ಕಳೆದು ಹೋದ ದಿನಗಳು

ಕಳೆದು ಹೋದ ದಿನಗಳೆ
ಕನಸಾಗಿ ಕಾಡದಿರಿ
ಉರುಳಿಹೋದ ಹಾಡುಗಳ
ಉರುಳಾಗಿ ಮಾಡದಿರಿ ||

ಕೈ ಬೀಸಿದ ಚಂದ್ರತಾರೆ
ಮಗಿಲಿನಾಚೆ ನಿಲ್ಲಲಿ
ಕವಿ ಮಾಡಿದ ಆ ಕೋಗಿಲೆ
ಕಾವ್ಯದಲ್ಲೆ ನೆಲೆಸಲಿ
ಬದುಕು ನಿತ್ಯ ಶ್ರಾವಣ
ಸುವರ್‍ಣದ ಹೂರಣ
ನೆನಪಾಗಿ ಬಾರದಿರಲಿ
ಚಿತ್ರವಾಗಿ ಕಾಡದಿರಲಿ

ಗಿರಿ ಪರ್‍ವತ ಹೂ ಹಸಿರು
ಹೊಸತು ಬಣ್ಣ ತಳೆಯಲಿ
ನೆಲೆದೊಡಲಿನ ಬಿಸಿಯುಸಿರು
ಕಾವ್ಯಕೆ ಬಸಿರಾಗಲಿ
ನಾಳೆ ಇರಲಿ ನಾಳೆಯಾಗಿ
ಭೂತವಿರಲಿ ನಿನ್ನೆಗೆ
ಬದುಕ ಪಯಣ ಸಾಗುವಲ್ಲಿ
ವರ್‍ತಮಾನ ಹಾಡಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಮ್ಮಭಾಗ್ಯ
Next post ನೋವು

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…