Home / ಕವನ / ತತ್ವಪದ / ಭಗವಾನ ಶ್ರೀ ರಾಮಕೃಷ್ಣರಿಗೆ

ಭಗವಾನ ಶ್ರೀ ರಾಮಕೃಷ್ಣರಿಗೆ

ಪರಮಹಂಸರು ನೀವು ಮಹಾ ಚೇತನರು
ಬಾಳೆಲ್ಲ ದೈವತ್ವದಲ್ಲಿ ಕಳೆದವರು
ಪದವಿಗಳ ಪಡೆಯದ ವಿದ್ಯಾವಂತರು
ಅಮೋಘವನ್ನು ಸಾಧಿಸಿದ ಅಮರಜರು

ಕ್ಷುದೀರಾಮ ಚಂದ್ರಮಣಿ ದೈವ ಭಕ್ತರು
ಅವರ ಉದರದಿ ಜನಿಸಿದ ನೀವು ಸುತರು
ಬಾಲ್ಯವನ್ನು ಕಾಮಾಪುಕುರದಲಿ ಕಳೆದವರು
ಅಣ್ಣ ನನ್ನ ಹಿಂಬಾಲಿಸಿ ಕಲ್ಕತ್ತೆಗೆ ತೆರಳಿದವರು

ಲೌಕಿಕ ವಿದ್ಯೆಗಳ ಉಪೇಕ್ಷಿಸಿ ನಡೆದವರು
ಅಧ್ಯಾತ್ಮ ಭಕ್ತಿಗೆ ತಡಕಾಡಿದ ಮಹಾನರು
ರಾಣಿ ರಾಸಮಣಿ ಕಟ್ಟಿಸಿದ ಮಂದಿರದಲ್ಲಿ
ಕಾಳಿಕಾ ಮಾತೆಯ ಪೂಜೆಗೆ ನಿಂತವರು

ವಿಧ ವಿಧವಾಗಿ ದೇವಿಗೆ ಪೂಜಿಸಿದವರು
ದ್ವೈತ ಅದ್ವೈತ ವಿಶಿಷ್ಟಾ ದ್ವೈತದಿ ಪ್ರೀತಿಸಿದರು
ಸ್ವಾಮಿ ಸಖ ಸಖಿ ಪ್ರಯತಮನಂತೆ ದೈವಕಂಡವರು
ನಾಲ್ಕು ಯೋಗಗಳೆಲ್ಲ ಸಾಧಿಸಿಕೊಂಡವರು

ಹಿಂದು ಮಹ್ಮದಿ ಕ್ರೈಸ್ತರಂತೆ ಆರಾಧಿಸಿದವರು
ಶಿಷ್ಯ ಕೋಟಿಯನ್ನೆ ನಿರ್ಮಾಣ ಮಾಡಿದವರು
ನರೇಂದ್ರನಿಗೆ ತನ್ನದೆಲ್ಲವೂ ಧಾರೆ ಎರೆದವರು
ಗೃಹಸ್ಥರಾಗಿ ಮಡದಿಯನ್ನು ಪೂಜೆ ಮಾಡಿದವರು

ವೇದ ಉಪನಿಷತ್ತದ ಅಮೃತವ ಧಾರೆಯೆರೆದವರು
ಹಿಂದು ಧರ್ಮದ ಧ್ವಜ ವಿಶ್ವಕ್ಕೆ ಪದರ್ಶಿಸಿದವರು
ಕೇವಲ ದೇವ ಸಂತ ಜ್ಞಾನಗಳಲ್ಲರವರು
ಸಾಕ್ಷಾತ್ ಮಾಣಿಕ್ಯ ವಿಠಲನಾದವರು
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...