ಪ್ರಾರ್‍ಥನೆ

ಬಂಗಾರ ನೀರಿನಲಿ
ಬೆಳಗುತಿದೆ ಬೆಳಗು
ಮಂಜಿನ ತೆರೆಯಲಿ
ಈ ಹೂವು ಆ ಹಕ್ಕಿ ನಲಿಯುತಿರೆ
ನಯನ ಮನೋಹರ ವನಸಿರಿ
ದುಂಬಿಗೆ ಮಧು ಮಹೋತ್ಸವ
ಕನ್ನಡ ತೆನೆ ಹೊಯ್ದಾಡುತಿರೆ
ಕನ್ನಡ ಕಂಪ ಸೂಸುವಂಗೆ
ರಾಮನಾದರ್ಶ ಗಾಂಧೀಸತ್ಯ
ಭೀಮ ಬಲ ಕೊಡು ತಾಯೇ
ಮನವೆಂಬ ಮರ ಹೊತ್ತ
ಈ ದೇಹಕೆ ಜ್ಞಾನವೆಂಬ
ನೀರನುಣಿಸಿ ಬೆಳೆಸುತಾಯೇ
ದುಷ್ಟ ಶಕ್ತಿ ಮರ್ಧಿನಿಯೇ
ಕರುಣಿಸು ಚೇತನವ
ಈ ಜಗವೇ ಹೊತ್ತಿ ಉರಿಯಲಿ
ಕನ್ನಡ ತನವೆಣದೆಂದೂ ಚಿಮ್ಮುತಿರಲಿ
ಉಸಿರಾಗಲಿ ಕನ್ನಡ ದನಿಯಾಗಲಿ ಕನ್ನಡ
ಬದುಕಾಗಲಿ ಕನ್ನಡ ಮನಸ್ಸಾಗಲಿ ಕನ್ನಡ
ಮಾಧ್ಯಮವಾಗಲಿ ಕನ್ನಡ ನಿತ್ಯವಾಗಲಿ ಕನ್ನಡ
ಕನ್ನಡ ಬನದ ಮಕ್ಕಳು
ಸಹೃದಯದಿ ಬೇಡುವೆವು ತಾಯೇ
ಹರಸು ನಮ್ಮನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅರಳು-ಮರಳು
Next post ನನ್ನ ಹೆಂಡತಿ

ಸಣ್ಣ ಕತೆ

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…