Home / ಕವನ / ಕವಿತೆ / ಏನದು ಪ್ರೇಮ?

ಏನದು ಪ್ರೇಮ?

ಏನದು ಪ್ರೇಮ…
ಅಪೂರ್ವವಾದ ವಸ್ತುವೆ
ಅಪರಿಮಿತವಾದ ಚೈತನ್ಯವೆ
ಅಸದೃಶ ಅನುಭೂತಿಯೆ?

ಏನದು ಪ್ರೇಮ…
ಜಾಜ್ವಲ್ಯಮಾನ ಬೆಳಕೆ
ಪರಮ ಪರಿಮಳದ ಹೂವೆ?

ಪ್ರೇಮಕ್ಕೆ ಸಪ್ತವರ್ಣವಂತೆ
ಮಕರಂದಕಿಂತಲೂ ಸಿಹಿಯಂತೆ
ನಿಜವೇನು?

ಪ್ರೇಮಕ್ಕೆ ನಕ್ಷತ್ರ ಖಚಿತ ಕಣ್ಣಂತೆ
ಮುತ್ತು ರತ್ನ ಹವಳದೊಡಲು
ವಿಸ್ಮಯದ ಕಡಲಂತೆ ನಿಜವೇನು?

ಪ್ರೇಮ ಕಲ್ಲಿನಷ್ಟೇ ಗಟ್ಟಿಯಂತೆ
ನೀರಿನಷ್ಟೇ ತಿಳಿಯಂತೆ
ಬೆಳದಿಂಗಳಿನಷ್ಟೇ ತಂಪಂತೆ ನಿಜವೇನು ?

ಪ್ರೇಮ ನಿನ್ನೆ ಇತ್ತು
ಇಂದು ಇದೆ
ನಾಳೆ ಇರುವುದು
ಅಳಿಯದೆ ಉಳಿವುದು
ಎನುವರು ನಿಜವೇನು?

ಇರಬಹುದು…
ಪ್ರೇಮ ಸೂರ್ಯನಂತಹ ಕುಲುಮೆ
ಪುಷ್ಪಗಳು ಅರಳುವವು ಅದುವೆ ಒಲುಮೆ

ಅವ್ವ ನೀಡಿದ ಕೈ ತುತ್ತು
ಅಪ್ಪ ಬಾರಿಸಿದ ಛಡಿಯೇಟು
ಕೆನ್ನೆಗೆ ನೀಡಿದ ಹೂಮುತ್ತು
ಕುಲ-ಗೋತ್ರ-ಜಾತಿ-ಮತ
ದಾಟುವ ಹಿಮ್ಮತ್ತು
ಎಲ್ಲವೂ ಪ್ರೇಮವೇ…

ಭಿಕ್ಕುವಿಗೆ ಬುದ್ಧನೇ ಪ್ರೇಮ ಸ್ವರೂಪ
ಅಕ್ಕನಿಗೆ ಕದಳಿಯೇ ಕೈಮರ
ದೇವರಿಗೆ ಬೆಳಗುವ ದೀಪ
ಭವಸಾಗರದಲ್ಲಿ ಮುಳುಗುವ ಶಾಪ
ಎಲ್ಲವೇ ಪ್ರೇಮವೇ…

ಪ್ರೇಮ ಎಂಬ ಪುಳಕ
ಅಣುರೇಣುವಿನಷ್ಟು ಸೂಕ್ಷ್ಮ
ಶಿವ ಶಿವೆಗಿತ್ತ ಭಸ್ಮ

ಪ್ರೇಮ ಪ್ರಕೃತಿ
ಅದು ಹೂವಾಗುತ್ತದೆ
ಅದು ಹಣ್ಣಾಗುತ್ತದೆ
ಮತ್ತೆ ಬೀಜವಾಗುತ್ತದೆ.

ಪ್ರೇಮ ಏನಲ್ಲ?
ಎನೂ ಅಲ್ಲ…ಎರಡಕ್ಕರ!

ಪ್ರೇಮ ಇಡೀ ಜಗವ ಆವರಿಸಿದೆ
ನಿನ್ನಲ್ಲಿ…ನನ್ನಲ್ಲಿ…ಪ್ರತಿಫಲಿಸಿದೆ.
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...