Home / ಕವನ / ತತ್ವಪದ / ಭಗವಾನ ಶ್ರೀ ರಾಮಕೃಷ್ಣರಿಗೆ

ಭಗವಾನ ಶ್ರೀ ರಾಮಕೃಷ್ಣರಿಗೆ

ಪರಮಹಂಸರು ನೀವು ಮಹಾ ಚೇತನರು
ಬಾಳೆಲ್ಲ ದೈವತ್ವದಲ್ಲಿ ಕಳೆದವರು
ಪದವಿಗಳ ಪಡೆಯದ ವಿದ್ಯಾವಂತರು
ಅಮೋಘವನ್ನು ಸಾಧಿಸಿದ ಅಮರಜರು

ಕ್ಷುದೀರಾಮ ಚಂದ್ರಮಣಿ ದೈವ ಭಕ್ತರು
ಅವರ ಉದರದಿ ಜನಿಸಿದ ನೀವು ಸುತರು
ಬಾಲ್ಯವನ್ನು ಕಾಮಾಪುಕುರದಲಿ ಕಳೆದವರು
ಅಣ್ಣ ನನ್ನ ಹಿಂಬಾಲಿಸಿ ಕಲ್ಕತ್ತೆಗೆ ತೆರಳಿದವರು

ಲೌಕಿಕ ವಿದ್ಯೆಗಳ ಉಪೇಕ್ಷಿಸಿ ನಡೆದವರು
ಅಧ್ಯಾತ್ಮ ಭಕ್ತಿಗೆ ತಡಕಾಡಿದ ಮಹಾನರು
ರಾಣಿ ರಾಸಮಣಿ ಕಟ್ಟಿಸಿದ ಮಂದಿರದಲ್ಲಿ
ಕಾಳಿಕಾ ಮಾತೆಯ ಪೂಜೆಗೆ ನಿಂತವರು

ವಿಧ ವಿಧವಾಗಿ ದೇವಿಗೆ ಪೂಜಿಸಿದವರು
ದ್ವೈತ ಅದ್ವೈತ ವಿಶಿಷ್ಟಾ ದ್ವೈತದಿ ಪ್ರೀತಿಸಿದರು
ಸ್ವಾಮಿ ಸಖ ಸಖಿ ಪ್ರಯತಮನಂತೆ ದೈವಕಂಡವರು
ನಾಲ್ಕು ಯೋಗಗಳೆಲ್ಲ ಸಾಧಿಸಿಕೊಂಡವರು

ಹಿಂದು ಮಹ್ಮದಿ ಕ್ರೈಸ್ತರಂತೆ ಆರಾಧಿಸಿದವರು
ಶಿಷ್ಯ ಕೋಟಿಯನ್ನೆ ನಿರ್ಮಾಣ ಮಾಡಿದವರು
ನರೇಂದ್ರನಿಗೆ ತನ್ನದೆಲ್ಲವೂ ಧಾರೆ ಎರೆದವರು
ಗೃಹಸ್ಥರಾಗಿ ಮಡದಿಯನ್ನು ಪೂಜೆ ಮಾಡಿದವರು

ವೇದ ಉಪನಿಷತ್ತದ ಅಮೃತವ ಧಾರೆಯೆರೆದವರು
ಹಿಂದು ಧರ್ಮದ ಧ್ವಜ ವಿಶ್ವಕ್ಕೆ ಪದರ್ಶಿಸಿದವರು
ಕೇವಲ ದೇವ ಸಂತ ಜ್ಞಾನಗಳಲ್ಲರವರು
ಸಾಕ್ಷಾತ್ ಮಾಣಿಕ್ಯ ವಿಠಲನಾದವರು
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...