Home / ಕವನ / ಕವಿತೆ / ಏನದು ಪ್ರೇಮ?

ಏನದು ಪ್ರೇಮ?

ಏನದು ಪ್ರೇಮ…
ಅಪೂರ್ವವಾದ ವಸ್ತುವೆ
ಅಪರಿಮಿತವಾದ ಚೈತನ್ಯವೆ
ಅಸದೃಶ ಅನುಭೂತಿಯೆ?

ಏನದು ಪ್ರೇಮ…
ಜಾಜ್ವಲ್ಯಮಾನ ಬೆಳಕೆ
ಪರಮ ಪರಿಮಳದ ಹೂವೆ?

ಪ್ರೇಮಕ್ಕೆ ಸಪ್ತವರ್ಣವಂತೆ
ಮಕರಂದಕಿಂತಲೂ ಸಿಹಿಯಂತೆ
ನಿಜವೇನು?

ಪ್ರೇಮಕ್ಕೆ ನಕ್ಷತ್ರ ಖಚಿತ ಕಣ್ಣಂತೆ
ಮುತ್ತು ರತ್ನ ಹವಳದೊಡಲು
ವಿಸ್ಮಯದ ಕಡಲಂತೆ ನಿಜವೇನು?

ಪ್ರೇಮ ಕಲ್ಲಿನಷ್ಟೇ ಗಟ್ಟಿಯಂತೆ
ನೀರಿನಷ್ಟೇ ತಿಳಿಯಂತೆ
ಬೆಳದಿಂಗಳಿನಷ್ಟೇ ತಂಪಂತೆ ನಿಜವೇನು ?

ಪ್ರೇಮ ನಿನ್ನೆ ಇತ್ತು
ಇಂದು ಇದೆ
ನಾಳೆ ಇರುವುದು
ಅಳಿಯದೆ ಉಳಿವುದು
ಎನುವರು ನಿಜವೇನು?

ಇರಬಹುದು…
ಪ್ರೇಮ ಸೂರ್ಯನಂತಹ ಕುಲುಮೆ
ಪುಷ್ಪಗಳು ಅರಳುವವು ಅದುವೆ ಒಲುಮೆ

ಅವ್ವ ನೀಡಿದ ಕೈ ತುತ್ತು
ಅಪ್ಪ ಬಾರಿಸಿದ ಛಡಿಯೇಟು
ಕೆನ್ನೆಗೆ ನೀಡಿದ ಹೂಮುತ್ತು
ಕುಲ-ಗೋತ್ರ-ಜಾತಿ-ಮತ
ದಾಟುವ ಹಿಮ್ಮತ್ತು
ಎಲ್ಲವೂ ಪ್ರೇಮವೇ…

ಭಿಕ್ಕುವಿಗೆ ಬುದ್ಧನೇ ಪ್ರೇಮ ಸ್ವರೂಪ
ಅಕ್ಕನಿಗೆ ಕದಳಿಯೇ ಕೈಮರ
ದೇವರಿಗೆ ಬೆಳಗುವ ದೀಪ
ಭವಸಾಗರದಲ್ಲಿ ಮುಳುಗುವ ಶಾಪ
ಎಲ್ಲವೇ ಪ್ರೇಮವೇ…

ಪ್ರೇಮ ಎಂಬ ಪುಳಕ
ಅಣುರೇಣುವಿನಷ್ಟು ಸೂಕ್ಷ್ಮ
ಶಿವ ಶಿವೆಗಿತ್ತ ಭಸ್ಮ

ಪ್ರೇಮ ಪ್ರಕೃತಿ
ಅದು ಹೂವಾಗುತ್ತದೆ
ಅದು ಹಣ್ಣಾಗುತ್ತದೆ
ಮತ್ತೆ ಬೀಜವಾಗುತ್ತದೆ.

ಪ್ರೇಮ ಏನಲ್ಲ?
ಎನೂ ಅಲ್ಲ…ಎರಡಕ್ಕರ!

ಪ್ರೇಮ ಇಡೀ ಜಗವ ಆವರಿಸಿದೆ
ನಿನ್ನಲ್ಲಿ…ನನ್ನಲ್ಲಿ…ಪ್ರತಿಫಲಿಸಿದೆ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...