Home / ಕವನ / ಕವಿತೆ / ಹೆಚ್ಚಾಗಲಿ ಆಯಸ್ಸು

ಹೆಚ್ಚಾಗಲಿ ಆಯಸ್ಸು

ನೀವು ಶಿವಮೊಗ್ಗೆಯಲ್ಲಿದ್ದ ಹೊತ್ತು-
ನಾವು ಆಗ ತಾನೆ ಕಣ್ಣು ಬಿಟ್ಟಿದ್ದೆವು-ಪುಟ್ಟ ಸಸಿಗಳು

ಸಹ್ಯಾದ್ರಿಯ ಸಂಜೆ ಐದರ ಮಳೆಯಲ್ಲಿ
ತೇಲಿಬಿಟ್ಟ ಕಾಗದದ ದೋಣಿ
ಕೆಸರುಗಾಲಲ್ಲೆ ಲಾಗಾ ಹಾಕಿದ್ದೆವು!

ನೀವು ಕವಿಯೆಂದು, ನಿಮ್ಮ ಕರೆಯ ಮನ್ನಿಸಿ
ಸುರಿದ ಮಳೆಯೆಂದು ನಮಗೇನು ಗೊತ್ತು?

ಹಾಂ! ಮಳೆಯ ಅನಂತರ ಮೂಡಿತು ನೋಡಿ
ಬಣ್ಣದ ಕಾಮನ ಬಿಲ್ಲು-
ಮಾರನೆಯ ದಿನ ಹಚ್ಚ ಹಸುರು ಹುಲ್ಲಿನ ನಡುವೆ
ಲಕಲಕಿಸುವ ಹಳದಿ ಹೂವುಗಳು!

ನೀವು ಶಿವಮೊಗ್ಗೆಯಲ್ಲಿದ್ದ ಹೊತ್ತು-
ನಾವು ಆಗತಾನೆ ತೊದಲು ನುಡಿಯುತ್ತಿದ್ದೆವು-ಪುಟ್ಟ ಬಾಲಕಿಯರು

ನನ್ನೂರ ಜೋಗವ್ವ ಸಿರಿವಂತೆಯಾದಳು ನಿಮ್ಮಿಂದ
ತುಂಗೆಗೆ ಪ್ರಾಣ ತುಂಬಿದಿರಿ, ಬಾಗಿ ಬಳುಕಿದಳವಳು ಸ್ವಚ್ಛಂದ
ನೀವು ಕವಿಯೆಂದು, ಅದು ನಿಮ್ಮದೇ ಕವಿತೆಯೆಂದು….
……..ನಮಗೇನು ಗೊತ್ತು?

`ನೀ ನುಡಿಯದಿರಲೇನು…..ಬಯಲಾಗಿಹುದು ಎಲ್ಲ….’
ಕೇಳಿದವರು ತಲೆದೂಗುವಂತೆ ಹಾಡಿ ಗಿಟ್ಟಿಸಿದೆವು ಬಹುಮಾನ
‘ಕುರಿಗಳು, ಸಾರ್ ಕುರಿಗಳು….’ ನಿಮ್ಮದೇ ಪದ್ಯ ಛೂ ಬಿಟ್ಟು
ಕಳೆದೆವು ಹುಡುಗರ ಮಾನ

ಲಂಗ ದಾವಣಿಯ ಮೊಂಡು ಹುಡುಗಿಯರು ನಾವು-
ಸಭೆಗೆ ನಿಮ್ಮದೇ ಅಧ್ಯಕ್ಷತೆ, ಭಾಷಣ ಕೇಳುವ ಶಿಕ್ಷೆ!

ಹಿಂದಿನ ಬೆಂಚಿಗೆ ಆತು, ಮೂಲೆಯಲ್ಲೆಲ್ಲೋ ಕೂತು
ಕೋಟು-ಬೂಟಿನ ನಿಮ್ಮ ನಿತ್ಯ ವೇಷಕ್ಕೆ ಹ್ಯಾಟೂ ಕಲ್ಪಿಸಿ,
ಘನವಾದ ನಿಮ್ಮ ಪಂಡಿತ ಕನ್ನಡ ಭಾಷಣಕ್ಕೆ
ಕಚ್ಚೆ-ಪಂಚೆ, ಜುಬ್ಬಾ ಹೊಲಿಸಿ, ನಾಮ ಎಳೆದು
ಮುಸಿ ಮುಸಿ ನಕ್ಕಿದ್ದೆವು!

`ನಿಮ್ಮೊಡನಿದ್ದೂ ನಿಮ್ಮಂತಾಗದೆ….’
ತೆಗೆದುಕೊಳ್ಳಿ ನಿಮ್ಮ ಮಾತು ವಾಪಸ್ಸು
ನಮ್ಮೊಡನಿರಿ ಸದಾ ಹೆಚ್ಚಾಗಲಿ ಆಯಸ್ಸು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...