ಕೌರವ ಸಂತಾನದ
ಭ್ರಷ್ಟಾಚಾರ ಅನಾಚಾರಗಳ ಭಾರಕೆ
ನಲುಗಿಹಳು ವಸುಂಧರೆ
ಕುಸಿದಿವೆ ಕಟ್ಟಡಗಳು ಚಮೋಲಿಯಲಿ
ಹಾನಿಗೊಂಡಿವೆ ಮನೆ ಮಠಗಳು
ಅರಣ್ಯರೋದನ ದೃಶ್ಯಗಳು
ಚೇತರಿಸಿಕೊಳ್ಳುವ ಮೊದಲೇ
ಪುನಃ ಕಂಪಿಸಿದಳು ಚಮೋಲಿ
ದಿನಗಳು ಕಳೆದರೂ ಕೇಳುವವರಿಲ್ಲ
ಹಕ್ಕಿಗಳ ನೋವು ನಲುವಿನ ಹಾಡ
ಸಾಲದೆಂಬುದಕೆ ವರುಣನ ಅವಕೃಪೆ ಬೇರೆ
ಬದುಕಿ ಉಳಿದವರೆಷ್ಟೋ ತತ್ತರಿಸಿದವರೆಷ್ಟೋ
ಜೀವಂತ ಸಮಾಧಿಗಳೆಷ್ಟೋ
ಅಂಧಕಾರದ ನಾಡಿನಲಿ
ಅಮಲಿನ ಬಿಳಿ ಟೋಪಿ
ಬಿಳಿ ಆನೆಗಳ ಜೇಬು ತುಂಬುತಿಹುದು
ಸಂತ್ರಸ್ಥರ ಕಥೆ-ವ್ಯಥೆಯಲಿ
ಎದೆ ನಡುಗಿದೆ ಝಲ್ಲೆಂದಿದೆ
ಹಕ್ಕಿ-ಪಕ್ಕಿ ಕಾಕ-ಪಿಕಗಳ ದನಿ ಉಡುಗಿದೆ
ಗಿಡ-ಮರ ಬಳ್ಳಿಗಳು ರೋಧಿಸುತಿವೆ
ದುಃಖ ದುಮ್ಮಾನದಲಿ ಎಲ್ಲಿದೆ ಬೆಳಕು
ಪ್ರೀತಿ ಕರುಣೆಗಳಡಗಿಹವೆಲ್ಲೊ
ನೋವು ನಲಿವು ಮಣ್ಣೂಳಗೆ ಮಣ್ಣಾಗಿವೆ
*****
Related Post
ಸಣ್ಣ ಕತೆ
-
ನಂಬಿಕೆ
ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…
-
ಕೆಂಪು ಲುಂಗಿ
ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…
-
ಅಮ್ಮ
‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…
-
ಡಿಪೋದೊಳಗಣ ಕಿಚ್ಚು…
ಚಿತ್ರ: ವಾಲ್ಡೊಪೆಪರ್ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…
-
ಅವಳೇ ಅವಳು
ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…