
ಪದವಿಗಳ ಪಡೆಯದ ವಿದ್ಯಾವಂತರು
ಅಮೋಘವನ್ನು ಸಾಧಿಸಿದ ಅಮರಜರು

ಕ್ಷುದೀರಾಮ ಚಂದ್ರಮಣಿ ದೈವ ಭಕ್ತರು
ಅವರ ಉದರದಿ ಜನಿಸಿದ ನೀವು ಸುತರು
ಬಾಲ್ಯವನ್ನು ಕಾಮಾಪುಕುರದಲಿ ಕಳೆದವರು
ಅಣ್ಣ ನನ್ನ ಹಿಂಬಾಲಿಸಿ ಕಲ್ಕತ್ತೆಗೆ ತೆರಳಿದವರು

ಲೌಕಿಕ ವಿದ್ಯೆಗಳ ಉಪೇಕ್ಷಿಸಿ ನಡೆದವರು
ಅಧ್ಯಾತ್ಮ ಭಕ್ತಿಗೆ ತಡಕಾಡಿದ ಮಹಾನರು
ರಾಣಿ ರಾಸಮಣಿ ಕಟ್ಟಿಸಿದ ಮಂದಿರದಲ್ಲಿ
ಕಾಳಿಕಾ ಮಾತೆಯ ಪೂಜೆಗೆ ನಿಂತವರು

ವಿಧ ವಿಧವಾಗಿ ದೇವಿಗೆ ಪೂಜಿಸಿದವರು
ದ್ವೈತ ಅದ್ವೈತ ವಿಶಿಷ್ಟಾ ದ್ವೈತದಿ ಪ್ರೀತಿಸಿದರು
ಸ್ವಾಮಿ ಸಖ ಸಖಿ ಪ್ರಯತಮನಂತೆ ದೈವಕಂಡವರು
ನಾಲ್ಕು ಯೋಗಗಳೆಲ್ಲ ಸಾಧಿಸಿಕೊಂಡವರು

ಹಿಂದು ಮಹ್ಮದಿ ಕ್ರೈಸ್ತರಂತೆ ಆರಾಧಿಸಿದವರು
ಶಿಷ್ಯ ಕೋಟಿಯನ್ನೆ ನಿರ್ಮಾಣ ಮಾಡಿದವರು
ನರೇಂದ್ರನಿಗೆ ತನ್ನದೆಲ್ಲವೂ ಧಾರೆ ಎರೆದವರು
ಗೃಹಸ್ಥರಾಗಿ ಮಡದಿಯನ್ನು ಪೂಜೆ ಮಾಡಿದವರು

ವೇದ ಉಪನಿಷತ್ತದ ಅಮೃತವ ಧಾರೆಯೆರೆದವರು
ಹಿಂದು ಧರ್ಮದ ಧ್ವಜ ವಿಶ್ವಕ್ಕೆ ಪದರ್ಶಿಸಿದವರು
ಕೇವಲ ದೇವ ಸಂತ ಜ್ಞಾನಗಳಲ್ಲರವರು
ಸಾಕ್ಷಾತ್ ಮಾಣಿಕ್ಯ ವಿಠಲನಾದವರು
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...