ಕೆಂಡದ ಹಾಡು

ಕತ್ತಲೆಲ್ಲ ಬೆತ್ತಲಾಗಿ
ಬೆತ್ತಲೆಲ್ಲ ಬೆಳಗಾಗಿ
ಕೆಂಪಾಗಲಿ ಕಪ್ಪು ನೆಲ.
ಛಿದ್ರ ಛಿದ್ರವಾಗಲಿ
ಬೇರು ಬೂದಿಯಾಗಲಿ
ತುಳಿದು ನಗುವ ಜಾಲ.

ಗುಡಿಸಲಿನ ಗರಿಗಳಿಂದ
ಮನೆ ಮನೆಯ ಮನಸಿನಿಂದ
ಹಾದಿ ಹೂಲದ ಎದೆಗಳಿಂದ
ಹುಟ್ಟಿ ಬರಲಿ ಇಲ್ಲಿ
ಹೋರಾಟದ ಹಾಡು.

ಅಸ್ಪೃಶ್ಯರ ಹಟ್ಟಿಯಲ್ಲಿ
ಮಾರ್‍ಕೆಟ್ಟಿನ ಮೂಲೆಯಲ್ಲಿ
ಕಾರ್‍ಖಾನೆಯ ಕೊಳವೆಯಲ್ಲಿ
ಅಚ್ಚೂತ್ತಲಿ ಎಲ್ಲೆಲ್ಲು
ಹೋರಾಟದ ಹುರುಡು.

ಮೇಲು ಜಾತಿ, ಕೀಳು ಜಾತಿ
ಬಡವನಿವ ಬಲ್ಲಿದ
ಅಡ್ಡನಿಂತ ಗೊಡ್ಡುಗೋಡೆ
ಧಿಕ್ಕಾರಕೆ ನಡುಗಲಿ
ಬುಡ ಕಳಚಿ ಬೀಳಲಿ.

ಇರುವ ನೆಲ ಹರಿವ ಜಲ
ಎಲ್ಲರದು-ನಾಡಿನದು
ಇದು ಸಂಘರ್ಷದ ಜಾಡು,
ಸಾವಿರಾರು ವರುಷದಿಂದ
ಬೇರು ಬಿಳಲು ಬಿಟ್ಟ ಆಲ-
ಸುಟ್ಟು ಹುಟ್ಟಿ ಬರುವ
ಇದು ಕೆಂಡದ ಹಾಡು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ‘ಶಿಶುಸಾಹಿತ್ಯ’
Next post ನಾನು ನಿನಗೆ ಋಣಿಯಾಗಿ

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…