Home / ಕವನ / ಕವಿತೆ / ಹೆಚ್ಚಾಗಲಿ ಆಯಸ್ಸು

ಹೆಚ್ಚಾಗಲಿ ಆಯಸ್ಸು

ನೀವು ಶಿವಮೊಗ್ಗೆಯಲ್ಲಿದ್ದ ಹೊತ್ತು-
ನಾವು ಆಗ ತಾನೆ ಕಣ್ಣು ಬಿಟ್ಟಿದ್ದೆವು-ಪುಟ್ಟ ಸಸಿಗಳು

ಸಹ್ಯಾದ್ರಿಯ ಸಂಜೆ ಐದರ ಮಳೆಯಲ್ಲಿ
ತೇಲಿಬಿಟ್ಟ ಕಾಗದದ ದೋಣಿ
ಕೆಸರುಗಾಲಲ್ಲೆ ಲಾಗಾ ಹಾಕಿದ್ದೆವು!

ನೀವು ಕವಿಯೆಂದು, ನಿಮ್ಮ ಕರೆಯ ಮನ್ನಿಸಿ
ಸುರಿದ ಮಳೆಯೆಂದು ನಮಗೇನು ಗೊತ್ತು?

ಹಾಂ! ಮಳೆಯ ಅನಂತರ ಮೂಡಿತು ನೋಡಿ
ಬಣ್ಣದ ಕಾಮನ ಬಿಲ್ಲು-
ಮಾರನೆಯ ದಿನ ಹಚ್ಚ ಹಸುರು ಹುಲ್ಲಿನ ನಡುವೆ
ಲಕಲಕಿಸುವ ಹಳದಿ ಹೂವುಗಳು!

ನೀವು ಶಿವಮೊಗ್ಗೆಯಲ್ಲಿದ್ದ ಹೊತ್ತು-
ನಾವು ಆಗತಾನೆ ತೊದಲು ನುಡಿಯುತ್ತಿದ್ದೆವು-ಪುಟ್ಟ ಬಾಲಕಿಯರು

ನನ್ನೂರ ಜೋಗವ್ವ ಸಿರಿವಂತೆಯಾದಳು ನಿಮ್ಮಿಂದ
ತುಂಗೆಗೆ ಪ್ರಾಣ ತುಂಬಿದಿರಿ, ಬಾಗಿ ಬಳುಕಿದಳವಳು ಸ್ವಚ್ಛಂದ
ನೀವು ಕವಿಯೆಂದು, ಅದು ನಿಮ್ಮದೇ ಕವಿತೆಯೆಂದು….
……..ನಮಗೇನು ಗೊತ್ತು?

`ನೀ ನುಡಿಯದಿರಲೇನು…..ಬಯಲಾಗಿಹುದು ಎಲ್ಲ….’
ಕೇಳಿದವರು ತಲೆದೂಗುವಂತೆ ಹಾಡಿ ಗಿಟ್ಟಿಸಿದೆವು ಬಹುಮಾನ
‘ಕುರಿಗಳು, ಸಾರ್ ಕುರಿಗಳು….’ ನಿಮ್ಮದೇ ಪದ್ಯ ಛೂ ಬಿಟ್ಟು
ಕಳೆದೆವು ಹುಡುಗರ ಮಾನ

ಲಂಗ ದಾವಣಿಯ ಮೊಂಡು ಹುಡುಗಿಯರು ನಾವು-
ಸಭೆಗೆ ನಿಮ್ಮದೇ ಅಧ್ಯಕ್ಷತೆ, ಭಾಷಣ ಕೇಳುವ ಶಿಕ್ಷೆ!

ಹಿಂದಿನ ಬೆಂಚಿಗೆ ಆತು, ಮೂಲೆಯಲ್ಲೆಲ್ಲೋ ಕೂತು
ಕೋಟು-ಬೂಟಿನ ನಿಮ್ಮ ನಿತ್ಯ ವೇಷಕ್ಕೆ ಹ್ಯಾಟೂ ಕಲ್ಪಿಸಿ,
ಘನವಾದ ನಿಮ್ಮ ಪಂಡಿತ ಕನ್ನಡ ಭಾಷಣಕ್ಕೆ
ಕಚ್ಚೆ-ಪಂಚೆ, ಜುಬ್ಬಾ ಹೊಲಿಸಿ, ನಾಮ ಎಳೆದು
ಮುಸಿ ಮುಸಿ ನಕ್ಕಿದ್ದೆವು!

`ನಿಮ್ಮೊಡನಿದ್ದೂ ನಿಮ್ಮಂತಾಗದೆ….’
ತೆಗೆದುಕೊಳ್ಳಿ ನಿಮ್ಮ ಮಾತು ವಾಪಸ್ಸು
ನಮ್ಮೊಡನಿರಿ ಸದಾ ಹೆಚ್ಚಾಗಲಿ ಆಯಸ್ಸು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...