Home / ಕವನ / ಕವಿತೆ / ಅಗಲಿದ ಗೆಳೆಯನಿಗೊಂದು ಪತ್ರ

ಅಗಲಿದ ಗೆಳೆಯನಿಗೊಂದು ಪತ್ರ

ಓ ಗೆಳೆಯಾ
ನನ್ನ ನಿನ್ನ ವಯಸ್ಸಿನ ಅಂತರ
ಅಜಗಜಾಂತರ ಆದರೂ!
ನೀನಾದಿ ಸ್ನೇಹ ಜೀವಿ

ಓ ಗೆಳೆಯಾ ನೀ ಹೋಗಿ
ಮಾಸಗಳಳಿದು ವರ್‍ಷಗಳುರುಳುತಿಹವು
ನೀನಡೆದಾಡುವಾಗಿನ ಆ ಊರುಗೋಲಿನ ಸಪ್ಪಳ
ಯಾರ ಮನದಲ್ಲೂ ಮಾಸಿಲ್ಲ

ನಿನ್ನ ಹೆಸರು ಸದಾ ಹಚ್ಚ ಹಸಿರು
ನಿನ್ನಾ ಕಾವ್ಯದಲಿ, ನಿನ್ನಾ ಕಾದಂಬರಿಯಲಿ

ಬೇದೂರು ಭಟ್ಟರ ಕಾರಿನಲಿ ಹಾಸನ
ಮಂಗಳೂರಿನ ಸಾಹಿತ್ಯ ಸಮ್ಮೇಳನಕೆ
ಹೋದ ನೆನಪು ಮತ್ತೆ ಬರತಾವೇನ?

ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮದಲಿ
ಮೊದಲನೇ ಕುರ್ಚಿ ಸಾರುತಿಹುದು ನಿನ್ನ ಇರುವಿಕೆಯ

ಅಭಿಮಾನಿ ಬಳಗವೊಂದು
ಮೊನ್ನೆ ನಡೆಸಿದ ಕವಿಗೋಷ್ಠಿಯಲಿ
ಹಿರಿಯ ಕಿರಿಯ ಕವಿಗಳು ವಾಚಿಸಿದ
ಕವನಗಳಲಿ ನಿಮ್ಮದೇ ಗುಣಗಾನ

ಸಾಗರದ ಗಾಂಧಿನಗರದಲ್ಲಿ
ನೀವಿದ್ದ ಮನೆಯ ರಸ್ತೆಗೆ
ನಿಮ್ಮ ಹೆಸರಿಡಲು ಒತ್ತಾಯಿಸಿದನೊಬ್ಬ
ಅಭಿಮಾನಿ ಸಭೆಯಲಿ

ಹೇಳು ಗೆಳೆಯಾ
ಅಲ್ಲಿ ಏನು ನಡೆಸಿದ್ದೀ? ಕಾದಂಬರಿ ಬರೆಯುತ್ತಿದ್ದೀ?
ಇಲ್ಲ, ಮಕ್ಕಳ ಕಥೆ ಬರೆಯುತ್ತಿದ್ದೀ?
ನಿನಗೆ ಬರುತ್ತಿಲ್ಲವೇ ನಮ್ಮೆಲ್ಲರ ನೆನಪು!

ಮಹಾಬಲೇಶ್ವರ ಭಟ್ಟ, ಪಂಪಣ್ಣ, ಸಿಜಿಕೆ,
ತಿರುಮಲ, ಸಾಕೆ, ವಿಟಿ ಇಲ್ಲಿ ಎಲ್ಲರೂ
ನನ್ನ ಕೇಳುತಿಹರು ‘ಹೇಗೆ ಇರುವರು ಉಡುಪರು’? ಎಂದು

ಮೌನವಾಚರಿಸದೇ ಉತ್ತರ ಬರೆ ಗೆಳೆಯ
ವಿಳಂಬಿಸದೇ ಉತ್ತರ ಬರೆ ಬೇಗ ಈ ಪತ್ರಕೆ!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...