ಕೆಂಡದ ಹಾಡು

ಕತ್ತಲೆಲ್ಲ ಬೆತ್ತಲಾಗಿ
ಬೆತ್ತಲೆಲ್ಲ ಬೆಳಗಾಗಿ
ಕೆಂಪಾಗಲಿ ಕಪ್ಪು ನೆಲ.
ಛಿದ್ರ ಛಿದ್ರವಾಗಲಿ
ಬೇರು ಬೂದಿಯಾಗಲಿ
ತುಳಿದು ನಗುವ ಜಾಲ.

ಗುಡಿಸಲಿನ ಗರಿಗಳಿಂದ
ಮನೆ ಮನೆಯ ಮನಸಿನಿಂದ
ಹಾದಿ ಹೂಲದ ಎದೆಗಳಿಂದ
ಹುಟ್ಟಿ ಬರಲಿ ಇಲ್ಲಿ
ಹೋರಾಟದ ಹಾಡು.

ಅಸ್ಪೃಶ್ಯರ ಹಟ್ಟಿಯಲ್ಲಿ
ಮಾರ್‍ಕೆಟ್ಟಿನ ಮೂಲೆಯಲ್ಲಿ
ಕಾರ್‍ಖಾನೆಯ ಕೊಳವೆಯಲ್ಲಿ
ಅಚ್ಚೂತ್ತಲಿ ಎಲ್ಲೆಲ್ಲು
ಹೋರಾಟದ ಹುರುಡು.

ಮೇಲು ಜಾತಿ, ಕೀಳು ಜಾತಿ
ಬಡವನಿವ ಬಲ್ಲಿದ
ಅಡ್ಡನಿಂತ ಗೊಡ್ಡುಗೋಡೆ
ಧಿಕ್ಕಾರಕೆ ನಡುಗಲಿ
ಬುಡ ಕಳಚಿ ಬೀಳಲಿ.

ಇರುವ ನೆಲ ಹರಿವ ಜಲ
ಎಲ್ಲರದು-ನಾಡಿನದು
ಇದು ಸಂಘರ್ಷದ ಜಾಡು,
ಸಾವಿರಾರು ವರುಷದಿಂದ
ಬೇರು ಬಿಳಲು ಬಿಟ್ಟ ಆಲ-
ಸುಟ್ಟು ಹುಟ್ಟಿ ಬರುವ
ಇದು ಕೆಂಡದ ಹಾಡು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ‘ಶಿಶುಸಾಹಿತ್ಯ’
Next post ನಾನು ನಿನಗೆ ಋಣಿಯಾಗಿ

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…