Home / ಕವನ / ಕವಿತೆ / ಹೆಚ್ಚಾಗಲಿ ಆಯಸ್ಸು

ಹೆಚ್ಚಾಗಲಿ ಆಯಸ್ಸು

ನೀವು ಶಿವಮೊಗ್ಗೆಯಲ್ಲಿದ್ದ ಹೊತ್ತು-
ನಾವು ಆಗ ತಾನೆ ಕಣ್ಣು ಬಿಟ್ಟಿದ್ದೆವು-ಪುಟ್ಟ ಸಸಿಗಳು

ಸಹ್ಯಾದ್ರಿಯ ಸಂಜೆ ಐದರ ಮಳೆಯಲ್ಲಿ
ತೇಲಿಬಿಟ್ಟ ಕಾಗದದ ದೋಣಿ
ಕೆಸರುಗಾಲಲ್ಲೆ ಲಾಗಾ ಹಾಕಿದ್ದೆವು!

ನೀವು ಕವಿಯೆಂದು, ನಿಮ್ಮ ಕರೆಯ ಮನ್ನಿಸಿ
ಸುರಿದ ಮಳೆಯೆಂದು ನಮಗೇನು ಗೊತ್ತು?

ಹಾಂ! ಮಳೆಯ ಅನಂತರ ಮೂಡಿತು ನೋಡಿ
ಬಣ್ಣದ ಕಾಮನ ಬಿಲ್ಲು-
ಮಾರನೆಯ ದಿನ ಹಚ್ಚ ಹಸುರು ಹುಲ್ಲಿನ ನಡುವೆ
ಲಕಲಕಿಸುವ ಹಳದಿ ಹೂವುಗಳು!

ನೀವು ಶಿವಮೊಗ್ಗೆಯಲ್ಲಿದ್ದ ಹೊತ್ತು-
ನಾವು ಆಗತಾನೆ ತೊದಲು ನುಡಿಯುತ್ತಿದ್ದೆವು-ಪುಟ್ಟ ಬಾಲಕಿಯರು

ನನ್ನೂರ ಜೋಗವ್ವ ಸಿರಿವಂತೆಯಾದಳು ನಿಮ್ಮಿಂದ
ತುಂಗೆಗೆ ಪ್ರಾಣ ತುಂಬಿದಿರಿ, ಬಾಗಿ ಬಳುಕಿದಳವಳು ಸ್ವಚ್ಛಂದ
ನೀವು ಕವಿಯೆಂದು, ಅದು ನಿಮ್ಮದೇ ಕವಿತೆಯೆಂದು….
……..ನಮಗೇನು ಗೊತ್ತು?

`ನೀ ನುಡಿಯದಿರಲೇನು…..ಬಯಲಾಗಿಹುದು ಎಲ್ಲ….’
ಕೇಳಿದವರು ತಲೆದೂಗುವಂತೆ ಹಾಡಿ ಗಿಟ್ಟಿಸಿದೆವು ಬಹುಮಾನ
‘ಕುರಿಗಳು, ಸಾರ್ ಕುರಿಗಳು….’ ನಿಮ್ಮದೇ ಪದ್ಯ ಛೂ ಬಿಟ್ಟು
ಕಳೆದೆವು ಹುಡುಗರ ಮಾನ

ಲಂಗ ದಾವಣಿಯ ಮೊಂಡು ಹುಡುಗಿಯರು ನಾವು-
ಸಭೆಗೆ ನಿಮ್ಮದೇ ಅಧ್ಯಕ್ಷತೆ, ಭಾಷಣ ಕೇಳುವ ಶಿಕ್ಷೆ!

ಹಿಂದಿನ ಬೆಂಚಿಗೆ ಆತು, ಮೂಲೆಯಲ್ಲೆಲ್ಲೋ ಕೂತು
ಕೋಟು-ಬೂಟಿನ ನಿಮ್ಮ ನಿತ್ಯ ವೇಷಕ್ಕೆ ಹ್ಯಾಟೂ ಕಲ್ಪಿಸಿ,
ಘನವಾದ ನಿಮ್ಮ ಪಂಡಿತ ಕನ್ನಡ ಭಾಷಣಕ್ಕೆ
ಕಚ್ಚೆ-ಪಂಚೆ, ಜುಬ್ಬಾ ಹೊಲಿಸಿ, ನಾಮ ಎಳೆದು
ಮುಸಿ ಮುಸಿ ನಕ್ಕಿದ್ದೆವು!

`ನಿಮ್ಮೊಡನಿದ್ದೂ ನಿಮ್ಮಂತಾಗದೆ….’
ತೆಗೆದುಕೊಳ್ಳಿ ನಿಮ್ಮ ಮಾತು ವಾಪಸ್ಸು
ನಮ್ಮೊಡನಿರಿ ಸದಾ ಹೆಚ್ಚಾಗಲಿ ಆಯಸ್ಸು.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...