ವಾಗ್ದೇವಿ – ೨೭

ವಾಗ್ದೇವಿ – ೨೭

ಗೆಳೆಯರೀರ್ವರೂ ಗಂಡಭೇರುಂಡ ಪಕ್ಷಿಗಳಂತೆ ಹಗಲು ರಾತ್ರಿ ಒಟ್ಟಿ ನಲ್ಲಿ ಇದ್ದು ವಿವಿಧ ಪ್ರಸ್ತಾವಗಳನ್ನು ಮಾಡುತ್ತಾ ಸಮಯ ಕಳೆದರು. ಅವರು ರಾಜನ ಕುಲಗುರುವಾದ ಸ್ವಯಂಜ್ಯೋತಿ ಗುರುಗಳ ಮಠಕ್ಕೆ ಹೋಗಿ, ಆ ಸನ್ಯಾಸಿಯನ್ನು ಕಂಡರು. ಅಪರಾಜಿತನು ವೇದವ್ಯಾಸ ಉಪಾ ಧ್ಯನ ಗುರ್ತು ಸನ್ಯಾಸಿಗೆ ಹೇಳಿದನು. ಅವರು ಹಿಂದೆ ಅವನನ್ನು ರಾಜನ ದರ್ಬಾರಿನಲ್ಲಿ ನೋಡಿದ ನೆನಪು ಒಂದು ಸಂತೋಷಪಟ್ಟರು. ತಮ್ಮ ಮಠದ ಮೇಲೆ ಅಭಿಮಾನವಿಟ್ಟು ಇಲ್ಲಿವರೇಗೆ ಒಂದ ಗೀರ್ವಾಣಭಾಷಾಗ್ರಗಣ್ಯಗೆ ಸಾಭಿಮಾನ ಮಾಡಿ, ಬಿಡಾರ ಸಾಹಿತ್ಯಗಳನ್ನು ಒದಗಿಸಿಕೊಟ್ಟು ಚಂದವಾಗಿ, ಪರಾಮರ್ಶಿಸೆಂದು ಮಠದ ಕಾರ್ಯಸ್ಥ ಶಿವರಾಮ ಸೆಟ್ಟಗೆ ಆಜ್ಞಾಸಿಸಿದರು. ಕಾರ್ಯಸ್ಥನು ಗುರುವಿನ ಅಪ್ಪಣೆಯನ್ನು ನಡೆಸಿದನು. ವಿಪ್ರಗೆ ಭೋಜನಾದಿ ಸತ್ಕಾರಗಳು ಅವನ ನಿರೀಕ್ಷಣೆಯನ್ನು ಮಿಗುವ ರೀತಿಯಲ್ಲಿ ಆದವು ಸ್ವಯಂ ಜ್ಯೋತಿ ಪರಮಹಂಸರು ಸಂಸ್ಕೃತದಲ್ಲಿ ಕಡಿಮೆ ಪಾಂಡಿತ್ಯವುಳ್ಳ ವರಲ್ಲ. ವೇದ ವ್ಯಾಸ ಉಪಾಧ್ಯನು ಆವರ ಒಟ್ಟ ನಲ್ಲಿ ಎರಡು ಮೂರು ದಿವಸ ತರ್ಕಮಾಡಿ ನೋಡಿದಾಗ ತನ್ನಷ್ಟು ದೊಡ್ಡ ಸಂಸ್ಕೃತ ಪಂಡಿತವಿಲ್ಲವೆಂಬಂತ ತಾಳಿಕೊಂಡ ಗರ್ವವು ವ್ಯರ್ಥವಾಗಿತೋರಿ ಸನ್ಯಾಸಿಯ ಪ್ರಾಜ್ಞತೆಗೆ ಮೆಚ್ಚಿದನು. ಉಪಾ ಧ್ಯನ ಪಾಂಡಿತ್ಯವು ಸಾಮಾನ್ಯವಾದುದಲ್ಲವೆಂದು ಸ್ವಯಂಜ್ಯೋತಿ ಗುರು ವರ್ಯರು ನಿಶ್ಚೈಸಿ ಒಳ್ಳೇ ವಸ್ತ್ರಾಲಂಕಾರಗಳನ್ನು ಅವನಿಗೆ ಉಚಿತವಾಗಿ ಕೊಟ್ಟು, ಸನ್ಮಾನಿಸಿದರು. “ವಿಶೇಷವೇನಾದರೂ ಅರಿಕೆ ಮಾಡಲಿಕ್ಕಿದೆಯೋ” ಎಂದು ವಿಚಾರಿಸಿದಾಗ ಅಪರಾಜಿತ ಸೆಟ್ಟಿಯು ಪ್ರಣಾಮಮಾಡಿ, ಈ ಬ್ರಾಹ್ಮಣನು ಸನ್ನಿಧಾನದ ಭೇಟಿಗೆ ಬಂದ ಉದ್ದೇಶವನ್ನು ಸಂಪೂರ್ಣವಾಗಿ ವಿವರಿಸಿದನು.

“ಲೌಕಿಕ ವಿಚಾರವನ್ನೇ ಬಿಟ್ಟು ನಿರ್ವಾಣವನ್ನು ಹೊಂದಲಪೇಕ್ಷಿತ ನಾದ ಪರಮಹಂಸನೊಬ್ಬನು ಇಂಥಾ ವಾಭಾಟದಲ್ಲಿ ಮಾಡತಕ್ಕದ್ದೇನೂ ಇಲ್ಲವು. ಆದರೆ ಈ ರಾಜ್ಯದಲ್ಲಿ ಒಡ್ಡೋಲಗದ ಕ್ರಮಕ್ಕನುಸರಿಸಿ ಮತ ಸಂಬಂಧವಾದ ವಿವಾದಗಳಲ್ಲ ರಾಜದ್ವಾರದಲ್ಲಿ ಅರಸನು ತನ್ನ ಕುಲಗುರು ವನ್ನು ಮಂತ್ರಾಲೋಚಕನಾಗಿ ತನ್ನ ಅರ್ಧಾಸನದಲ್ಲಿ ಕುಳ್ಳಿರಿಸುವ ಪದ್ಧ ತಿಯು ಪರಂಪರೆಯಾಗಿ ನಡೆದು ಬರುತ್ತದೆ. ಅವನ ಅಭಿಪ್ರಾಯವನ್ನು ಸ್ವೀಕರಿಸುವುದಕ್ಕೆ ಅರಸು ಸರ್ವಧಾ ಬದ್ದನಲ್ಲ. ನೃಪಾಲನು ತನಗೆ ಯುಕ್ತ ವೆಂತ ಕಾಣುವ ವಿಧಿಯನ್ನು ಕೊಡುತ್ತಾನೆ. ಅವನ ಸ್ವಾತಂತ್ರ್ಯಕ್ಕೆ ಯಾವ ನೊಬ್ಬ ಮಂತ್ರಾಲೋಚಕನ ತಡೆಯೂ ಇರುವುದಿಲ್ಲ.” ಹೀಗೆ ಸನ್ಯಾಸಿಯು ಹೇಳಿದುದರಿಂದ ವೇದವಾಸ್ಯನು ಕಂಗೆಟ್ಟನು. ಅಪರಾಜಿತ ಸೆಟ್ಟಿಯು ಪುನಃ ಪ್ರಣಾಮಮಾಡಿ ಶರಣಾಗತನಾದ ಹಾರುವಗೆ ಅಭಯವಾಗಬೇಕೆಂದು ಸೆರಗು ಒಡ್ಡಿ ಬೇಡಿಕೊಂಡನು: “ಜನಧರ್ಮ ಪಾಲಿಸು?” ಎಂದು ಅಪರಾ ಜಿತಗೆ ಆಜ್ಞೆಯಾಯಿತು. ಬಳೆಕ ಅವರು ತನ್ನ ನೌಕರನೊಬ್ಬನನ್ನು ಕಳು ಹಿಸಿ ಅರಮನೆಯ ಭಕ್ಷಿ ಆದಿರಾಜನನ್ನು ಕರೆಸಿ ಅವನ ಕೂಡೆ ಅಂತರಂಗದಲ್ಲಿ ಏನೋ ಮಾತಾಡಿ ವೇದವ್ಯಾಸ ಉಪಾಧ್ಯನನ್ನು ಅವನ ಸಂಗಡ ಕಳು ಹಿಸಿದರು.

ಅಪರಾಜಿತನು ಅವರಿಬ್ಬರ ಹಿಂದೆಯೇ ಹೋದನು. ಆದಿರಾಜನು ಆ ಬ್ರಾಹ್ಮಣನನ್ನೂ ಅವನ ಸಂಗಡಿಗನನ್ನೂ ಮನೆಗೆ ಕರಕೊಂಡು ಹೋಗಿ ದಿವಾನ ಕಚೇರಿಯ ಒಬ್ಬ ಕಾರ್ಕೂನನನ್ನು ಕರತರಿಸಿ ಅವನ ಕೂಡೆ ಸ್ನೇಹ ಭಾವದಿಂದ ಸಂಭಾಷಣೆಮಾಡಿ ವೇದವ್ಯಾಸ ಉಪಾಧ್ಯನ ಛಲನಡೆಯಲಿಕ್ಕೆ ಉಪಾಯ ನಡೆಸಬೇಕೆಂದು ಅಪೇಕ್ಷಿಸಿದನು. ಅರಸನ ಒಡ್ಡೋಲಗದಲ್ಲಿ ಪೇಚಾಡುವ ಕಾಲವು ಇನ್ನೂ ಒದಗಲಿಲ್ಲ ಆಯಾ ಊರಿನವರು ಒಗ್ಗ ಟ್ಟಾಗಿ ಮತ ವಿರುದ್ಧವಾದ ಕಾರ್ಯವನ್ನು ನಡೆಸಕೂಡದೆಂದು ಕಟ್ಟು ಮಾಡಲಿಕ್ಕೆ ಸ್ವತಂತ್ರಿಕರಾಗಿರುತ್ತಾರೆ. ಅವರ ಕಟ್ಟು ಮುರಿಯುವುದು ಅನ್ಯ ರಿಗೆ ಅಸಾಧ್ಯ. ಒಂದುವೇಳೆ ಅಂಥಾ ಕಟ್ಟಿನಿಂದ ತಡೆಯಲ್ಲಟ್ಟವನು ದ್ರವ್ಯ ಬಲದಿಂದ ಕಲಹ ಹೊಡೆದಾಟ ಮುಂತಾದ ಉಪದ್ರವ ಕೊಡಲಿಕ್ಕೆ ನೋಡುವುದಾದರೆ ಸ್ಥಳಿಕ ಕಾರ್ಬಾರಿ ಕೊತ್ವಾಲರು ತಮ್ಮ ಅಧಿಕಾರವನ್ನು ನಡೆಸದೆ ಇರಲಿಕ್ಕಿಲ್ಲ. “ಜಗಲಿ ಹಾರದ ಬಡ್ಡಿ ಗಗನ ಹಾರ್ಯಾಳೆ” ಎಂಬಂತೆ ಇಷ್ಟು ಸಣ್ಣ ವ್ಯವಸ್ಥೆ ಮಾಡಲಿಕ್ಕೆ ಬುದ್ಧಿ ಚಾತುರ್ಯವಿಲ್ಲದವನು ರಾಜನ ಒಡ್ಡೋ ಲಗಕ್ಕೆ ಬಂದು, ಏನು ಮಾಡುವ ಹಾಗಿದೆ? ಕಾರ್ಕೂನನ ಈ ಪ್ರತಿವಾಕ್ಯ ವನ್ನು ಅಪರಾಜಿತ ಸೆಟ್ಟಿಯು ವೇದವ್ಯಾಸ ಉಪಾಧ್ಯಗೆ ವಿವರಿಸಿ ಹೇಳಿ ತನ್ನ ಸಂಗಡ ಬಂದರೆ ಮುಂದಿನ ಉಪಾಯ ಸುಲಭವಾಗಿದೆಯೆಂದು ಅವ ನಿಗೆ ಧೈರ್ಯ ಕೊಟ್ಟನು. ಆದಿರಾಜಗೆ ಅವರಿಬ್ಬರೂ ನಮಸ್ಕಾರ ಮಾಡಿ, ಅಲ್ಲಿಂದ ಹೊರಟು ಕ್ಷಿಪ್ರ ಕುಮುದಪುರಕ್ಕೆ ಬಂದರು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಳಿನ ಮಗು
Next post ಭಗವಾನ ಶ್ರೀ ರಾಮಕೃಷ್ಣರಿಗೆ

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…