ಕೆಂಡದ ಹಾಡು

ಕತ್ತಲೆಲ್ಲ ಬೆತ್ತಲಾಗಿ
ಬೆತ್ತಲೆಲ್ಲ ಬೆಳಗಾಗಿ
ಕೆಂಪಾಗಲಿ ಕಪ್ಪು ನೆಲ.
ಛಿದ್ರ ಛಿದ್ರವಾಗಲಿ
ಬೇರು ಬೂದಿಯಾಗಲಿ
ತುಳಿದು ನಗುವ ಜಾಲ.

ಗುಡಿಸಲಿನ ಗರಿಗಳಿಂದ
ಮನೆ ಮನೆಯ ಮನಸಿನಿಂದ
ಹಾದಿ ಹೂಲದ ಎದೆಗಳಿಂದ
ಹುಟ್ಟಿ ಬರಲಿ ಇಲ್ಲಿ
ಹೋರಾಟದ ಹಾಡು.

ಅಸ್ಪೃಶ್ಯರ ಹಟ್ಟಿಯಲ್ಲಿ
ಮಾರ್‍ಕೆಟ್ಟಿನ ಮೂಲೆಯಲ್ಲಿ
ಕಾರ್‍ಖಾನೆಯ ಕೊಳವೆಯಲ್ಲಿ
ಅಚ್ಚೂತ್ತಲಿ ಎಲ್ಲೆಲ್ಲು
ಹೋರಾಟದ ಹುರುಡು.

ಮೇಲು ಜಾತಿ, ಕೀಳು ಜಾತಿ
ಬಡವನಿವ ಬಲ್ಲಿದ
ಅಡ್ಡನಿಂತ ಗೊಡ್ಡುಗೋಡೆ
ಧಿಕ್ಕಾರಕೆ ನಡುಗಲಿ
ಬುಡ ಕಳಚಿ ಬೀಳಲಿ.

ಇರುವ ನೆಲ ಹರಿವ ಜಲ
ಎಲ್ಲರದು-ನಾಡಿನದು
ಇದು ಸಂಘರ್ಷದ ಜಾಡು,
ಸಾವಿರಾರು ವರುಷದಿಂದ
ಬೇರು ಬಿಳಲು ಬಿಟ್ಟ ಆಲ-
ಸುಟ್ಟು ಹುಟ್ಟಿ ಬರುವ
ಇದು ಕೆಂಡದ ಹಾಡು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ‘ಶಿಶುಸಾಹಿತ್ಯ’
Next post ನಾನು ನಿನಗೆ ಋಣಿಯಾಗಿ

ಸಣ್ಣ ಕತೆ

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

cheap jordans|wholesale air max|wholesale jordans|wholesale jewelry|wholesale jerseys