ಹಕ್ಕಿಗಳ ರೋದನ

ಎಲ್ಲಿ ಹೋಗಲಿ ಹೇಗೆ ಬದುಕಲಿ
ಎಲ್ಲಿ ಹಾಡಲಿ ಎಲ್ಲಿ ನಲಿಯಲಿ
ನಮ್ಮ ಕನಸುಗಳಿಗೆ ಕಿಚ್ಚು ಇಟ್ಟರು
ಬದುಕಿನೊಂದಿಗೆ ಇವರ ಚೆಲ್ಲಾಟ

ಬಂಗಲೆಗಳಲ್ಲ ಅರಮನೆಗಳಲ್ಲ
ಪ್ರಕೃತಿಯೇ ನಮ್ಮ ಮಡಿಲು
ನಮ್ಮಷ್ಟಕ್ಕೆ ನಮ್ಮನ್ನು ಬಿಡಿ ಬದುಕಲು
ಕೇಳುವವರ್‍ಯಾರು ನಮ್ಮ ಆಕ್ರಂದನ

ಅಪ್ಪಚ್ಚಿಯಾದ ಮರಿಗಳೆಷ್ಟೋ
ಚೂರು ಚೂರಾದ ತತ್ತಿಗಳೆಷ್ಟೋ
ಗೂಡ ಕಟ್ಟಲೆಲ್ಲಿ ಮರಿ ಮಾಡಲೆಲ್ಲಿ?
ಎಲ್ಲಿ ಹಾಡಲಿ ಜೋಗುಳವ

ಹಸಿರುಸಿರೇ ನಮ್ಮ ಜೀವ
ಕುತ್ತು ತಂದರು ಪ್ರಾಣವಾಯುವಿಗೆ
ಬಂದಿತು ಸಂಚಕಾರ ನಮ್ಮ ನೆಲೆಗೆ
ಪರಿಸರವಾದಿಗಳಲ್ಲಿ ಅಡಗಿಹರು?

ಸಾಲು ಮರದ ತಿಮ್ಮಕ್ಕನೇ
ಬಾ ನೋಡಿಲ್ಲಿ-
ಕರಗಸ ಕತ್ತಿ ಕೊಡಲಿ
ಯಮದೂತರ ಅಟ್ಟಹಾಸ

ರಸ್ತೆ ಅಗಲೀಕರಣದಲಿ
ನಿತ್ಯ ನಡೆಸುತಿಹರು
ಸಾಲು ಮರಗಳ ಮಾರಣ ಹೋಮ
ಆಗುವುದು ಪ್ರಕೃತಿ ವಿಕೃತಿ

ಇನ್ನೆಲ್ಲಿಯ ಚಿಲಿಪಿಲಿ ಕಲರವ
ಬೆಳ್ಳಿಚುಕ್ಕಿ ಮೂಡುವುದೆಂತು
ಕನಸುಗಳ ಕಟ್ಟುವವರ್‍ಯಾರು?
ರೋದನವ ಕೇಳುವವರಾರು?
*****
೨೭ ಮೇ ೨೦೧೦ ರ ಸುಧಾದಲ್ಲಿನ ಎಳೆಯರ ಅಂಗಳದಲ್ಲಿ ಪ್ರಕಟ
೬-೬-೨೦೧೦ ರ ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದಲ್ಲಿ ಪ್ರಕಟ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾಲು
Next post ಹೆಂಡತಿ

ಸಣ್ಣ ಕತೆ

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…