ಹೆಚ್ಚಾಗಲಿ ಆಯಸ್ಸು

ನೀವು ಶಿವಮೊಗ್ಗೆಯಲ್ಲಿದ್ದ ಹೊತ್ತು-
ನಾವು ಆಗ ತಾನೆ ಕಣ್ಣು ಬಿಟ್ಟಿದ್ದೆವು-ಪುಟ್ಟ ಸಸಿಗಳು

ಸಹ್ಯಾದ್ರಿಯ ಸಂಜೆ ಐದರ ಮಳೆಯಲ್ಲಿ
ತೇಲಿಬಿಟ್ಟ ಕಾಗದದ ದೋಣಿ
ಕೆಸರುಗಾಲಲ್ಲೆ ಲಾಗಾ ಹಾಕಿದ್ದೆವು!

ನೀವು ಕವಿಯೆಂದು, ನಿಮ್ಮ ಕರೆಯ ಮನ್ನಿಸಿ
ಸುರಿದ ಮಳೆಯೆಂದು ನಮಗೇನು ಗೊತ್ತು?

ಹಾಂ! ಮಳೆಯ ಅನಂತರ ಮೂಡಿತು ನೋಡಿ
ಬಣ್ಣದ ಕಾಮನ ಬಿಲ್ಲು-
ಮಾರನೆಯ ದಿನ ಹಚ್ಚ ಹಸುರು ಹುಲ್ಲಿನ ನಡುವೆ
ಲಕಲಕಿಸುವ ಹಳದಿ ಹೂವುಗಳು!

ನೀವು ಶಿವಮೊಗ್ಗೆಯಲ್ಲಿದ್ದ ಹೊತ್ತು-
ನಾವು ಆಗತಾನೆ ತೊದಲು ನುಡಿಯುತ್ತಿದ್ದೆವು-ಪುಟ್ಟ ಬಾಲಕಿಯರು

ನನ್ನೂರ ಜೋಗವ್ವ ಸಿರಿವಂತೆಯಾದಳು ನಿಮ್ಮಿಂದ
ತುಂಗೆಗೆ ಪ್ರಾಣ ತುಂಬಿದಿರಿ, ಬಾಗಿ ಬಳುಕಿದಳವಳು ಸ್ವಚ್ಛಂದ
ನೀವು ಕವಿಯೆಂದು, ಅದು ನಿಮ್ಮದೇ ಕವಿತೆಯೆಂದು….
……..ನಮಗೇನು ಗೊತ್ತು?

`ನೀ ನುಡಿಯದಿರಲೇನು…..ಬಯಲಾಗಿಹುದು ಎಲ್ಲ….’
ಕೇಳಿದವರು ತಲೆದೂಗುವಂತೆ ಹಾಡಿ ಗಿಟ್ಟಿಸಿದೆವು ಬಹುಮಾನ
‘ಕುರಿಗಳು, ಸಾರ್ ಕುರಿಗಳು….’ ನಿಮ್ಮದೇ ಪದ್ಯ ಛೂ ಬಿಟ್ಟು
ಕಳೆದೆವು ಹುಡುಗರ ಮಾನ

ಲಂಗ ದಾವಣಿಯ ಮೊಂಡು ಹುಡುಗಿಯರು ನಾವು-
ಸಭೆಗೆ ನಿಮ್ಮದೇ ಅಧ್ಯಕ್ಷತೆ, ಭಾಷಣ ಕೇಳುವ ಶಿಕ್ಷೆ!

ಹಿಂದಿನ ಬೆಂಚಿಗೆ ಆತು, ಮೂಲೆಯಲ್ಲೆಲ್ಲೋ ಕೂತು
ಕೋಟು-ಬೂಟಿನ ನಿಮ್ಮ ನಿತ್ಯ ವೇಷಕ್ಕೆ ಹ್ಯಾಟೂ ಕಲ್ಪಿಸಿ,
ಘನವಾದ ನಿಮ್ಮ ಪಂಡಿತ ಕನ್ನಡ ಭಾಷಣಕ್ಕೆ
ಕಚ್ಚೆ-ಪಂಚೆ, ಜುಬ್ಬಾ ಹೊಲಿಸಿ, ನಾಮ ಎಳೆದು
ಮುಸಿ ಮುಸಿ ನಕ್ಕಿದ್ದೆವು!

`ನಿಮ್ಮೊಡನಿದ್ದೂ ನಿಮ್ಮಂತಾಗದೆ….’
ತೆಗೆದುಕೊಳ್ಳಿ ನಿಮ್ಮ ಮಾತು ವಾಪಸ್ಸು
ನಮ್ಮೊಡನಿರಿ ಸದಾ ಹೆಚ್ಚಾಗಲಿ ಆಯಸ್ಸು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗ್ರಹಕಥಾ
Next post ಅಸಹಾಯಕತೆ

ಸಣ್ಣ ಕತೆ

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

cheap jordans|wholesale air max|wholesale jordans|wholesale jewelry|wholesale jerseys