ಅಗಲಿದ ಗೆಳೆಯನಿಗೊಂದು ಪತ್ರ

ಓ ಗೆಳೆಯಾ
ನನ್ನ ನಿನ್ನ ವಯಸ್ಸಿನ ಅಂತರ
ಅಜಗಜಾಂತರ ಆದರೂ!
ನೀನಾದಿ ಸ್ನೇಹ ಜೀವಿ

ಓ ಗೆಳೆಯಾ ನೀ ಹೋಗಿ
ಮಾಸಗಳಳಿದು ವರ್‍ಷಗಳುರುಳುತಿಹವು
ನೀನಡೆದಾಡುವಾಗಿನ ಆ ಊರುಗೋಲಿನ ಸಪ್ಪಳ
ಯಾರ ಮನದಲ್ಲೂ ಮಾಸಿಲ್ಲ

ನಿನ್ನ ಹೆಸರು ಸದಾ ಹಚ್ಚ ಹಸಿರು
ನಿನ್ನಾ ಕಾವ್ಯದಲಿ, ನಿನ್ನಾ ಕಾದಂಬರಿಯಲಿ

ಬೇದೂರು ಭಟ್ಟರ ಕಾರಿನಲಿ ಹಾಸನ
ಮಂಗಳೂರಿನ ಸಾಹಿತ್ಯ ಸಮ್ಮೇಳನಕೆ
ಹೋದ ನೆನಪು ಮತ್ತೆ ಬರತಾವೇನ?

ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮದಲಿ
ಮೊದಲನೇ ಕುರ್ಚಿ ಸಾರುತಿಹುದು ನಿನ್ನ ಇರುವಿಕೆಯ

ಅಭಿಮಾನಿ ಬಳಗವೊಂದು
ಮೊನ್ನೆ ನಡೆಸಿದ ಕವಿಗೋಷ್ಠಿಯಲಿ
ಹಿರಿಯ ಕಿರಿಯ ಕವಿಗಳು ವಾಚಿಸಿದ
ಕವನಗಳಲಿ ನಿಮ್ಮದೇ ಗುಣಗಾನ

ಸಾಗರದ ಗಾಂಧಿನಗರದಲ್ಲಿ
ನೀವಿದ್ದ ಮನೆಯ ರಸ್ತೆಗೆ
ನಿಮ್ಮ ಹೆಸರಿಡಲು ಒತ್ತಾಯಿಸಿದನೊಬ್ಬ
ಅಭಿಮಾನಿ ಸಭೆಯಲಿ

ಹೇಳು ಗೆಳೆಯಾ
ಅಲ್ಲಿ ಏನು ನಡೆಸಿದ್ದೀ? ಕಾದಂಬರಿ ಬರೆಯುತ್ತಿದ್ದೀ?
ಇಲ್ಲ, ಮಕ್ಕಳ ಕಥೆ ಬರೆಯುತ್ತಿದ್ದೀ?
ನಿನಗೆ ಬರುತ್ತಿಲ್ಲವೇ ನಮ್ಮೆಲ್ಲರ ನೆನಪು!

ಮಹಾಬಲೇಶ್ವರ ಭಟ್ಟ, ಪಂಪಣ್ಣ, ಸಿಜಿಕೆ,
ತಿರುಮಲ, ಸಾಕೆ, ವಿಟಿ ಇಲ್ಲಿ ಎಲ್ಲರೂ
ನನ್ನ ಕೇಳುತಿಹರು ‘ಹೇಗೆ ಇರುವರು ಉಡುಪರು’? ಎಂದು

ಮೌನವಾಚರಿಸದೇ ಉತ್ತರ ಬರೆ ಗೆಳೆಯ
ವಿಳಂಬಿಸದೇ ಉತ್ತರ ಬರೆ ಬೇಗ ಈ ಪತ್ರಕೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೇಮಿ
Next post ಗಂಡಸ್ಕತ್ರಿ

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…