ನಾನು ನಿನಗೆ ಋಣಿಯಾಗಿ

ನಾನು ನಿನಗೆ
ಋಣಿಯಾಗಿರಲೇ ಬೇಕು
ನನ್ನದೆಂಬುದೇನಿದೆ ಇಲ್ಲಿ!
ಎಲ್ಲಾ ನಿನ್ನಯಾ
ಒಡೆತನದಲ್ಲಿರುವಾಗ ಹರಿಯೇ||

ನೀನೇ ನಮ್ಮೆಲ್ಲರ
ಕೃಪಾಪೋಷಕನಾಗಿರುವಾಗ|
ನೀನು ನಮ್ಮೆಲ್ಲರ
ತಿದ್ದಿ ತೀಡಿ ರೂಪಿಸುತ್ತಿರುವಾಗ|
ಜೀವ ಜಂಗುಳಿಗೆ
ಅನ್ನಾದಿಗಳ ಸೃಷ್ಟಿಸುತಿರವಾಗ||

ಹರಿ ನೀನೆ ಎಲ್ಲರ
ಮೋಕ್ಷಕಾರಕನಾಗಿರುವಾಗ|
ಹರಿ ನೀನೇ ನಮ್ಮೆಲ್ಲರ
ಬಂಧು-ಮಿತ್ರನೆನಿಸಿರುವಾಗ||
ಹರಿ ನೀನೇ ಚರ, ಜಲಾಚರ
ಸ್ಥಿರ ಸುಸ್ಥಿರಕೆ ಕಾರಣನಾಗಿರುವಾಗ||

ಹರಿ ನೀನೇ ನನ್ನಯ
ಜನ್ಮಕಾರಣ ನಾಗಿರುವಾಗ|
ಹರಿ ನೀನೇ ನನ್ನಯ
ಮಾರ್ಗದಶಕನಾಗಿರುವಾಗ|
ಹರಿ ನೀನೇ ನನ್ನಯ
ಆತ್ಮೋದ್ಧಾರಕನಾಗಿರುವಾಗ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೆಂಡದ ಹಾಡು
Next post ಬೇಡವೆನಗಿನ್ನೇನು!

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

cheap jordans|wholesale air max|wholesale jordans|wholesale jewelry|wholesale jerseys