ಪ್ರಾರ್‍ಥನೆ

ಬಂಗಾರ ನೀರಿನಲಿ
ಬೆಳಗುತಿದೆ ಬೆಳಗು
ಮಂಜಿನ ತೆರೆಯಲಿ
ಈ ಹೂವು ಆ ಹಕ್ಕಿ ನಲಿಯುತಿರೆ
ನಯನ ಮನೋಹರ ವನಸಿರಿ
ದುಂಬಿಗೆ ಮಧು ಮಹೋತ್ಸವ
ಕನ್ನಡ ತೆನೆ ಹೊಯ್ದಾಡುತಿರೆ
ಕನ್ನಡ ಕಂಪ ಸೂಸುವಂಗೆ
ರಾಮನಾದರ್ಶ ಗಾಂಧೀಸತ್ಯ
ಭೀಮ ಬಲ ಕೊಡು ತಾಯೇ
ಮನವೆಂಬ ಮರ ಹೊತ್ತ
ಈ ದೇಹಕೆ ಜ್ಞಾನವೆಂಬ
ನೀರನುಣಿಸಿ ಬೆಳೆಸುತಾಯೇ
ದುಷ್ಟ ಶಕ್ತಿ ಮರ್ಧಿನಿಯೇ
ಕರುಣಿಸು ಚೇತನವ
ಈ ಜಗವೇ ಹೊತ್ತಿ ಉರಿಯಲಿ
ಕನ್ನಡ ತನವೆಣದೆಂದೂ ಚಿಮ್ಮುತಿರಲಿ
ಉಸಿರಾಗಲಿ ಕನ್ನಡ ದನಿಯಾಗಲಿ ಕನ್ನಡ
ಬದುಕಾಗಲಿ ಕನ್ನಡ ಮನಸ್ಸಾಗಲಿ ಕನ್ನಡ
ಮಾಧ್ಯಮವಾಗಲಿ ಕನ್ನಡ ನಿತ್ಯವಾಗಲಿ ಕನ್ನಡ
ಕನ್ನಡ ಬನದ ಮಕ್ಕಳು
ಸಹೃದಯದಿ ಬೇಡುವೆವು ತಾಯೇ
ಹರಸು ನಮ್ಮನು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅರಳು-ಮರಳು
Next post ನನ್ನ ಹೆಂಡತಿ

ಸಣ್ಣ ಕತೆ

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…