ಹಕ್ಕಿಗಳ ರೋದನ

ಎಲ್ಲಿ ಹೋಗಲಿ ಹೇಗೆ ಬದುಕಲಿ
ಎಲ್ಲಿ ಹಾಡಲಿ ಎಲ್ಲಿ ನಲಿಯಲಿ
ನಮ್ಮ ಕನಸುಗಳಿಗೆ ಕಿಚ್ಚು ಇಟ್ಟರು
ಬದುಕಿನೊಂದಿಗೆ ಇವರ ಚೆಲ್ಲಾಟ

ಬಂಗಲೆಗಳಲ್ಲ ಅರಮನೆಗಳಲ್ಲ
ಪ್ರಕೃತಿಯೇ ನಮ್ಮ ಮಡಿಲು
ನಮ್ಮಷ್ಟಕ್ಕೆ ನಮ್ಮನ್ನು ಬಿಡಿ ಬದುಕಲು
ಕೇಳುವವರ್‍ಯಾರು ನಮ್ಮ ಆಕ್ರಂದನ

ಅಪ್ಪಚ್ಚಿಯಾದ ಮರಿಗಳೆಷ್ಟೋ
ಚೂರು ಚೂರಾದ ತತ್ತಿಗಳೆಷ್ಟೋ
ಗೂಡ ಕಟ್ಟಲೆಲ್ಲಿ ಮರಿ ಮಾಡಲೆಲ್ಲಿ?
ಎಲ್ಲಿ ಹಾಡಲಿ ಜೋಗುಳವ

ಹಸಿರುಸಿರೇ ನಮ್ಮ ಜೀವ
ಕುತ್ತು ತಂದರು ಪ್ರಾಣವಾಯುವಿಗೆ
ಬಂದಿತು ಸಂಚಕಾರ ನಮ್ಮ ನೆಲೆಗೆ
ಪರಿಸರವಾದಿಗಳಲ್ಲಿ ಅಡಗಿಹರು?

ಸಾಲು ಮರದ ತಿಮ್ಮಕ್ಕನೇ
ಬಾ ನೋಡಿಲ್ಲಿ-
ಕರಗಸ ಕತ್ತಿ ಕೊಡಲಿ
ಯಮದೂತರ ಅಟ್ಟಹಾಸ

ರಸ್ತೆ ಅಗಲೀಕರಣದಲಿ
ನಿತ್ಯ ನಡೆಸುತಿಹರು
ಸಾಲು ಮರಗಳ ಮಾರಣ ಹೋಮ
ಆಗುವುದು ಪ್ರಕೃತಿ ವಿಕೃತಿ

ಇನ್ನೆಲ್ಲಿಯ ಚಿಲಿಪಿಲಿ ಕಲರವ
ಬೆಳ್ಳಿಚುಕ್ಕಿ ಮೂಡುವುದೆಂತು
ಕನಸುಗಳ ಕಟ್ಟುವವರ್‍ಯಾರು?
ರೋದನವ ಕೇಳುವವರಾರು?
*****
೨೭ ಮೇ ೨೦೧೦ ರ ಸುಧಾದಲ್ಲಿನ ಎಳೆಯರ ಅಂಗಳದಲ್ಲಿ ಪ್ರಕಟ
೬-೬-೨೦೧೦ ರ ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದಲ್ಲಿ ಪ್ರಕಟ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾಲು
Next post ಹೆಂಡತಿ

ಸಣ್ಣ ಕತೆ

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…