Home / ಕವನ / ಕವಿತೆ / ಹಕ್ಕಿಗಳ ರೋದನ

ಹಕ್ಕಿಗಳ ರೋದನ

ಎಲ್ಲಿ ಹೋಗಲಿ ಹೇಗೆ ಬದುಕಲಿ
ಎಲ್ಲಿ ಹಾಡಲಿ ಎಲ್ಲಿ ನಲಿಯಲಿ
ನಮ್ಮ ಕನಸುಗಳಿಗೆ ಕಿಚ್ಚು ಇಟ್ಟರು
ಬದುಕಿನೊಂದಿಗೆ ಇವರ ಚೆಲ್ಲಾಟ

ಬಂಗಲೆಗಳಲ್ಲ ಅರಮನೆಗಳಲ್ಲ
ಪ್ರಕೃತಿಯೇ ನಮ್ಮ ಮಡಿಲು
ನಮ್ಮಷ್ಟಕ್ಕೆ ನಮ್ಮನ್ನು ಬಿಡಿ ಬದುಕಲು
ಕೇಳುವವರ್‍ಯಾರು ನಮ್ಮ ಆಕ್ರಂದನ

ಅಪ್ಪಚ್ಚಿಯಾದ ಮರಿಗಳೆಷ್ಟೋ
ಚೂರು ಚೂರಾದ ತತ್ತಿಗಳೆಷ್ಟೋ
ಗೂಡ ಕಟ್ಟಲೆಲ್ಲಿ ಮರಿ ಮಾಡಲೆಲ್ಲಿ?
ಎಲ್ಲಿ ಹಾಡಲಿ ಜೋಗುಳವ

ಹಸಿರುಸಿರೇ ನಮ್ಮ ಜೀವ
ಕುತ್ತು ತಂದರು ಪ್ರಾಣವಾಯುವಿಗೆ
ಬಂದಿತು ಸಂಚಕಾರ ನಮ್ಮ ನೆಲೆಗೆ
ಪರಿಸರವಾದಿಗಳಲ್ಲಿ ಅಡಗಿಹರು?

ಸಾಲು ಮರದ ತಿಮ್ಮಕ್ಕನೇ
ಬಾ ನೋಡಿಲ್ಲಿ-
ಕರಗಸ ಕತ್ತಿ ಕೊಡಲಿ
ಯಮದೂತರ ಅಟ್ಟಹಾಸ

ರಸ್ತೆ ಅಗಲೀಕರಣದಲಿ
ನಿತ್ಯ ನಡೆಸುತಿಹರು
ಸಾಲು ಮರಗಳ ಮಾರಣ ಹೋಮ
ಆಗುವುದು ಪ್ರಕೃತಿ ವಿಕೃತಿ

ಇನ್ನೆಲ್ಲಿಯ ಚಿಲಿಪಿಲಿ ಕಲರವ
ಬೆಳ್ಳಿಚುಕ್ಕಿ ಮೂಡುವುದೆಂತು
ಕನಸುಗಳ ಕಟ್ಟುವವರ್‍ಯಾರು?
ರೋದನವ ಕೇಳುವವರಾರು?
*****
೨೭ ಮೇ ೨೦೧೦ ರ ಸುಧಾದಲ್ಲಿನ ಎಳೆಯರ ಅಂಗಳದಲ್ಲಿ ಪ್ರಕಟ
೬-೬-೨೦೧೦ ರ ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದಲ್ಲಿ ಪ್ರಕಟ.

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...