ನಮ್ಮಭಾಗ್ಯ

ಓ ನನ್ನ ಸೌಭಾಗ್ಯ!
ಇಲ್ಲಿಹುದು ನೋಡು ನಮ್ಮ ನಿಜ ಭಾಗ್ಯ
ನೋಡು! ಆಡು ಹಾಡು
ನೀನು ನೀನೇ ಆಗು.

ಆಗಸವ ತುಂಬಿವೆ
ಮದದಾನೆ ಹಿಂಡಂತೆ
ಗಾಂಭೀರ್‍ಯ, ಚೆಲುವಿನ ಬಿಳಿ ಮೋಡ ದಂಡು.

ಬೆಳಗುತಿಹವು
ಸುಮಂಗಲಿಯ ಕೊರಳ ಸರದ ಮುತ್ತು ಹವಳದಂತೆ
ಬೆಟ್ಟ ಗುಡ್ಡ ಸಾಲು

ವಾತ್ಸಲ್ಯ ತಾಯ ನೇವರಿಕೆಯಾಗಿ
ಪುಳಕವನು ತರುತಿಹುದು
ಅಪರೂಪ ಹೂ ಗಂಧ ಗಾಳಿ.
ಮಾನವನ ಬೆವರಿಗೆ
ಧರೆ ಪುಷ್ಪವತಿಯಾಗಿ
ಉದ್ದಕ್ಕೂ ನೆರೆದಿದೆ
ಹುಚ್ಚುಚ್ಚು ಹಸುರಿನ ಫಲಪೈರು.

ಸಂತಸದಿ ವಿಹರಿಸಲು ಬಂದ ಸುರಲೋಕ ಸುಂದರರು
ಈ ಪಕ್ಷಿ ಸಂಕುಲ
ಅದೆಷ್ಟು ರಮ್ಯ!
ಕೇಳುತಿರೆ, ಇವುಗಳ ಗಾನ, ಕೇಳಿಗಳ ಮಧುರ ಕಲರವ.
ತಾಯ ಮಡಿಲ ಚಿಣ್ಣರಾಟದಂತೆ
ಕಣ್ಣು ಕಟ್ಟುತಿಹುದು, ಈ ನೋಟ
ಈ ಪ್ರಾಣಿಗಳೆಲ್ಲದರ ಆಟ, ಚೆಲ್ಲಾಟ, ನಲಿದಾಟ

ಬಾ! ಬಾ! ಬೆಡಗಿ
ಇಲ್ಲಿವೆ ನೋಡು
ತರ ತರದ ಹೂವು
ಆರಿಸಿ ಕೊಡುವೆ
ಮುಡಿ ಬಾರೆ ನೀನು
ನಿನಗೆ ಬೇಕಾದ ಹೂವು
ಇದು ತಾರಲಿಲ್ಲವೆ ನಿನಗೆ ಸಂತಸ ಹಿಗ್ಗ
ಈಗ್ಹೇಳು
ಎಲ್ಲಿದೆ ಆ ನಿನ್ನ ಸ್ವರ್ಗ?
ನೋಡು! ನೋಡು!
ಇದು ನಮ್ಮ ಭಾಗ್ಯ! ಇದುವೆ ನಮ್ಮ ನಿಜ ಸೌಭಾಗ್ಯ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏನದು ಪ್ರೇಮ?
Next post ಕಳೆದು ಹೋದ ದಿನಗಳು

ಸಣ್ಣ ಕತೆ

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

cheap jordans|wholesale air max|wholesale jordans|wholesale jewelry|wholesale jerseys