ಕೌರವ ಸಂತಾನದ
ಭ್ರಷ್ಟಾಚಾರ ಅನಾಚಾರಗಳ ಭಾರಕೆ
ನಲುಗಿಹಳು ವಸುಂಧರೆ
ಕುಸಿದಿವೆ ಕಟ್ಟಡಗಳು ಚಮೋಲಿಯಲಿ
ಹಾನಿಗೊಂಡಿವೆ ಮನೆ ಮಠಗಳು
ಅರಣ್ಯರೋದನ ದೃಶ್ಯಗಳು
ಚೇತರಿಸಿಕೊಳ್ಳುವ ಮೊದಲೇ
ಪುನಃ ಕಂಪಿಸಿದಳು ಚಮೋಲಿ
ದಿನಗಳು ಕಳೆದರೂ ಕೇಳುವವರಿಲ್ಲ
ಹಕ್ಕಿಗಳ ನೋವು ನಲುವಿನ ಹಾಡ
ಸಾಲದೆಂಬುದಕೆ ವರುಣನ ಅವಕೃಪೆ ಬೇರೆ
ಬದುಕಿ ಉಳಿದವರೆಷ್ಟೋ ತತ್ತರಿಸಿದವರೆಷ್ಟೋ
ಜೀವಂತ ಸಮಾಧಿಗಳೆಷ್ಟೋ
ಅಂಧಕಾರದ ನಾಡಿನಲಿ
ಅಮಲಿನ ಬಿಳಿ ಟೋಪಿ
ಬಿಳಿ ಆನೆಗಳ ಜೇಬು ತುಂಬುತಿಹುದು
ಸಂತ್ರಸ್ಥರ ಕಥೆ-ವ್ಯಥೆಯಲಿ
ಎದೆ ನಡುಗಿದೆ ಝಲ್ಲೆಂದಿದೆ
ಹಕ್ಕಿ-ಪಕ್ಕಿ ಕಾಕ-ಪಿಕಗಳ ದನಿ ಉಡುಗಿದೆ
ಗಿಡ-ಮರ ಬಳ್ಳಿಗಳು ರೋಧಿಸುತಿವೆ
ದುಃಖ ದುಮ್ಮಾನದಲಿ ಎಲ್ಲಿದೆ ಬೆಳಕು
ಪ್ರೀತಿ ಕರುಣೆಗಳಡಗಿಹವೆಲ್ಲೊ
ನೋವು ನಲಿವು ಮಣ್ಣೂಳಗೆ ಮಣ್ಣಾಗಿವೆ
*****
Related Post
ಸಣ್ಣ ಕತೆ
-
ನಾಗನ ವರಿಸಿದ ಬಿಂಬಾಲಿ…
ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…
-
ಆಪ್ತಮಿತ್ರ
ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…
-
ಮೌನರಾಗ
ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…
-
ಬಲಿ
ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…
-
ಹನುಮಂತನ ಕಥೆ
ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…