Home / ಕವನ / ಕವಿತೆ / ಅಗಲಿದ ಗೆಳೆಯನಿಗೊಂದು ಪತ್ರ

ಅಗಲಿದ ಗೆಳೆಯನಿಗೊಂದು ಪತ್ರ

ಓ ಗೆಳೆಯಾ
ನನ್ನ ನಿನ್ನ ವಯಸ್ಸಿನ ಅಂತರ
ಅಜಗಜಾಂತರ ಆದರೂ!
ನೀನಾದಿ ಸ್ನೇಹ ಜೀವಿ

ಓ ಗೆಳೆಯಾ ನೀ ಹೋಗಿ
ಮಾಸಗಳಳಿದು ವರ್‍ಷಗಳುರುಳುತಿಹವು
ನೀನಡೆದಾಡುವಾಗಿನ ಆ ಊರುಗೋಲಿನ ಸಪ್ಪಳ
ಯಾರ ಮನದಲ್ಲೂ ಮಾಸಿಲ್ಲ

ನಿನ್ನ ಹೆಸರು ಸದಾ ಹಚ್ಚ ಹಸಿರು
ನಿನ್ನಾ ಕಾವ್ಯದಲಿ, ನಿನ್ನಾ ಕಾದಂಬರಿಯಲಿ

ಬೇದೂರು ಭಟ್ಟರ ಕಾರಿನಲಿ ಹಾಸನ
ಮಂಗಳೂರಿನ ಸಾಹಿತ್ಯ ಸಮ್ಮೇಳನಕೆ
ಹೋದ ನೆನಪು ಮತ್ತೆ ಬರತಾವೇನ?

ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮದಲಿ
ಮೊದಲನೇ ಕುರ್ಚಿ ಸಾರುತಿಹುದು ನಿನ್ನ ಇರುವಿಕೆಯ

ಅಭಿಮಾನಿ ಬಳಗವೊಂದು
ಮೊನ್ನೆ ನಡೆಸಿದ ಕವಿಗೋಷ್ಠಿಯಲಿ
ಹಿರಿಯ ಕಿರಿಯ ಕವಿಗಳು ವಾಚಿಸಿದ
ಕವನಗಳಲಿ ನಿಮ್ಮದೇ ಗುಣಗಾನ

ಸಾಗರದ ಗಾಂಧಿನಗರದಲ್ಲಿ
ನೀವಿದ್ದ ಮನೆಯ ರಸ್ತೆಗೆ
ನಿಮ್ಮ ಹೆಸರಿಡಲು ಒತ್ತಾಯಿಸಿದನೊಬ್ಬ
ಅಭಿಮಾನಿ ಸಭೆಯಲಿ

ಹೇಳು ಗೆಳೆಯಾ
ಅಲ್ಲಿ ಏನು ನಡೆಸಿದ್ದೀ? ಕಾದಂಬರಿ ಬರೆಯುತ್ತಿದ್ದೀ?
ಇಲ್ಲ, ಮಕ್ಕಳ ಕಥೆ ಬರೆಯುತ್ತಿದ್ದೀ?
ನಿನಗೆ ಬರುತ್ತಿಲ್ಲವೇ ನಮ್ಮೆಲ್ಲರ ನೆನಪು!

ಮಹಾಬಲೇಶ್ವರ ಭಟ್ಟ, ಪಂಪಣ್ಣ, ಸಿಜಿಕೆ,
ತಿರುಮಲ, ಸಾಕೆ, ವಿಟಿ ಇಲ್ಲಿ ಎಲ್ಲರೂ
ನನ್ನ ಕೇಳುತಿಹರು ‘ಹೇಗೆ ಇರುವರು ಉಡುಪರು’? ಎಂದು

ಮೌನವಾಚರಿಸದೇ ಉತ್ತರ ಬರೆ ಗೆಳೆಯ
ವಿಳಂಬಿಸದೇ ಉತ್ತರ ಬರೆ ಬೇಗ ಈ ಪತ್ರಕೆ!
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...