ಪ್ರಾರ್‍ಥನೆ

ಬಂಗಾರ ನೀರಿನಲಿ
ಬೆಳಗುತಿದೆ ಬೆಳಗು
ಮಂಜಿನ ತೆರೆಯಲಿ
ಈ ಹೂವು ಆ ಹಕ್ಕಿ ನಲಿಯುತಿರೆ
ನಯನ ಮನೋಹರ ವನಸಿರಿ
ದುಂಬಿಗೆ ಮಧು ಮಹೋತ್ಸವ
ಕನ್ನಡ ತೆನೆ ಹೊಯ್ದಾಡುತಿರೆ
ಕನ್ನಡ ಕಂಪ ಸೂಸುವಂಗೆ
ರಾಮನಾದರ್ಶ ಗಾಂಧೀಸತ್ಯ
ಭೀಮ ಬಲ ಕೊಡು ತಾಯೇ
ಮನವೆಂಬ ಮರ ಹೊತ್ತ
ಈ ದೇಹಕೆ ಜ್ಞಾನವೆಂಬ
ನೀರನುಣಿಸಿ ಬೆಳೆಸುತಾಯೇ
ದುಷ್ಟ ಶಕ್ತಿ ಮರ್ಧಿನಿಯೇ
ಕರುಣಿಸು ಚೇತನವ
ಈ ಜಗವೇ ಹೊತ್ತಿ ಉರಿಯಲಿ
ಕನ್ನಡ ತನವೆಣದೆಂದೂ ಚಿಮ್ಮುತಿರಲಿ
ಉಸಿರಾಗಲಿ ಕನ್ನಡ ದನಿಯಾಗಲಿ ಕನ್ನಡ
ಬದುಕಾಗಲಿ ಕನ್ನಡ ಮನಸ್ಸಾಗಲಿ ಕನ್ನಡ
ಮಾಧ್ಯಮವಾಗಲಿ ಕನ್ನಡ ನಿತ್ಯವಾಗಲಿ ಕನ್ನಡ
ಕನ್ನಡ ಬನದ ಮಕ್ಕಳು
ಸಹೃದಯದಿ ಬೇಡುವೆವು ತಾಯೇ
ಹರಸು ನಮ್ಮನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅರಳು-ಮರಳು
Next post ನನ್ನ ಹೆಂಡತಿ

ಸಣ್ಣ ಕತೆ

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

cheap jordans|wholesale air max|wholesale jordans|wholesale jewelry|wholesale jerseys