Home / ಕವನ / ಕವಿತೆ / ಏನದು ಪ್ರೇಮ?

ಏನದು ಪ್ರೇಮ?

ಏನದು ಪ್ರೇಮ…
ಅಪೂರ್ವವಾದ ವಸ್ತುವೆ
ಅಪರಿಮಿತವಾದ ಚೈತನ್ಯವೆ
ಅಸದೃಶ ಅನುಭೂತಿಯೆ?

ಏನದು ಪ್ರೇಮ…
ಜಾಜ್ವಲ್ಯಮಾನ ಬೆಳಕೆ
ಪರಮ ಪರಿಮಳದ ಹೂವೆ?

ಪ್ರೇಮಕ್ಕೆ ಸಪ್ತವರ್ಣವಂತೆ
ಮಕರಂದಕಿಂತಲೂ ಸಿಹಿಯಂತೆ
ನಿಜವೇನು?

ಪ್ರೇಮಕ್ಕೆ ನಕ್ಷತ್ರ ಖಚಿತ ಕಣ್ಣಂತೆ
ಮುತ್ತು ರತ್ನ ಹವಳದೊಡಲು
ವಿಸ್ಮಯದ ಕಡಲಂತೆ ನಿಜವೇನು?

ಪ್ರೇಮ ಕಲ್ಲಿನಷ್ಟೇ ಗಟ್ಟಿಯಂತೆ
ನೀರಿನಷ್ಟೇ ತಿಳಿಯಂತೆ
ಬೆಳದಿಂಗಳಿನಷ್ಟೇ ತಂಪಂತೆ ನಿಜವೇನು ?

ಪ್ರೇಮ ನಿನ್ನೆ ಇತ್ತು
ಇಂದು ಇದೆ
ನಾಳೆ ಇರುವುದು
ಅಳಿಯದೆ ಉಳಿವುದು
ಎನುವರು ನಿಜವೇನು?

ಇರಬಹುದು…
ಪ್ರೇಮ ಸೂರ್ಯನಂತಹ ಕುಲುಮೆ
ಪುಷ್ಪಗಳು ಅರಳುವವು ಅದುವೆ ಒಲುಮೆ

ಅವ್ವ ನೀಡಿದ ಕೈ ತುತ್ತು
ಅಪ್ಪ ಬಾರಿಸಿದ ಛಡಿಯೇಟು
ಕೆನ್ನೆಗೆ ನೀಡಿದ ಹೂಮುತ್ತು
ಕುಲ-ಗೋತ್ರ-ಜಾತಿ-ಮತ
ದಾಟುವ ಹಿಮ್ಮತ್ತು
ಎಲ್ಲವೂ ಪ್ರೇಮವೇ…

ಭಿಕ್ಕುವಿಗೆ ಬುದ್ಧನೇ ಪ್ರೇಮ ಸ್ವರೂಪ
ಅಕ್ಕನಿಗೆ ಕದಳಿಯೇ ಕೈಮರ
ದೇವರಿಗೆ ಬೆಳಗುವ ದೀಪ
ಭವಸಾಗರದಲ್ಲಿ ಮುಳುಗುವ ಶಾಪ
ಎಲ್ಲವೇ ಪ್ರೇಮವೇ…

ಪ್ರೇಮ ಎಂಬ ಪುಳಕ
ಅಣುರೇಣುವಿನಷ್ಟು ಸೂಕ್ಷ್ಮ
ಶಿವ ಶಿವೆಗಿತ್ತ ಭಸ್ಮ

ಪ್ರೇಮ ಪ್ರಕೃತಿ
ಅದು ಹೂವಾಗುತ್ತದೆ
ಅದು ಹಣ್ಣಾಗುತ್ತದೆ
ಮತ್ತೆ ಬೀಜವಾಗುತ್ತದೆ.

ಪ್ರೇಮ ಏನಲ್ಲ?
ಎನೂ ಅಲ್ಲ…ಎರಡಕ್ಕರ!

ಪ್ರೇಮ ಇಡೀ ಜಗವ ಆವರಿಸಿದೆ
ನಿನ್ನಲ್ಲಿ…ನನ್ನಲ್ಲಿ…ಪ್ರತಿಫಲಿಸಿದೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...