ಎಂಥ ಚಂದದ
ಬಳ್ಳಿ ಬೆಳೆದಿಹುದಿಲ್ಲಿ
ಮೊಗ್ಗರಳಿ ಕನ್ನಡ
ಕಂಪು ಸೂಸುತಿಹುದಿಲ್ಲಿ
ತೊದಲು ನುಡಿಯಲಿ
ಪ್ರೀತಿಯೆಲ್ಲೆ ಮೀರಿಹುದಿಲ್ಲಿ
ಅವ್ವ ಅಪ್ಪ ಎಂದ್ಹೇಳಲು ಬಿಡದೆ
ಮಮ್ಮಿ ಡ್ಯಾಡಿ ಗೋ ಕಮ್ ಕಲಿಸಿ
ಚಿಗುರಿನ ಗೋಣ ಮುರಿವವರಿಲ್ಲಿ
ನಾಡು ನುಡಿಯ ಮೊಗ್ಗು
ಅರಳುವುದೆಂತು ಬಳ್ಳಿಯಲಿ
ವಿದ್ಯೆ ಕಲೆ ಸಂಸ್ಕೃತಿಯಲಿ
ಮೆರೆದಿಹ ನಾಡು
ಕನ್ನಡದ ಮೊಗ್ಗಿನ ಸೌಂದರ್ಯ
ಕನ್ನಡಿಗರಾಂತರ್ಯದಲ್ಲಿಹುದು
ಮನಕೊನರಿ ಸೆಟೆದು ನಿಂತರೆ
ಕನ್ನಡದ ಡಮರು ಮೊಳಗುವುದು
ಮಲ್ಲಿಗೀ ಮೊಗ್ಗುಗಳು
ಕನ್ನಡ ತಾಯ್ಗೊರಳ ಸರದಲಿ ಸಲುವವು
*****
೧-೯-೨೦೦೯ ರ ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದಲ್ಲಿ ಪ್ರಕಟ
Related Post
ಸಣ್ಣ ಕತೆ
-
ಕರೀಮನ ಪಿಟೀಲು
ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…
-
ಒಲವೆ ನಮ್ಮ ಬದುಕು
"The best of you is he who behaves best towards the members of his family" (The Holy Prophet) ವಾರದ ಸಂತೆ.… Read more…
-
ಕೊಳಲು ಉಳಿದಿದೆ
ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…
-
ತಿಥಿ
"ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…
-
ದೊಡ್ಡವರು
ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…