ಹಕ್ಕಿಗಳ ರೋದನ

ಎಲ್ಲಿ ಹೋಗಲಿ ಹೇಗೆ ಬದುಕಲಿ
ಎಲ್ಲಿ ಹಾಡಲಿ ಎಲ್ಲಿ ನಲಿಯಲಿ
ನಮ್ಮ ಕನಸುಗಳಿಗೆ ಕಿಚ್ಚು ಇಟ್ಟರು
ಬದುಕಿನೊಂದಿಗೆ ಇವರ ಚೆಲ್ಲಾಟ

ಬಂಗಲೆಗಳಲ್ಲ ಅರಮನೆಗಳಲ್ಲ
ಪ್ರಕೃತಿಯೇ ನಮ್ಮ ಮಡಿಲು
ನಮ್ಮಷ್ಟಕ್ಕೆ ನಮ್ಮನ್ನು ಬಿಡಿ ಬದುಕಲು
ಕೇಳುವವರ್‍ಯಾರು ನಮ್ಮ ಆಕ್ರಂದನ

ಅಪ್ಪಚ್ಚಿಯಾದ ಮರಿಗಳೆಷ್ಟೋ
ಚೂರು ಚೂರಾದ ತತ್ತಿಗಳೆಷ್ಟೋ
ಗೂಡ ಕಟ್ಟಲೆಲ್ಲಿ ಮರಿ ಮಾಡಲೆಲ್ಲಿ?
ಎಲ್ಲಿ ಹಾಡಲಿ ಜೋಗುಳವ

ಹಸಿರುಸಿರೇ ನಮ್ಮ ಜೀವ
ಕುತ್ತು ತಂದರು ಪ್ರಾಣವಾಯುವಿಗೆ
ಬಂದಿತು ಸಂಚಕಾರ ನಮ್ಮ ನೆಲೆಗೆ
ಪರಿಸರವಾದಿಗಳಲ್ಲಿ ಅಡಗಿಹರು?

ಸಾಲು ಮರದ ತಿಮ್ಮಕ್ಕನೇ
ಬಾ ನೋಡಿಲ್ಲಿ-
ಕರಗಸ ಕತ್ತಿ ಕೊಡಲಿ
ಯಮದೂತರ ಅಟ್ಟಹಾಸ

ರಸ್ತೆ ಅಗಲೀಕರಣದಲಿ
ನಿತ್ಯ ನಡೆಸುತಿಹರು
ಸಾಲು ಮರಗಳ ಮಾರಣ ಹೋಮ
ಆಗುವುದು ಪ್ರಕೃತಿ ವಿಕೃತಿ

ಇನ್ನೆಲ್ಲಿಯ ಚಿಲಿಪಿಲಿ ಕಲರವ
ಬೆಳ್ಳಿಚುಕ್ಕಿ ಮೂಡುವುದೆಂತು
ಕನಸುಗಳ ಕಟ್ಟುವವರ್‍ಯಾರು?
ರೋದನವ ಕೇಳುವವರಾರು?
*****
೨೭ ಮೇ ೨೦೧೦ ರ ಸುಧಾದಲ್ಲಿನ ಎಳೆಯರ ಅಂಗಳದಲ್ಲಿ ಪ್ರಕಟ
೬-೬-೨೦೧೦ ರ ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದಲ್ಲಿ ಪ್ರಕಟ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾಲು
Next post ಹೆಂಡತಿ

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

cheap jordans|wholesale air max|wholesale jordans|wholesale jewelry|wholesale jerseys